SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024
ವಾರ್ನರ್ ಟೀಸರ್ ಬಿಟ್ಟಿರುವ ನಟ ನಿರ್ದೇಶಕ ಉಪೇಂದ್ರ ಇದೀಗ ಟೆಂಪಲ್ ರನ್ ಆರಂಭಿಸಿದ್ದಾರೆ. ತಮ್ಮ ಸಿನಿಮಾ ಸಕ್ಸಸ್ಗಾಗಿ ಅವರು ದಕ್ಷಿಣಕನ್ನಡದ ಕಟೀಲು ದುರ್ಗಾ ಪರಮೇಶ್ವರಿ ದೇವಾಸ್ಥಾನಕ್ಕೆ ಭೇಟಿಕೊಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿರುವ ಅವರು ಇದುವರೆಗಿನ ಸಿನೆಮಾಗಳಲ್ಲಿ ಮಾಡಿದ್ದನ್ನು ಬಿಟ್ಟು ಕೆಲವೊಂದನ್ನು ಸೇರಿಸಿ UI ಚಿತ್ರದಲ್ಲಿ ಇನ್ನೇನೋ ಮಾಡಿದ್ದೇವೆ.ಪ್ರೇಕ್ಷಕರಿಗೆ ಈ ಚಿತ್ರ ಎಷ್ಟು ಅರ್ಥ ಆಗುತ್ತೆ ಎನ್ನುವ ಬಗ್ಗೆ ನನಗೂ ಕುತೂಹಲ ಇದೆ ಎಂದಿದ್ದಾರೆ.
ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಇದೆ ಡಿಸೆಂಬರ್ 20 ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ ಉಪೇಂದ್ರ ಸಿನಿಮಾಕ್ಕಾಗಿ ಪ್ಯಾನ್ ಇಂಡಿಯಾ ಪ್ರಚಾರ ನಡೆಸಲಾಗುತ್ತಿದೆ. ಯುಐ ಎಂದರೆ ಸಾಕಷ್ಟು ಅರ್ಥಗಳಿದೆ. ಸಿನಿಮಾ ನೋಡಿದಾಗ ಅದು ಅರ್ಥವಾಗುತ್ತದೆ ಎಂದಿದ್ದಾರೆ.
ಸಿನಿಮಾ ಹಲವು ಲೇಯರ್ಗಳನ್ನ ಹೊಂದಿದೆ ಎಂದ ಉಪ್ಪಿ ಉಪೇಂದ್ರ ಸಿನಿಮಾದ ‘ಕರಿಮಣಿ ಮಾಲೀಕ’ ಹಾಡು 15 ವರ್ಷ ಕಳೆದ ಮೇಲೆ ಜನರಿಗೆ ಅರ್ಥ ಆಗಿದೆ ಎಂದು ತಮಾಷೆ ಮಾಡಿದ್ದಾರೆ
SUMMARY | Director Upendra visited Kateel Durga Parameshwari Devasthanam in Dakshina Kannada and offered special prayers for the success of UI
KEY WORDS | Director Upendra visited Kateel Durga Parameshwari Devasthana, Dakshina Kannada success of UI movie