SHIVAMOGGA | MALENADUTODAY NEWS | ಮಲೆನಾಡು ಟುಡೆ Dec 24, 2024
ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ಬಿವೈ ವಿಜಯೇಂದ್ರರ ವಿರುದ್ಧ ರಾಜ್ಯ ಬಿಜೆಪಿಯಲ್ಲಿಯೇ ಅಸಮಾಧಾನ ಭುಗಿಲೆದ್ದಿದೆ. ಇದರ ನಡುವೆ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರನ್ನ ಬಿವೈ ವಿಜಯೇಂದ್ರ ಭೇಟಿ ಮಾಡಿ ಮಾತುಕತೆ ನಡೆಸಿದ್ದಷ್ಟೆ ಅಲ್ಲದೆ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಬಂದಿದ್ದಾರೆ. ಅವರ ಈ ಭೇಟಿ , ಅವರ ಸ್ಥಾನವನ್ನು ಭದ್ರವಾಗಿಸಿತೆ? ಹೌದು ಎನ್ನುತ್ತಾರೆ. ಹಿರಿಯ ಪತ್ರಕರ್ತರು ಆರ್ ಟಿ ವಿಠಲಮೂರ್ತಿಯವರು. ಅವರು ತಮ್ಮ ಫೇಸ್ಬುಕ್ ವಾಲ್ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಅದರ ಯಥಾವತ್ತು ಇಲ್ಲಿ ಓದಬಹುದು. ವರದಿಯ ಪೂರ್ತಿ ಕ್ರೆಡಿಟ್ ಹಿರಿಯ ಪತ್ರಕರ್ತರಿಗೆ ಸಲ್ಲುತ್ತದೆ. ಮಾಹಿತಿ ಹಂಚಿಕೊಳ್ಳುವ ಸಲುವಾಗಷ್ಟೆ ಈ ವರದಿಯನ್ನು ಅವರ ಕೃಪೆಯೊಂದಿಗೆ ಬಳಸಿಕೊಳ್ಳುತ್ತಿದ್ದೇವೆ.
ಭದ್ರವಾಯಿತೆ ವಿಜಯೇಂದ್ರರವರ ಸ್ಥಾನ
ಕಳೆದ ವಾರ ದಿಲ್ಲಿಗೆ ಹೋದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಪಕ್ಷ ಸಂಘಟನೆಗಾಗಿ ತಾವು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಅವರು ವಿವರಿಸಿದ್ದಾರೆ. ಹೀಗೆ ವಿಜಯೇಂದ್ರ ಅವರು ಹೇಳಿದ್ದನ್ನು ಸಮಾಧಾನದಿಂದ ಕೇಳಿಸಿಕೊಂಡ ಪ್ರಧಾನಿ ಮೋದಿಯವರು ವೆರಿಗುಡ್ ಎಂದಿದ್ದಾರೆ. ಕಾರಣ?ಕರ್ನಾಟಕದಲ್ಲಿ ಪಕ್ಷ ಸಂಘಟನೆಗಾಗಿ ವಿಜಯೇಂದ್ರ ಅವರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಅಷ್ಟೊತ್ತಿಗಾಗಲೇ ಮೋದಿಯವರು ಫೀಡ್ ಬ್ಯಾಕ್ ತರಿಸಿಕೊಂಡಿದ್ದರಂತೆ.
ಹೀಗಾಗಿ ವಿಜಯೇಂದ್ರ ಅವರು ತಮ್ಮ ಪ್ರಯತ್ನಗಳ ಬಗ್ಗೆ ಹೇಳುತ್ತಿದ್ದಂತೆಯೇ:ವೆರಿ ಗುಡ್.ಪಕ್ಷ ಸಂಘಟನೆಯ ವಿಷಯದಲ್ಲಿ ನೀವು ಮಾಡಿದ ಕೆಲಸಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ.ಈ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ.ಕರ್ನಾಟಕದಲ್ಲಿ ನಮಗೆ ಅಧಿಕಾರ ಇಲ್ಲದಿದ್ದರೂ, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮಾದರಿಯಾಗುವಂತೆ ಸಂಘಟನೆ ಮಾಡಿದ್ದೀರಿ.ಅದಕ್ಕಾಗಿ ನಿಮಗೆ ಅಭಿನಂದನೆ ಎಂದಿದ್ದಾರೆ.ಹೀಗೆ ವಿಜಯೇಂದ್ರ ಅವರಿಗೆ ಶಭಾಷ್ ಗಿರಿ ಕೊಟ್ಟ ಪ್ರಧಾನಿ ಮೋದಿಯವರು:ಇನ್ನುಳಿದ ಯಾವುದೇ ವಿಷಯಗಳ ಬಗ್ಗೆ ಯೋಚಿಸಬೇಡಿ.ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ಆದಷ್ಟು ಬೇಗ ಕರ್ನಾಟಕಕ್ಕೆ ಬರುತ್ತಾರೆ.ಎಲ್ಲವನ್ನೂ ಸರಿ ಮಾಡುತ್ತಾರೆ ಎಂದಿದ್ದಾರೆ.ಯಾವಾಗ ಮೋದಿಯವರು ಈ ಮಾತು ಹೇಳಿದರೋ?ಇದರಿಂದ ಖುಷಿಯಾದ ವಿಜಯೇಂದ್ರ ಸಮಾಧಾನದಿಂದ ಕರ್ನಾಟಕಕ್ಕೆ ವಾಪಸ್ದಾಗಿದ್ದಾರೆ. ದಿಲ್ಲಿಯ ಬಿಜೆಪಿ ಮೂಲಗಳ ಪ್ತಕಾರ:ಕರ್ನಾಟಕದಲ್ಲಿ ನಡೆದ ಪಕ್ಷ ಸಂಘಟನೆಯ ಪರ್ವವನ್ನು ಹೊಗಳಿ,ವಿಜಯೇಂದ್ರ ಅವರಿಗೆ ಶಹಬ್ಬಾಸ್ ಗಿರಿ ಕೊಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಡಿಸೆಂಬರ್ 29 ರ ಭಾನುವಾರ ಕರ್ನಾಟಕಕ್ಕೆ ಬರಲಿದ್ದಾರೆ. ಒಂದು ಸಲ ಅವರು ಹೀಗೆ ಬಹಿರಂಗವಾಗಿ ಶಹಬ್ಬಾಸ್ ಗಿರಿ ಕೊಟ್ಟು ಹೋದರು ಎಂದರೆ ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಾಯ ನಿರಾತಂಕವಾಗಿ ಮುಂದುವರಿಯಲಿದೆ ಎಂದೇ ಅರ್ಥ.ಮತ್ತದೇ ಕಾಲಕ್ಕೆ ವಿಜಯೇಂದ್ರ ವಿರುದ್ಧ ಅಪಸ್ವರ ಎತ್ತುತ್ತಿರುವ ಯತ್ನಾಳ್ ಅಂಡ್ ಟೀಮಿಗೆ ಹಿನ್ನಡೆಯಾಗಲಿದೆ ಎಂಬುದು ನಿಸ್ಸಂಶಯ.
SUMMARY | RT Vitthalamurthy’s report on BY Vijayendra

KEY WORDS | RT Vitthalamurthy report , BY Vijayendra