SHIVAMOGGA | MALENADUTODAY NEWS | ಮಲೆನಾಡು ಟುಡೆ Dec 5, 2024
ವಾಕಿಂಗ್ ಮಾಡುತ್ತಿದ್ದವರ ಸರಗಳ್ಳತನ ಮಾಡಿದ ಪ್ರಕರಣ ಸಂಬಂಧ ಸಾಪ್ಟ್ವೇರ್ ಇಂಜಿನಿಯರ್ ಸೇರಿದಂತೆ ನಾಲ್ವರನ್ನ ಬಂಧಿಸಿದ ಘಟನೆ ಬೆಂಗಳೂರು ನಲ್ಲಿ ನಡೆದಿದೆ. ಸೆಪ್ಟೆಂಬರ್ 19ರಂದು ಬೆಳಗ್ಗೆ ಹೆದ್ದಾರಿಯಲ್ಲಿ ನಡೆದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನೆಲಮಂಗಲ ಸಮೀಪ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಬಂಧಿಸಿದ್ದರು. ಆ ಬಳಿಕ ಆತ ನೀಡಿದ ಮಾಹಿತಿಯಂತೆ ನಾಲ್ವರನ್ನ ಬಂಧಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಆಂಧ್ರಪ್ರದೇಶದಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿದೆ.
ಒಂದೇ ಕೇಸ್ನಲ್ಲಿ 33 ಮಂದಿ ವಿರುದ್ಧ FIR
ಚಿಕ್ಕಮಗಳೂರು ಪೊಲೀಸರ ಪ್ರಕರಣವೊಂದರಲ್ಲಿ 35 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಿಲ್ ಪಾವತಿ ವಿಚಾರವಾಗಿ ಸಿಬ್ಬಂದಿ ಜತೆ ವಾಗ್ವಾದ ನಡೆದು ಹೊಡೆದಾಟವಾದ ಪ್ರಕರಣ ಇದಾಗಿದೆ. ಬಾರ್ನಲ್ಲಿ ನಡೆದ ಗಲಾಟೆ ಮುಂದುವರಿದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಎರಡು ಪ್ರಕರಣಗಳು ದಾಖಲಾಗಿದ್ದು ಒಂದು ಪ್ರಕರಣದಲ್ಲಿ 13 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ 22 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ಅಪರಿಚಿತನ ಸಾವಿನ ತನಿಖೆ ಪ್ರಿಯಕರ, ಪತ್ನಿ ಅರೆಸ್ಟ್
11 ತಿಂಗಳ ಹಿಂದ ಕೃಷ್ಣಾನದಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಸಾವಿನ ಪ್ರಕರಣವನ್ನ ಕಲಬುರಗಿ ಪೊಲೀಸರು ಭೇದಿಸಿದ್ದು, ಮೃತನ ಪತ್ನಿಯೇ ಆತನನ್ನ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಹಾರೂಗೇರಿ ಠಾಣೆ ಪೊಲೀಸರ ತನಿಖೆಯಲ್ಲಿ ಈ ವಿಚಾರ ಬಯಲಾಗಿದ್ದು, ಮೃತನ ಪತ್ನಿ, ಅವಳ ಪ್ರಿಯಕರ ಸೇರಿ ಮೂವರನ್ನು ಬಂಧಿಸಲಾಗಿದೆ. 2023ರ ಡಿ.27ರಂದು ಅಥಣಿ ತಾಲೂಕಿನ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಆನಂತರ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕ್ಲೂ ಸಿಕ್ಕಿರಲಿಲ್ಲ. ಈ ನಡುವೆ ಕಾಣೆಯಾದವರ ವಿವರ ಪಡೆದುಕೊಂಡ ಪೊಲೀಸರು, ರಾಯಭಾಗ ತಾಲೂಕಿನ ಇಟನಾಳ ಗ್ರಾಮದ ಯುವಕನೊಬ್ಬ ಕಾಣೆಯಾಗಿರುವ ವಿಚಾರ ತಿಳಿದುಕೊಂಡಿದ್ದಾರೆ. ಆದರೆ ಆತ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗದೇ ಇರುವುದನ್ನ ಗಮನಿಸಿದ ಪೊಲೀಸರು ಗುಪ್ತವಾಗಿ ತನಿಖೆ ಆರಂಭಿಸಿದ್ದಾರೆ. ಹೀಗೆ ಅನುಮಾನದಿಂದ ತನಿಖೆ ಮುಂದುವರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
SUMMARY | State news today

KEY WORDS |Kalaburagi, Krishna River, Chikkamagaluru, Kadur, Shivamogga, Davanagere, Bangalore