ಕತ್ತಲಿನ ನಡುವೆ, ಹೈ ಸೆಕ್ಯುರಿಟಿಯಲ್ಲಿ ಬೇಲಿ ತೆರವು ! ಪೊಲೀಸರು ಫೇಲ್​ ಆಗಿದ್ದರಿಂದಲೇ ಉದ್ಭವಿಸಿತೆ ವಿ…ವಾದ?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 2, 2025 ‌‌ ‌

ರಂಜಾನ್ ಹಬ್ಬದ ಪ್ರಾರ್ಥನೆ ಮುಗಿದ ಬಳಿಕ ಡಿಸಿ ಆಫೀಸ್​ ಎದುರು ಇರುವ ಖಾಲಿಜಾಗಕ್ಕೆ ಬೇಲಿ ಬಿದ್ದಿರುವುದು ಶಿವಮೊಗ್ಗ ನಗರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ತೀವ್ರ ವಿವಾದಕ್ಕೆ ಒಳಗಾದ ಬೆನ್ನಲ್ಲೆ, ಮೊನ್ನೆ ರಾತ್ರಿ ಬಿದ್ದ ಬೇಲಿಯನ್ನು ನಿನ್ನೆ ರಾತ್ರಿ ಶಿವಮೊಗ್ಗ ಪೊಲೀಸ್​ ಇಲಾಖೆಯ ಬಂದೋಬಸ್ತ್​ನಲ್ಲಿ ಪಾಲಿಕೆಯ ಸಿಬ್ಬಂದಿ ತೆರವುಗೊಳಿಸಿದರು. 

Malenadu Today

ಅಲ್ಲದೆ ಮುನ್ನೆಚರಿಕೆ ಕ್ರಮವಾಗಿ ಬೇಲಿ ಹಾಕಿದ ಜಾಗದಲ್ಲಿ ಬ್ಯಾರಿಕೇಡ್​ಗಳನ್ನು ನಿಲ್ಲಿಸಲಾಗಿದೆ. ಅಲ್ಲದೆ ಯಾವುದೇ ಘಟನೆಗೆ ಆಸ್ಪದವಾಗದಂತೆ, ಮೈದಾನವನ್ನು ಸಂಪರ್ಕಿಸುವ ರಸ್ತೆಗಳನ್ನು ಬ್ಯಾರಿಕೇಡ್​ ಬಳಸಿ ಬಂದ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಮಾನಿಟರ್ ನಡೆಸ್ತಿದ್ದಾರೆ. 

Malenadu Today

ವಿಶೇಷ ಅಂದರೆ ಬೇಲಿ ತೆರವು ಕಾರ್ಯಾಚರಣೆ ವೇಳೆ ಈ ಭಾಗದ ಸುತ್ತಮುತ್ತ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅಲ್ಲದೆ ಬೀದಿ ದೀಪಗಳನ್ನು ಆರಿಸಲಾಗಿತ್ತು. ಇತ್ತ ಆಹಾರ ಉತ್ಪನ್ನಗಳ ಅಂಗಡಿಗಳು ಸೇರಿದಂತೆ ಈ ಭಾಗದ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲಾಗಿದ್ದು, ನಿನ್ನೆ ದಿನವಿಡಿ ಈ ಬಾಗದ ವ್ಯಾಪಾರಸ್ಥರು ನಷ್ಟ ಅನುಭವಿಸಿದರು

 .Malenadu Today

ಇಷ್ಟಕ್ಕೂ ನಡೆದಿದ್ದೇನು? 

ರಂಜಾನ್​ ಹಬ್ಬದ ಪ್ರಾರ್ಥನೆ ಮುಗಿದ ಬಳಿಕ, ಪ್ರಾರ್ಥನೆ ನಡೆದ ಮೈದಾನದ ಜಾಗದ ಒಂದು ಬದಿಯಲ್ಲಿ ಬೇಲಿ ಹಾಕಲಾಗಿತ್ತು. ಬೇಲಿ ಹಾಕಿದ್ದು ಯಾರು? ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲವಾ? ಈ ವಿಚಾರದಲ್ಲಿ ಪೊಲೀಸರು ಗುಪ್ತ ಮಾಹಿತಿ ಪಡೆಯುವಲ್ಲಿ ವಿಫಲರಾದರೆ? ಎಂಬುದು ಪ್ರಶ್ನಾರ್ತಕ? ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 

 ಆದರೆ, ಮೈದಾನಕ್ಕೆ ವಾಹನಗಳು ಪ್ರವೇಶಿಸುವ ಭಾಗದಲ್ಲಿ ಬೇಲಿ ಬಿದ್ದಿದ್ದು ವಿವಾದಕ್ಕೆ ಕಾರಣವಾಗಿತ್ತು. ನಿನ್ನೆದಿನ ಹಿಂದೂಪರ ಸಂಘಟನೆಗಳು ಪ್ರಶ್ನೆ ಮಾಡಿದವು. ಅಲ್ಲದೆ ಸ್ಥಳದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಸಮಾಧಾನ ಪಡಿಸಲು ಯತ್ನಿಸದರು. ಆದರೆ ಸಂಘಟನೆ ಕಾರ್ಯಕರ್ತರು, ಬೇಲಿ ತೆಗೆಯುವಂತೆ ಡೆಡ್​ಲೈನ್ ನೀಡಿದರು.

ಎಸ್​ಪಿ ಎಂಟ್ರಿ!

ವಿಚಾರ ತಿಳಿದು ಸ್ಥಳಕ್ಕೆ ಬಂದ ಎಸ್​ಪಿ ಮಿಥುನ್ ಕುಮಾರ್​ ಪ್ರತಿಭಟನಾಕಾರರಿಗೆ ಸಂಜೆಯೊಳಗೆ ಬೇಲಿ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸಂಘಟನೆ ಸದಸ್ಯರು ಕೈ ಬಿಟ್ಟರು. ಇನ್ನೂ ಪೊಲೀಸರು ಕತ್ತಲಾಗುತ್ತಿದ್ದಂತೆ, ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಂಡು ಬೇಲಿಯನ್ನು ತೆಗೆಸಿದರು. 

ವ್ಯಾಪಾರಿಗಳ ಆಕ್ರೋಶ

ಇನ್ನೂ ಬೇಲಿಗೂಟದ ಪ್ರಕರಣದಿಂದಾಗಿ ಈ ಭಾಗದಲ್ಲಿ ದಿನವಡಿ ನಡೆಯಬೇಕಿದ್ದ ಲಕ್ಷಾಂತರ ರೂಪಾಯಿ ಪುಡ್​ ಬ್ಯುಸಿನೆಸ್​ಗೆ ನಷ್ಟ ಉಂಟಾಗಿತ್ತು. ಧರ್ಮಾತೀತವಾಗಿ ವ್ಯಾಪಾರಸ್ಥರು ನಡೆದ ಘಟನೆಯನ್ನು ವಿರೋಧಿಸಿದರಷ್ಟೆ ಅಲ್ಲದೆ ನಮ್ಮ ಪಾಡಿಗೆ ದುಡಿಮೆಗೆ ಬಿಟ್ಟುಬಿಡಿ, ಅಂಗಡಿಗಳನ್ನು ಮುಚ್ಚಿಸುವುದರಿಂದ ದಿನದ ವಹಿವಾಟಿಗೆ ಸಮಸ್ಯೆಯಾಗಲಿದೆ, ದಿನದ ದುಡಿಮೆಯ ಮುಂದೆ ವಿವಾದಗಳು ಅಗತ್ಯವಿಲ್ಲ ಎನ್ನುತ್ತಿದ್ದರು. 

 

 

Share This Article