shivamogga police/ ಶಿವಮೊಗ್ಗದಲ್ಲಿ ಒಂದೇ ದಿನ , 7 ASI ಸೇರಿದಂತೆ 10 ಪೊಲೀಸ್​ ಸಿಬ್ಬಂದಿ ನಿವೃತ್ತಿ!

10 police personnel, including 7 ASI, retired in a single day in Shivamogga / shivamogga police

shivamogga police/ ಶಿವಮೊಗ್ಗದಲ್ಲಿ ಒಂದೇ ದಿನ , 7 ASI  ಸೇರಿದಂತೆ 10 ಪೊಲೀಸ್​ ಸಿಬ್ಬಂದಿ ನಿವೃತ್ತಿ!

KARNATAKA NEWS/ ONLINE / Malenadu today/ May 31, 2023 SHIVAMOGGA NEWS

ಶಿವಮೊಗ್ಗ/ ಜಿಲ್ಲೆಯ ವಿವಿಧ ಪೊಲೀಸ್ ಸ್ಟೇಷನ್​ಗಳಲ್ಲಿ ಇಲ್ಲಿವರೆಗೂ ಸೇವೆ ಸಲ್ಲಿಸಿದ್ದ ಐವರು ಎಎಸ್​ಐಗಳು ಇವತ್ತು ನಿವೃತ್ತಿಯಾಗುತ್ತಿದ್ದಾರೆ.  

ನಿವೃತ್ತರಾಗುತ್ತಿರುವ ಎಎಸ್​ಐಗಳು

  1. ದಾಸೇಗೌಡ ಎಎಸ್ಐ ಕುಂಸಿ ಪೊಲೀಸ್ ಠಾಣೆ,  
  2. ಅತೀಕ್ ಉರ್ ರೆಹಮಾನ್, ಎಎಸ್ಐ, ಬೆರಳು ಮುದ್ರೆ ಘಟಕ, ಶಿವಮೊಗ್ಗ 
  3. ಆರ್. ನಾಗರಾಜ್, ಎಎಸ್ಐ ಆಗುಂಬೆ ಪೊಲೀಸ್ ಠಾಣೆ,   
  4. ಪ್ರಭಾಕರ್. ಜಿ ಎಎಸ್ಐ ಶಿಕಾರಿಪುರ ಟೌನ್ ಪೊಲೀಸ್ ಠಾಣೆ,   
  5. ಯು. ಸದಾಶಿವಪ್ಪ, ಎಎಸ್ಐ ಶಿಕಾರಿಪುರ ಟೌನ್ ಪೊಲೀಸ್ ಠಾಣೆ,  
  6. ಬಿ.ಟಿ ತೀರ್ಥಲಿಂಗಪ್ಪ, ಎಎಸ್ಐ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ,  
  7. ಬಿ.ಇ ಸುರೇಶ್, ಎಎಸ್ಐ, ಕುಂಸಿ ಪೊಲೀಸ್ ಠಾಣೆ,

ನಿವೃತ್ತರಾಗುತ್ತಿರುವ ಸಿಬ್ಬಂದಿಗಳು!

  1. ಜೆ. ನಾಗರಾಜ್, ಸಿಹೆಚ್.ಸಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ, 
  2. ಯೋಗೇಂದ್ರ ಕೆ.ಎಸ್, ಸಿಪಿಸಿ ಆಗುಂಬೆ ಪೊಲೀಸ್ ಠಾಣೆ 
  3. ಶ್ರೀನಿವಾಸ ಜಿ. ಸಿಪಿಸಿ ಭದ್ರಾವತಿ ಸಂಚಾರ ಪೊಲೀಸ್ ಠಾಣೆ 

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿದ ಸಿಬ್ಬಂದಿ ಇವತ್ತು ವಯೋನಿವೃತ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಎಸ್​ಪಿ  ಮಿಥುನ್ ಕುಮಾರ್ ಜಿ. ಕೆ. ಐಪಿಎಸ್ ರವರು, ನೆನಪಿನ ಕಾಣಿಕೆಯನ್ನು ನೀಡಿ  ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಿದ್ದಾರೆ. 

mobile phone theft / ಬೈಕ್​ನಲ್ಲಿ ಬಂದು ಮೊಬೈಲ್​ ಕಿತ್ತುಕೊಂಡು ಹೋದ ಕಳ್ಳರು! ಶಿವಮೊಗ್ಗದಲ್ಲಿಯೇ ದಾಖಲಾಯ್ತು 2 ಕೇಸ್​ ! ಫೋನ್​ ಜಾಗ್ರತೆ!

ಶಿವಮೊಗ್ಗ ಕೆಲವು ತಿಂಗಳುಗಳ ನಂತರ ಶಿವಮೊಗ್ಗ ನಗರದಲ್ಲಿ ಮೊಬೈಲ್​ ಕಳ್ಳತನದ ಕೇಸ್​ಗಳು ದಾಖಲಾಗಿದೆ. ಬೈಕ್​ನಲ್ಲಿ ಬಂದು , ನಡೆದುಕೊಂಡು ಹೋಗುತ್ತಿರುವವರ ಮೊಬೈಲ್ ಕಿತ್ತುಕೊಂಡು ಹೋದ ಕೇಸ್​ಗಳು ಶಿವಮೊಗ್ಗನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಹಾಗೂ ತುಂಗಾನಗರ ಪೊಲೀಸ್ ಸ್ಟೇಷನ್​ಗಳಲ್ಲಿ ದೂರುದಾರರು ತಡವಾಗಿ ಕಂಪ್ಲೆಂಟ್ ದಾಖಲಿಸಿದ್ಧಾರೆ. 

ಪ್ರಕರಣ 1 

ಕಳೆದ 17 ನೇ ತಾರೀಖಿನಿಂದ ನಡೆದ ಘಟನೆ ಇದಾಗಿದ್ದು, ಗೋಪಾಳಗೌಡ ಬಡಾವಣೆಯಲ್ಲಿ ಚಂದನ್​ಪಾರ್ಕ್​  ಬಳಿ ಘಟನೆ ನಡೆದಿದೆ. ಕೆಲಸ ಮುಗಿಸಿಕೊಂಡು ಬರುತ್ತಿದ್ದ 29 ವರ್ಷದ ಯುವಕನೊಬ್ಬ ವಾಣಿಜ್ಯ ತೆರಿಗೆ ಇಲಾಖೆ ಚಂದನ್​ ಪಾರ್ಕ್​ ಬಳಿಯಲ್ಲಿ ಮೊಬೈಲ್​ನ್ನ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದ. ಈ ವೇಳೇ  ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್​ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಯುವಕನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ರಾತ್ರಿ  9 ಗಂಠೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು REALME 9 PRO PLUS  ಮೊಬೈಲ್​ ಕಳ್ಳತನವಾಗಿದೆ. 

ಪ್ರಕರಣ 2 

ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿರುವ ಪ್ರಕರಣವೂ ಕಳೆದ 11 ರಂದು ನಡೆದಿದ್ದು, ಈ ಸಂಬಂಧ ನಿನ್ನೆಯಷ್ಟೆ ದೂರು ದಾಖಲಾಗಿ, ಎಫ್​ಐಆರ್ ದರ್ಜ್​ ಆಗಿದೆ. ಅಂದಹಾಗೆ ಈ ಘಟನೆ ಕೆಎಸ್​​ಆರ್​ಟಿಸಿ ಡಿಫೋ ರೋಡ್​ನಲ್ಲಿ ನಡೆದಿದ್ದು, 60 ವರ್ಷದ ಯಜಮಾನರೊಬ್ಬರ ಮೊಬೈಲ್​ನ್ನ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ. 

ಘಟನೆ ನಡೆದ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಿಪೋ ರಸ್ತೆಯಲ್ಲಿ ಹಿರಿಯರು ಫೋನ್​ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ವೇಳೆ, ಅಲ್ಲಿಗೆ ಬೈಕ್​ನಲ್ಲಿ ಬಂದ ಮೂವರು, Samsung Galaxy A21S ಮೊಬೈಲ್​ ಕದ್ದು ಪರಾರಿಯಾಗಿದ್ದಾರೆ. 

ಶಾಹಿ ಎಕ್ಸ್​ಪೋರ್ಟ್ಸ್​ ವಿರುದ್ಧ ಕೇಸ್ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ ! ಕಾರಣವೇನು?

ಶಿವಮೊಗ್ಗ/  ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರು, ರಸ್ತೆ, ವಿದ್ಯುತ್ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಇಂದು ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ  ಸೂಚನೆಗಳನ್ನು ನೀಡಿದ್ಧಾರೆ. 

ಶಾಹಿ ಎಕ್ಸ್​ಪೋರ್ಟ್ಸ್​ ವಿರುದ್ಧ ಕೇಸ್

ಇದೇ ವೆಳೆ  ನಿದಿಗೆ ಕೈಗಾರಿಕಾ ಪ್ರದೇಶದಲ್ಲಿರುವ ಮೆ|| ಶಾಹಿ ಎಕ್ಸ್‍ಪೋರ್ಟ್ ಪ್ರೈ.ಲಿ ನಿಂದ ಮಾಲಿನ್ಯ ಉಂಟಾಗುತ್ತಿದ್ದು ಕೈಗಾರಿಕಾ ಪ್ರದೇಶದ ಘಟಕಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಈಗಾಗಲೇ ನೋಟಿಸ್ ನೀಡಿದ್ದಾರೆ. ಆದರೂ ಮಾಲಿನ್ಯ ನಿಯಂತ್ರಣವಾಗಿಲ್ಲದ ಕಾರಣ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಮಾಲಿನ್ಯ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ. 

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ 187 ನೇ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರು,  ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ 150 ಪ್ಲಾಟ್‍ಗಳಿದ್ದು, ಇದಕ್ಕೆ ಸರಿಹೊಂದುವಂತೆ ಸಬ್ ಸ್ಟೇಷನ್ ನಿರ್ಮಿಸುವ ಸಂಬಂಧ ಮೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ಲೈನ್ ಅಸೆಸ್‍ಮೆಂಟ್ ಮಾಡಿ ಒಂದು ವಾರದ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದರು.

ಎಲೆಕ್ಟ್ರಾನಿಕ್ಸ್​ ತ್ಯಾಜ್ಯವಿಲೇವಾರಿ ಜಾಗ

ನಿಸ್ತೇಜಗೊಂಡ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವೈಜ್ಞಾನಿಕವಾಗಿ ಇ-ತ್ಯಾಜ್ಯ ನಿರ್ವಹಣೆಗಾಗಿ ಹಾಗೂ ಇ-ಮಾಲಿನ್ಯ ತಡೆಗಾಗಿ ನಗರದ ಹೊರವಲಯದಲ್ಲಿ 5 ಎಕರೆಯಷ್ಟು ಜಮೀನನ್ನು ಗುರುತಿಸಿ, ಅದನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಲೀಸ್ ಆಧಾರದಲ್ಲಿ ನೀಡಲು ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ಕುಡಿಯುವ ನೀರು ಸರಬರಾಜು

ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶಕ್ಕೆ ಗ್ರಾಮೀಣ ನೀರು ಸರಬರಾಜು ಯೋಜನೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ನೀರು ಒದಗಿಸಲು ಯೋಜಿನೆ ರೂಪಿಸಲಾಗಿದ್ದು ಈ ಕುರಿತಾದ ಡಿಪಿಆರ್ ತಾಂತ್ರಿಕ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಿದರು.

ಜಮೀನು ಹಸ್ತಾಂತರಕ್ಕೆ ಸಮಿತಿ ರಚನೆ 

ಸೋಗಾನೆ ಕೈಗಾರಿಕಾ ಪ್ರದೇಶ ಅಭಿವೃದ್ದಿಪಡಿಸುವ ಸಂಬಂಧ ಅನಧಿಕೃತ ಸಾಗುವಳಿ, ಜಮೀನು ಹಸ್ತಾಂತರ, ಕೋರ್ಟ್ ಪ್ರಕರಣಗಳು ಇತರೆ ಸಮಸ್ಯೆಗಳಿದ್ದು ಇದನ್ನು ಸರಿಪಡಿಸಲು ಎಸಿ, ತಹಶೀಲ್ದಾರ್, ಎಸ್‍ಎಲ್‍ಎಓ, ಕೆಐಎಡಿಬಿ ಅಧಿಕಾರಿ ಇತರರ ಒಂದು ಸಮಿತಿ ರಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು

ಸಭೆಯಲ್ಲಿ   ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣ್, ಡಿಐಸಿ ಜಂಟಿ ನಿರ್ದೇಶಕ ಗಣೇಶ್, ಮಹಾನಗರಪಾಲಿಕೆ ಕಾ.ಅಭಿಯಂತರ ನಟೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರು, ಇತರೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಜರಿದ್ದರು.