SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 3, 2025
ಶಿವಮೊಗ್ಗ ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿರ್ಹಹಣೆಯಲ್ಲಿ ನಡೆಯುತ್ತಿರುವ ಪತ್ರಿಕಾ ಭವವನದ ಅಧ್ಯಕ್ಷರ ಬಗ್ಗೆ ಇತ್ತೀಚೆಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆಗಳಲ್ಲಿ ಅಪಪ್ರಾಚಾರ ಮಾಡುತ್ತಿದ್ದಾರೆ. ಆ ಎಲ್ಲಾ ಪತ್ರಿಕಾ ಪ್ರಕಟಣೆಗಳು ಸತ್ಯಕ್ಕೆ ದೂರವಾದದ್ದು ಎಂದು ಟ್ರಸ್ಟ್ ನ ಅಧ್ಯಕ್ಷರಾದ ಎನ್ ಮಂಜುನಾಥ್ ಸ್ಪಸ್ಟನೆ ನೀಡಿದರು.
ಈ ಕುರಿತು ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಈ ಹಿಂದೆ 2009 ರಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾಯಿದೆ ಅಡಿಯಲ್ಲಿ ನೋಂದಣಿಯಾಗಿದೆ. ಇದು ರದ್ದು ಮಾಡಲಾಗದ ಟ್ರಸ್ಟ್ ಆಗಿರುತ್ತದೆ. 2009 ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಿವಮೊಗ್ಗದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ನೀಡಲು ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಅರ್ಜಿ ಸಲ್ಲಿಸಲಾಗಿತ್ತು, ಅವರ ಆದೇಶದಂತೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ನಿವೇಶನವನ್ನು ಮಂಜೂರು ಮಾಡಲಾಗಿತ್ತು. ಜುಲೈ 2009 ರಂದು ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ಗೆ ನಿವೇಶನ ನೀಡಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯದಂತೆ ಜಿಲ್ಲಾ ಪಂಚಾಯಿತಿ ಇಂಜನಿಯರಿಂಗ್ ವಿಭಾಗದಿಂದ ನಿವೇಶನ ಮಂಜೂರು ಮಾಡಲಾಗಿತ್ತು. ನಿವೇಶನ ಮಂಜೂರಾದ ಬಳಿಕ ಪತ್ರಿಕಾ ಭವನ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಮತ್ತು ಇತರೆ ಜನಪ್ರತಿನಿಧಿಗಳ ಅನುದಾನದಲ್ಲಿ ನೆರವು ಪಡೆಯಲಾಗಿತ್ತು. ಈ ಎಲ್ಲಾ ಅನುದಾನವು ಜಿಲ್ಲಾಧಿಕಾರಿಗಳ ಹೆಡ್ ಮೂಲಕವೇ ವಿನಿಯೋಗವಾಗಿದ್ದು ಸರ್ಕಾರದ ನೋಂದಾಯಿತ ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಟ್ಟಡದ ಆಧುನೀಕರಣ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಲಾಗಿತ್ತು. ಪತ್ರಿಕಾಭವನದ ಕಟ್ಟಡಕ್ಕೆ ಸಾರ್ವಜನಿಕರಿಂದ ಯಾವುದೇ ಹಣಕಾಸು, ವಂತಿಕೆಯನ್ನು ನಾವು ಸಂಗ್ರಹ ಮಾಡಿರುವುದಿಲ್ಲ. ಆದರೆ ಇತ್ತೀಚೆಗೆ ಕರ್ನಾಟಕ ಕಾರ್ಯಕರ್ತರ ಧ್ವನಿ ಸಂಘಟನೆಯ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆಗಳಲ್ಲಿ ಅಪಪ್ರಾಚಾರ ಮಾಡುತ್ತಿದ್ದಾರೆ. ಅದಕ್ಕೆ ಅವರ ಬಳಿ ಯಾವುದೇ ಸಾಕ್ಷಿಗಳಿಲ್ಲ ಎಂದರು.

ಇನ್ಮುಂದೆ ಪತ್ರಿಕಾಗೋಷ್ಠಿ ನಡೆಸಲು 1500 ರೂಪಾಯಿ ನಿಗದಿ
ಇತ್ತೀಚಿನ ಕೆಲವು ತಿಂಗಳಿಂದ ಹನಾನಿಯಂತ್ರಿತ ಸಭಾಂಗಣವಾದ ಮೇಲೆ ಪತ್ರಿಕಾಗೋಷ್ಠಿಗೆ ದರದಲ್ಲಿ 2000 ರೂಪಾಯಿ ನಿಗದಿ ಪಡಿಸಲಾಗಿದೆ. ಭವನದ ಮೊದಲ ಮಹಡಿಯಲ್ಲಿರುವ ಸಭಾಂಗಣವನ್ನು ಪತ್ರಕರ್ತರ ಕುಟುಂಬಗಳ ಕಾರ್ಯಕ್ರಮಕ್ಕೆ ಉಚಿತವಾಗಿ ಮತ್ತು ಇತರೆ ವರ್ಗದವರಿಗೆ 2 ಸಾವಿರ ನಿರ್ವಹಣಾ ವೆಚ್ಚ ಪಡೆಯಲಾಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳು ಅಪರೂಪಕ್ಕೊಮ್ಮೆ ಮಾತ್ರ ನಡೆಯುವುದು. ಇನ್ಮುಂದೆ ಎಲ್ಲರ ಒತ್ತಾಯದ ಮೇರೆಗೆ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲು 1500 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಹಾಗೆಯೇ ಪ್ರೆಸ್ ನೋಟ್ಗಳನ್ನು ತೆಗೆದುಕೊಳ್ಳಲು ಈ ಹಿಂದೆ ನಿಗದಿಪಡಿಸಿದ್ದ 150 ರೂಪಾಯಿಯನ್ನು 200 ರೂಪಾಯಿಗೆ ಏರಿಸಲಾಗಿದೆ. ಈ ಪತ್ರಿಕಾ ಗೋಷ್ಠಿಯಿಂದ ಬರುವ ಹಣವನ್ನು ಪತ್ರಕರ್ತರಿಗೆ ಊಟ, ತಿಂಡಿ, ಕಾಫಿ, ವಿದ್ಯುತ್ ಬಿಲ್, ಇಂಟರ್ನೆಟ್, ಸಿಬ್ಬಂದಿ ವೇತನ, ಸ್ವಚ್ಛತೆಗೆ ಬಳಸಿಕೊಳ್ಳಲಾಗುತ್ತದೆ. ಮಾತ್ರವಲ್ಲದೆ, ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮ, ಆರೋಗ್ಯ ತಪಾಸಣೆ, ಪ್ರತಿಭಾ ಪುರಸ್ಕಾರ, ಸಂವಾದ, ತರಬೇತಿ, ಚರ್ಚೆ, ಪತ್ರಕರ್ತರಿಗೆ ಪುನರ್ ಮನನ ಶಿಬಿರ, ಉಪನ್ಯಾಸ, ವಿಚಾರ ಸಂಕಿರಣ, ಕ್ರೀಡೆ, ಅಧ್ಯಯನ ಪ್ರವಾಸ, ಇತ್ಯಾದಿ ನಡೆಸಲಾಗುತ್ತದೆ ಎಂದರು.
ಪತ್ರಿಕಾ ಭವನಕ್ಕೆ ಬರುವ ಎಲ್ಲಾ ಹಣಕಾಸಿನ ವಹಿವಾಟು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ಮೂಲಕದೇ ನಡೆಯುತ್ತಿದೆ. ಯಾವುದೇ ವ್ಯಕ್ತಿ ಅಥವಾ ಅನ್ಯ ಸಂಸ್ಥೆಯ ಹೆಸರಲ್ಲಿ ಪತ್ರಿಕಾ ಭವನದ ಹಣ ವ್ಯಯವಾಗುವುದಿಲ್ಲ. ಇಲ್ಲಿನ ಎಲ್ಲಾ ವ್ಯವಹಾರಗೆ ಪಾರದರ್ಶಕವಾಗಿದ್ದು, ಇಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಮತ್ತು ಅದಕ್ಕೆ ಅವಕಾಶವೂ ಇರುವುದಿಲ್ಲ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಾಂವಿಧಾನಿಕ ರೀತಿಯಲ್ಲಿ ರಚನೆಯಾಗಿರುವ ಆಡಳಿತ ಮಂಡಳಿಯಾಗಿದೆ. ಟ್ರಸ್ಟ್ನ ಬೈಲಾದಂತೆ ಕಾಲಕಾಲಕ್ಕೆ ಆಯ್ಕೆಯಾಗಿರುವ ಟ್ರಸ್ಟಿಗಳು, ವಿಶೇಷ ಆಹ್ವಾನಿತರು ಇದ್ದಾರೆ. ಶಿವಮೊಗ್ಗ ನಗರದಲ್ಲಿ ಕಾರ್ಯನಿರ್ವಹಿಸುವ ರಾಜ್ಯಮಟ್ಟದ ಪತ್ರಿಕೆ, ಸುದ್ದಿ ವಾಹಿನಿಗಳು, ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲರನ್ನೂ ಒಳಗೊಂಡ ಆಡಳಿತ ಮಂಡಳಿಯಿದೆ. ಟ್ರಸ್ಟ್ನ ಅಭಿವೃದ್ಧಿಗೋಸ್ಕರ ಟ್ರಸ್ಟ್ ಡೀಡ್ ನಲ್ಲಿ ಕಾಲಕಾಲಕ್ಕೆ ತಿದ್ದುಪಡಿ ಸಹ ಮಾಡಲಾಗಿದೆ.
ರಾಜ್ಯದಲ್ಲಿಯೇ ಆತ್ಯುತ್ತಮ ಪತ್ರಿಕಾ ಭವನ ನಿರ್ಮಿಸಬೇಕೆಂಬ ಸದ್ದುದ್ದೇಶದಿಂದ ಹಿರಿಯ ಪತ್ರಕರ್ತ ಕ್ರಾಂತಿದೀಪ ಎನ್.ಮಂಜುನಾಥರನ್ನು ಎಲ್ಲಾ ಟ್ರಸ್ಟಿಗಳು ಸರ್ವನ್ನೂ ಮತದಿಂದ ನಿರಂತರವಾಗಿ ಆಯ್ಕೆಮಾಡಿಕೊಂಡು ಬರಲಾಗುತ್ತಿದೆ. ಇಲ್ಲಿ ಮಾಧ್ಯಮಕ್ಕೆ ಸಂಬಂಧಿತ ಚಟುವಟಿಕೆಗಳು ನಿತ್ಯವೂ ನಡೆಯುತ್ತವೆ. ಪತ್ರಿಕಾಗೋಷ್ಟಿಗಳನ್ನು ಒಂದೇ ಕಡೆ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ರಾಜಕೀಯ ಪಕ್ಷ ಮತ್ತು ಸಂಘ-ಸಂಸ್ಥೆಗಳವರು, ಸಾರ್ವಜನಿಕರು ಇಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಮಾತ್ರವಲ್ಲದೆ, ಪತ್ರಿಕಾ ಹೇಳಿಕೆಗಳನ್ನು ಇಲ್ಲಿಗೆ ಬಂದು ನೀಡುತ್ತಾರೆ.
ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಪತ್ರಿಕಾ ಭವನಕ್ಕೆ ಪ್ರವೇಶ
ಪತ್ರಿಕಾ ಭವನದಲ್ಲಿ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಪತ್ರಿಕೆಗಳು, ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಪ್ರತಿನಿಧಿ ಗಳಿಗೆ ಅವಕಾಶ ನೀಡಲಾಗುತ್ತಿದೆ. ಮಾನ್ಯತೆ ಪಡೆಯದ ಮತ್ತು ಪತ್ರಿಕೆಗಳನ್ನೇ ಹೊರತರದ ಯಾರಿಗೂ ಇಲ್ಲಿ ಅವಕಾಶ ಕೊಡುತ್ತಿಲ್ಲ. ಪತ್ರಕರ್ತರಿಂದ ಪತ್ರಕರ್ತರಿಗಾಗಿ ಬಳಕೆಯಾಗುತ್ತಿರುವ ಪತ್ರಿಕಾ ಭವನದಲ್ಲಿ ನಕಲಿ ಅಧ್ಯಕ್ಷರಿದ್ದಾರೆ. ಹಣ ಅಪವ್ಯಯವಾಗುತ್ತಿದೆ. ಜಿಲ್ಲಾಧಿಕಾರಿಗಳು ಭವನವನ್ನು ವಶಕ್ಕೆ ಪಡೆಯಬೇಕೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪತ್ರಿಕಾ ಭವನದ ನಿರ್ವಹಣೆ, ಮೀಟಿಂಗ್, ಆಡಿಟಿಂಗ್ ಎಲ್ಲವೂ ಕ್ರಮವಾಗಿ ನಡೆಯುತ್ತಿದೆ. ನೈಜ ಮತ್ತು ಸಕ್ರಿಯ ಪತ್ರಕರ್ತರು ಪತ್ರಿಕಾ ಭವನದ ಸೌಲಭ್ಯವನ್ನು ನಿತ್ಯವೂ ಬಳಸಿಕೊಳ್ಳುತ್ತಿದ್ದಾರೆ. ಭವನದ ಮೊದಲ ಮಹಡಿಯಲ್ಲಿರುವ ಕೊಠಡಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಕಚೇರಿಯೂ ಕಾರ್ಯನಿರ್ವಹಿಸುತ್ತಿದೆ.
ಹೀಗೆ ಮುಂದುವರೆದರೆ ಕಾನೂನು ಹೋರಾಟ
ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾದ ಪತ್ರಿಕಾ ಭವನ ಮತ್ತು ಅದರ ಅಧ್ಯಕ್ಷ ಎನ್.ಮಂಜುನಾಥ್ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವವರ ವಿರುದ್ದ ಕಾನೂನು ಹೋರಾಟವನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಡೆಸಲಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವ್ಯಕ್ತಿಗಳು ಹರಡುತ್ತಿರುವ ಸುಳ್ಳು ಅಪಪ್ರಚಾರದ ಸುದ್ದಿಗಳನ್ನು ಯಾರೂ ನಂಬಬಾರದು. ಶಿವಮೊಗ್ಗ ನಗರದ ಪತ್ರಕರ್ತರ ವೃತ್ತಿಪರ ಚಟುವಟಿಕೆಗಳಿಗೆ ನಿತ್ಯವೂ ಬಳಕೆಯಾಗುತ್ತಿರುವ ಈ ಭವನದ ಮೇಲೆ ನಡೆಯುತ್ತಿರುವ ದುರುದ್ದೇಶ ಪೂರ್ವಕವಾದ ಆರೋಪಗಳನ್ನು ಟ್ರಸ್ಟ್ ಸಾರಾ ಸಗಟಾಗಿ ತಿರಸ್ಕರಿಸುತ್ತದೆ ಎಂದರು.
SUMMARY | Recently, some people have been spreading misinformation about the President of Patrika Bhavan in newspapers on social media. N Manjunath, president of the trust, clarified that all those press releases were far from the truth.
KEYWORDS | newspapers, Patrika Bhavan, N Manjunath, press trust,