SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 1, 2025
ಶಿವಮೊಗ್ಗ | ನಗರಕ್ಕೆ ಪುಸ್ತಕ ಬಿಡುಗಡೆಗೆಂದು ಆಗಮಿಸಿದ್ದ ರಾಷ್ಟ್ರೀಯ ಹಿಂದೂ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ರವರನ್ನು ಪೋಲಿಸರು ತಡೆದು ಜಿಲ್ಲಾಧಿಕಾರಿಗಳ ಆದೇಶ ನೀಡಿ ಗಡಿ ದಾಟಿಸಿದ್ದಾರೆ.
ಏನಿದು ಘಟನೆ

ಸಮೋದ್ ಮುತಾಲಿಕ್ ರವರು ಶ್ರೀರಾಮ ಸೇನೆಯಿಂದ ಪ್ರಕಟಿಸಲಾದ ಲವ್ ಜಿಹಾದ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲು ಶಿವಮೊಗ್ಗಕ್ಕೆ ಆಗಮಿಸಿದ್ದರು. ಬೆಳಗ್ಗೆ 11:00ಗೆ ಪತ್ರಿಕಾ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ನಗರದ ಶುಭಂ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ಸಹ ಆಯೋಸಿಸಿದ್ದರು. ಆದರೆ ಪ್ರಮೋದ್ ಮುತಾಲಿಕ್ ಶಿವಮೊಗ್ಗ ಪ್ರವೇಶಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಕಾರಿನಲ್ಲಿ ಬರಬೇಕಾದರೆ ಕಾರು ಅಡ್ಡಗಟ್ಟಿ ನೋಟಿಸ್ ನೀಡಿ ಜಿಲ್ಲಾಧಿಕಾರಿ ಆದೇಶವನ್ನು ಪ್ರಮೋದ್ ಮುತಾಲಿಕ್ ಕೈಗೆ ಇಟ್ಟು ತಮ್ಮ ಎಸ್ಕಾರ್ಟ್ ಮೂಲಕ ಎನ್ ಆರ್ ಪುರಕ್ಕೆ ಕರೆದೊಯ್ದಿದ್ದಾರೆ.
ಜಿಲ್ಲಾಧಿಕಾರಿಗಳು ಆದೇಶ ಮಾಡಿಸಲು ಕಾರಣವೇನು.
ಪ್ರಮೋದ್ ಮುತಾಲಿಕ್ ಇನ್ನೊಂದು ಧರ್ಮದ ಬಗ್ಗೆ ದ್ವೇಷದ ಭಾಷಣ ಮಾಡುತ್ತಾರೆ. ಅವರ ಮೇಲೆ ಈಗಾಗಲೇ ರಾಜ್ಯದಾದ್ಯಂತ ಸುಮಾರು 30 ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ ಈ ವಿಚಾರದಲ್ಲಿ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶವನ್ನು ಹೊರಡಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿಗಳ ಈ ನಡೆಯಿಂದ ನಗರದ ಆಡಳಿತದ ವಿರುದ್ಧ ಪ್ರಮೋದ್ ಮುತಾಲಿಕ್ ಸಿಡಿಮಿಡಿ ಗೊಂಡಿದ್ದಾರೆ
ರಸ್ತೆಯಲ್ಲಿ ಪುಸ್ತಕ ಬಿಡುಗಡೆ
ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ ಈ ಕಾಂತೇಶ್ ಸೇರಿದಂತೆ ಪ್ರಮುಖರು ಸ್ಥಳಕ್ಕೆ ಬಂದರು. ಆಯಾ ವೇಳೆ ಪ್ರಮೋದ್ ಮುತಾಲಿಕ್ ರಸ್ತೆಯಲ್ಲಿಯೇ ಪುಸ್ತಕವನ್ನು ಬಿಡುಗಡೆ ಮಾಡಿದರು.
Summary | Pramod Muthalik Muthalik, who arrived in Shivamogga, was stopped midway and sent back by the police.
Keywords |Pramodh mutalik. Hindu sene, shivamogga,