SHIVAMOGGA | MALENADUTODAY NEWS | ಮಲೆನಾಡು ಟುಡೆ Jan 4, 2025
ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಖಾಸಗಿಯವರಿಗೆ ಮಂಜೂರು ಮಾಡಿದ ಆರೋಪ ಸಂಬಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ತಹಶೀಲ್ದಾರ್ ಆಗಿದ್ದ ಸಿ.ಎಸ್.ಪೂರ್ಣಿಮಾರನ್ನು ಅಮಾನತ್ತು ಮಾಡಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇಲ್ಲಿನ ಲಕ್ಕವಳ್ಳಿ ವಲಯದಲ್ಲಿನ ರಂಗೇನಹಳ್ಳಿಯಲ್ಲಿ 12 ಎಕರೆ 33 ಗುಂಟೆ ಜಾಗವನ್ನು ಐವರು ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿತ್ತು. ಆದರೆ ಇದು ಅರಣ್ಯ ಜಾಗವಾಗಿದೆ. ಈ ನಿಟ್ಟಿನಲ್ಲಿ 8 ಎಕರೆ 3 ಗುಂಟೆಯನ್ನು 2023ರ ಆಗಸ್ಟ್ನಲ್ಲಿ ಮೂವರಿಗೆ ಮಂಜೂರು ಮಾಡಿರುವ ಆರೋಪ ಸಂಬಂಧ ಸಿ.ಎಸ್.ಪೂರ್ಣಿಮಾರನ್ನು ಅಮಾನತು ಮಾಡಲಾಗಿದೆ.
SUMMARY |C.S. Purnima, Tahsildar of Tarikere Taluk, Chikkamagaluru district, has been suspended over allegations of allotting land belonging to the Forest Department to private individuals.

KEY WORDS | C.S. Purnima, Tahsildar of Tarikere Taluk, Chikkamagaluru district, allotting Forest Department land to private party