SHIVAMOGGA| MALENADUTODAY NEWS | ಮಲೆನಾಡು ಟುಡೆ Mar 25, 2025
ಶಿವಮೊಗ್ಗ ಪೊಲೀಸರು ನಡೆಸ್ತಿದ್ದ ಕಾಲಿಗೆ ಗುಂಡು ಆಪರೇಷನ್ ಇದೀಗ ಭದ್ರಾವತಿಗೆ ಶಿಫ್ಟ್ ಆಗಿದೆ. ಇತ್ತೀಚೆಗೆ ರೌಡಿಶೀಟರ್ ಖುರೇಶಿ ಕಾಲಿಗೆ ಗುಂಡೇಟು ನೀಡಿದ್ದ ಭದ್ರಾವತಿ ಪೊಲೀಸರು ಇದೀಗ ಮತ್ತೊಬ್ಬ ರೌಡಿಶೀಟರ್ ಕಡೆಕಲ್ ಅಬೀದ್ ಕಾಲಿಗೆ ಗುಂಡೇಟು ಕೊಟ್ಟಿದ್ದಾರೆ.
ಈತನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಈತ ಹಲ್ಲೆಗೆ ಯತ್ನಿಸಿದಾಗ ಪೇಪರ್ ಟೌನ್ ಇನ್ಸ್ಪೆಕ್ಟರ್ ನಾಗಮ್ಮ ಫೈರ್ ಮಾಡಿದ್ದಾರೆ. ಈ ವೇಳೆ ಅಬೀದ್ ಕಾಲಿಗ ಗುಂಡು ಬಿದ್ದಿದೆ. ವಿವಿಧ ಪ್ರಕರಣಗಳಲ್ಲಿ ಜೈಲಿನಲ್ಲಿದ್ದ ಕಡೆಕಲ್ ಅಬೀದ್ ಜೈಲಿಂದ ರಿಲೀಸ್ ಆದ ಬಳಿಕವೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಅಲ್ಲದೆ ತನ್ನದೆ ಆದ ಸ್ಕೆಚ್ ರೂಪಿಸಿಕೊಳ್ಳತ್ತಿದ್ದ. ಈ ನಡುವೆ ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಆತನನ್ನು ಬಂಧಿಸಲು ಇನ್ಸ್ಪೆಕ್ಟರ್ ನಾಗಮ್ಮ ಆಂಡ್ ಟೀಂ ಕಳೆದೊಂದು ತಿಂಗಳಿನಿಂದ ಪ್ರಯತ್ನಿಸಿತ್ತು. ಇವತ್ತು ಮಾಹಿತಿ ಅನ್ವಯ ಸ್ಥಳವೊಂದಕ್ಕೆ ತೆರಳಿದ್ದ ಪೊಲೀಸ್ ಟೀಂ ಮೇಲೆ ಅಬೀದ್ ಅಟ್ಯಾಕ್ ಮಾಡಿ, ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ. ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾಧ್ಯಮ ಸಂದೇಶ ರವಾನಿಸಿದ್ದಾರೆ.,