SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 6, 2024
ಶಿವಮೊಗ್ಗ | ಕ್ರಾಂತಿದೀಪ ಪತ್ರಿಕೆಯ ಪ್ರಧಾನ ಸಂಪಾದಕರಾದ ಎನ್ ಮಂಜುನಾಥ್ ರವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ ಲಭಿಸಿರುವುದು ಗೊತ್ತೆಯಿದೆ.ಈ ಹಿನ್ನಲೆ ಅವರಿಗೆ ಇದೇ ಡಿಸೆಂಬರ್ 7 ರಂದು ಪತ್ರಿಕಾಭವನದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಎನ್ ಮಂಜುನಾಥ್ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಎಂ ಎನ್ ಸುಂದರೇಶ್ ಮಾಹಿತಿ ನೀಡಿದ್ದಾರೆ
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಡ ಹಿಂದುಳಿದ ಕುಟುಂಬದಲ್ಲಿ ಜನಿಸಿ ಕಳೆದ ನಾಲ್ಕು ದಶಕಗಳ ಕಾಲ ಒಂದು ಸ್ಥಳೀಯ ಪತ್ರಿಕೆಯನ್ನು ನಡೆಸಿ ಇಂದು ಅದನ್ನು ಒಂದು ಪ್ರಾದೇಶಿಕ ಮಟ್ಟದಲ್ಲಿ ಬೆಳಸಿದವರು ಎನ್ ಮಂಜುನಾಥ್. ಅವರಿಗೆ ಹಲವಾರು ಪತ್ರಕರ್ತರುಗಳನ್ನು ಪತ್ರಿಕಾ ರಂಗಕ್ಕೆ ನೀಡಿರುವ ಹೆಗ್ಗಳಿಕೆಯಿದೆ. ಹಲವಾರು ಸಾಮಾಜಿಕ ಸಂಘಟನೆಗಳಲ್ಲಿಯೂ ಇವರ ಪಾತ್ರ ಗಣನೀಯವಾಗಿದೆ. ಹಾಗಾಗಿ ಇದೇ ಡಿಸೆಂಬರ್ 7 ರಂದು ಬೆಳಿಗ್ಗೆ 10:30 ಕ್ಕೆ ಪತ್ರಿಕಾಭವನದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಅಭಿನಂದನಾ ಕಾರ್ಯಕ್ರಮದೊಂದಿಗೆ ಅವರ ಪತ್ರಿಕಾ ರಂಗದ ಸಾಧನೆಯನ್ನು ಸ್ಮರಿಸುವ ಕಾರ್ಯಕ್ರಮವೂ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ 72 ಪುಟಗಳ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಈ ಎಸ್ ಷಡಾಕ್ಷರಿ ಅವರು ಈ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ ಶ್ರೀಕಾಂತ್ ಮತ್ತು ಹಿರಿಯ ಪತ್ರಕರ್ತರಾದ ಹೊನಕೆರೆ ನಂಜುಂಡೇಗೌಡ ಅವರು ಆಗಮಿಸಲಿದ್ದಾರೆ.
SUMMARY| N. Manjunath, editor of Krantideepa, has been awarded the Mohare Hanamantharaya Award and a felicitation programme will be held on Dec. 7 at Pathrakarthara Bhavan
KEYWORDS | Krantideepa, N. Manjunath, mohare Hanamantharaya Award,