ಕೆಲಸಕ್ಕೆ ಬರುವುದು ತಡವಾಗಿದ್ದಕ್ಕೆ ಕಾರ್ಮಿಕರ ಕಾಲುಮೆಟ್ಟಿ ಅಂಗಾಲಿಗೆ ಹೊಡೆಸಿದ ಮಾಲೀಕ ಅರೆಸ್ಟ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 21, 2025

ವಿಜಯಪುರ | ಇಟ್ಟಿಗೆ ಭಟ್ಟಿಯ ಮಲೀಕ ಮೂವರು ಕಾರ್ಮಿಕರರಿಗೆ ಮನಸೋಇಚ್ಚೆ ಥಳಿಸಿರುವ ಘಟನೆ ಇಲ್ಲಿನ ಗಾಂಧಿನಗರದ ಸ್ಟಾರ್‌ ಚೌಕ್‌ ಬಳಿ ನಡೆದಿದೆ. ಘಟನೆಗೆ ಸಂಬಂಧಪಟ್ಟ ವಿಡಿಯೋ‌ ವೈರಲ್‌ ಆಗಿದ್ದು, ತಡವಾಗಿಯಾದರೂ ಪೊಲೀಸರು ಆರೋಪಿಗಳನ್ನ ಅರೆಸ್ಟ್‌ ಮಾಡಿದ್ದಾರೆ. 

ಏನಿದು ಘಟನೆ

ಬಾಗಲಕೋಟೆಯ ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದವರಾದ ಉಮೇಶ್‌, ಸದಾಶಿವ ಮಾದರ ಹಾಗೂ ಸದಾಶಿವ ಬಬಲಾದಿ ಎಂಬ ಮೂವರು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕಳೆದ ಸಂಕ್ರಾಂತಿ ಹಬ್ಬದಂದು ಇಟ್ಟಿಗೆ ಭಟ್ಟಿ ಮಾಲೀಕ ಖೇಮು ರಾಥೋಡ್‌ ಬಳಿ ಅಡ್ವಾನ್ಸ್‌ ಹಣ ಪಡೆದು ಊರಿಗೆ ತೆರಳಿದ್ದರು. ಆದರೆ ಮಲೀಕ ಹೇಳಿದ ಸಮಯಕ್ಕೆ ಕಾರ್ಮಿಕರು ಕೆಲಸಕ್ಕೆ ಬಂದಿರಲಿಲ್ಲ. ಇದರಿಂದ ಕುಪಿತಗೊಂಡ ಮಾಲೀಕ ಪೈಪ್‌ನಿಂದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆ ವಿಜಯಪುರ ಗ್ರಾಮೀಣ ಭಾಗದ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.

SUMMARY | Three labourers of a brick kiln were allegedly beaten up by a brick kiln owner near Star Chowk in Gandhinagar. 

KEYWORDS |  labourers, Gandhinagar, kiln,

Leave a Comment