ಟಿಪ್ಪು ನಗರದಲ್ಲಿ ನಿನ್ನೆ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್ನಲ್ಲಿ ನಡೆದಿದ್ದಕ್ಕೆ ಲಿಂಕ್ ಏನು? ಹರಿದಾಡ್ತಿರೋ ‘ಕೋಮು’ ಸುದ್ದಿ ಬಗ್ಗೆ ಎಸ್ಪಿ ಹೇಳಿದ್ದೇನು? 2 ಘಟನೆ 3 ಸುದ್ದಿ! ಏನಿದು?
What happened in Tipu Nagar yesterday? What is the link to what happened in Draupadamma Circle? What did the SP say about the news that is doing the rounds? 2 Incident 3 News! What is this?
![ಟಿಪ್ಪು ನಗರದಲ್ಲಿ ನಿನ್ನೆ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್ನಲ್ಲಿ ನಡೆದಿದ್ದಕ್ಕೆ ಲಿಂಕ್ ಏನು? ಹರಿದಾಡ್ತಿರೋ ‘ಕೋಮು’ ಸುದ್ದಿ ಬಗ್ಗೆ ಎಸ್ಪಿ ಹೇಳಿದ್ದೇನು? 2 ಘಟನೆ 3 ಸುದ್ದಿ! ಏನಿದು?](https://malenadutoday.com/uploads/images/202306/image_750x_6498ffc5035da.jpg)
KARNATAKA NEWS/ ONLINE / Malenadu today/ Jun 25, 2023 SHIVAMOGGA NEWS
ಅಸಲಿಗೆ ಶಿವಮೊಗ್ಗದ ಟಿಪ್ಪು ನಗರ ಹಾಗೂ ಗೋಪಾಳದಲ್ಲಿ ನಡೆದಿದ್ದು ಏನು? ಹೀಗೊಂದು ಪ್ರಶ್ನೆಯು ರಾತ್ರಿಯಿಂದಲೂ ನಾನಾ ಸ್ವರೂಪ ಪಡೆದುಕೊಳ್ಳುತ್ತಿದೆ.
ಮೆಗ್ಗಾನ್ ಬಳಿಯಲ್ಲಿ
ಶಿವಮೊಗ್ಗದ ಟಿಪ್ಪು ನಗರದಲ್ಲಿ ಎರಡು ಕೋಮುಗಳ ನಡುವೆ ಹೊಡೆದಾಟ ನಡೆದಿದೆ ಎಂಬ ಸುದ್ದಿಯೊಂದು ನಿನ್ನೆ ಸಂಜೆ 4-5 ಗಂಟೆಯಿಂದ ಗರಿಗೆದರಲು ಆರಂಭವಾಗಿತ್ತು. ಆದರೆ ಅದರ ಪೂರ್ವಪರ ತಿಳಿದುಬಂದಿರಲಿಲ್ಲ. ಆನಂತರ ಈ ಘಟನೆ ಬೆನ್ನಲ್ಲೆ ದ್ರೌಪದಮ್ಮ ಸರ್ಕಲ್ ಸಮೀಪ , ಓರ್ವನಿಗೆ ಭರ್ಚಿಯಿಂದ ಚುಚ್ಚಲಾಗಿದೆ ಎಂಬ ಸುದ್ದಿಯು ಹೊರಬಿದ್ದಿತ್ತು. ಈ ಘಟನೆ ಬೆನ್ನಲ್ಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಬಳಿಯಲ್ಲಿ ಸಂಘಟನೆಗಳ ಕಾರ್ಯಕರ್ತರು ಮುಖಂಡರು ಜಮಾಯಿಸಿದ್ದರು.
ಗಾಯಾಳು ಸಂದೇಶ್ ಹೇಳಿದ್ದೇನು?
ಇನ್ನೂ ಘಟನೆಯ ಬಗ್ಗೆ ಗಾಯಾಳು ಸಂದೇಶ್ ಹೇಳಿರುವ ಪ್ರಕಾರ, ಗೋಪಿಶೆಟ್ಟಿಕೊಪ್ಪದ ಬಳಿಯಲ್ಲಿಆಟೋ ಚಾಲಕನೊಬ್ಬ ಕಾರೊಂದಕ್ಕೆ ಉಜ್ಜಿಕೊಂಡು ಮುಂದಕ್ಕೆ ಹೋಗಿದ್ಧಾನೆ. ಈ ವೇಳೆ ಕಾರಿನ ಗ್ಲಾಸ್ ಒಡೆದು ಹೋಗಿದೆ. ಈ ವೇಳೆ ಕಾರ್ ನಲ್ಲಿದ್ದವರು ಸಂದೇಶ್ ಹಾಗೂ ನಾಲ್ಕೈದು ಜನ ಆಕ್ಸಿಡೆಂಟ್ ಮಾಡಿದವನನ್ನ ಹಿಡಿಯಲು ಪ್ರಯತ್ನಿಸಿ ಆತನಿಗೆ ಒಂದೆರಡು ಏಟು ಹೊಡೆದಿದ್ದಾರೆ.
ಅಷ್ಟರಲ್ಲಿ ಆತ ಅಲ್ಲಿಂದ ಎಸ್ಕೇಪ್ ಆಗಿದ್ಧಾನೆ. ಹಾಗಾಗಿ ಆತನನ್ನ ಹಿಡಿಯಲು ಸ್ನೇಹಿತನ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ಧಾರೆ. ಟಿಪ್ಪು ನಗರದಲ್ಲಿ ಆಟೋ ಡ್ರೈವರ್ ಪತ್ತೆಯಾಗುತ್ತಲೇ ಸಂದೇಶ್ ಹಾಗೂ ಉಳಿದವರು ಆಕ್ಸಿಡೆಂಟ್ ಮಾಡಿದ್ದರ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಸುಮಾರು 30 ಮಂದಿ ಜಮಾಯಿಸಿದ್ದರಂತೆ, ಅಲ್ಲದೆ ಪ್ರಶ್ನಿಸಲು ಬಂದವರ ಮೇಲೆ ಹಲ್ಲೆ ನಡೆಸಿದ್ದಾರೆ. ಸಂದೇಶ್ರನ್ನ ಗಾಡಿಯಿಂದ ಕೆಳಕ್ಕೆ ಬೀಳಿಸಿ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಸಂದೇಶ್ರ ಕಣ್ಣಿಗೆ ಘಟನೆಯಲ್ಲಿ ಪೆಟ್ಟಾಗಿದ್ದು ಮೆಗ್ಗಾನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ.
ಶಿವಮೊಗ್ಗದ ಟಿಪ್ಪು ನಗರದಲ್ಲಿ ನಡೆದ ಘಟನೆ ಬಗ್ಗೆ ಗಾಯಾಳು ಹೇಳಿದ್ದೇನು? ಇಲ್ಲಿದೆ ನೋಡಿ pic.twitter.com/s5Sl6IB06C — malenadutoday.com (@CMalenadutoday) June 26, 2023
ಇನ್ನೊಂದು ಘಟನೆಯೇನು?
ಇನ್ನೂ ಟಿಪ್ಪು ನಗರದಲ್ಲಿ ನಡೆದ ಘಟನೆ ಬೆನ್ನಲ್ಲೆ ಅಂದರೆ ಸುಮಾರು 6 ಗಂಟೆಗೆ ವಿಜಯಕುಮಾರ್ ಎಂಬಾತನ ಮೇಲೆ ದ್ರೌಪದಮ್ಮ ಸರ್ಕಲ್ ಬಳಿಯಲ್ಲಿ ಹಲ್ಲೆಯಾಗಿದೆ. ಪೊಲೀಸ್ ಮೂಲಗಳಿಂದ ಸಿಕ್ಕಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಜಯ್ ಕುಮಾರ್ ಎಂಬಾತನನ್ನ ದ್ರೌಪದಮ್ಮ ಸರ್ಕಲ್ ಬಳಿಗೆ ಬರುವಂತೆ ತಸ್ತ್ರು ಹಾಗೂ ಗುರುಸಿದ್ದಪ್ಪ ಎಂಬವರು ಕರೆಸಿಕೊಂಡಿದ್ದಾರೆ. ಅಲ್ಲದೆ ಆತನೊಂದಿಗೆ ಗಲಾಟೆ ತೆಗೆದು ಆತನಿಗೆ ಸ್ಕ್ರೂ ಡ್ರೈವರ್ ಭುಜಕ್ಕೆ ಚುಚ್ಚಿದ್ದಾರೆ. ಈ ಗಲಾಟೆಯು ವೈಯಕ್ತಿಕ ಕಾರಣಕ್ಕೆ ಆಗಿದ್ದು ಎಂಬ ಮಾಹಿತಿಯಿದೆ ಎಂದು ಎಸ್ಪಿ ಮಿಥುನ್ ಕುಮಾರ್ ವಾಟ್ಸ್ಯಾಪ್ ಮೆಸೇಜ್ನಲ್ಲಿ ಹೇಳಿದ್ಧಾರೆ.
ಎರಡು ಪ್ರಕರಣಗಳ ನಡುವೆ ಲಿಂಕ್!
ಇದರ ನಡುವೆ ಎರಡು ಪ್ರಕರಣಗಳ ನಡುವೆ ಲಿಂಕ್ಗಳು ಹೇಗೆ ಸೃಷ್ಟಿಯಾದವೋ ಗೊತ್ತಿಲ್ಲ. ಟಿಪ್ಪು ನಗರದಲ್ಲಿ ಗೋ ರಕ್ಷಣೆ ಮಾಡಬೇಕು ಎಂದು ಹೊರಟವರ ಮೇಲೆ ಹಲ್ಲೆ ಮಾಡಲಾಗಿದೆ. ಅವರನ್ನ ಮೆಗ್ಗಾನ್ನಲ್ಲಿ ನೋಡಲು ಬಂದ ವ್ಯಕ್ತಿಗೆ ದ್ರೌಪದಮ್ಮ ಸರ್ಕಲ್ನಲ್ಲಿ ಕರೆದು ಇರಿಯಲಾಗಿದೆ ಎಂಬ ಸುದ್ದಿಯೊಂದು ನಿನ್ನೆ ಗಾಳಿಗಿಂತಲೂ ವೇಗವಾಗಿ ಹರಡಿತ್ತು. ಅಲ್ಲದೆ ಮೆಗ್ಗಾನ್ ಆಸ್ಪತ್ರೆಯ ಬಳಿಯಲ್ಲಿ ಸಂಘಟನೆಗಳ ಮುಖಂಡರು ಜಮಾಯಿಸಿದ್ದು, ಇರುವ ವದಂತಿ ಇನ್ನಷ್ಟು ರೆಕ್ಕೆಪುಕ್ಕ ಬರುವಂತೆ ಆಗಿತ್ತು.
ಸ್ಪಷ್ಟನೆ ನೀಡಿದ ಎಸ್ಪಿ ಮಿಥುನ್ ಕುಮಾರ್
ಆನಂತರ ಎಸ್ಪಿ ಮಿಥುನ್ ಕುಮಾರ್ ಇದೆಲ್ಲಾ ಫೇಕ್ ನ್ಯೂಸ್, ಎರಡು ಘಟನೆಗಳಿಗೂ ಸಂಬಂಧವಿಲ್ಲ. ಅದು ಬೇರೆಯ ಘಟನೆ ಇದು ಬೇರೆಯ ಘಟನೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ ಈ ಸಂಬಂಧ ಹರಡುತ್ತಿರುವ ಸುದ್ದಿಗಳನ್ನು ಪ್ರಸ್ತಾಪಿಸಿ, ಇಂತಹ ಘಟನೆಗಳು ನಡೆದಿಲ್ಲ. ಒಂದು ಘಟನೆ ಡ್ರಂಕ್ನ್ ಡ್ರೈವ್ ಪ್ರಕರಣವಾಗಿದ್ದರೇ, ಇನ್ನೊಂದು ಘಟನೆ ವೈಯಕ್ತಿಕ ಕಾರಣಕ್ಕೆ ನಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದರು.
ಇಬ್ಬರ ಬಂಧನ
ಇನ್ನೂ ಸಂದೇಶ್ ಹಾಗೂ ಜಿತೇಂದ್ರ ಎಂಬಿಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಈ ಬಗ್ಗೆಯು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಒಟ್ಟಾರೆ ತುಂಗಾನಗರ ಪೊಲೀಸ್ ಸ್ಟೇಷನ್ ಲಿಮಿಟ್ನಲ್ಲಿ ನಿನ್ನೆ ನಡೆದಿದ್ದ ಘಟನೆ ಗಾಳಿಸುದ್ದಿಯಾಗಿ ನಾನಾ ರೂಪ ಪಡೆದುಕೊಳ್ಳುವುದಕ್ಕಿಂತಲೂ ಮೊದಲು ಪೊಲೀಸರು ಘಟನೆಯ ಸ್ಪಷ್ಟ ಚಿತ್ರಣವನ್ನ ನೀಡಿದ್ಧಾರೆ. ಇದೇ ರೀತಿಯಲ್ಲಿ ಪೊಲೀಸರು ವಿಷಯವನ್ನು ಇನ್ನಷ್ಟು ಸ್ಪಷ್ಟವಾಗಿ ನೀಡಿದರೇ, ಹಲವು ಘಟನೆಗಳ ಹಿಂದಿನ ಫೇಕ್ ನ್ಯೂಸ್ಗಳನ್ನು ತಡೆಯಬಹುದಾಗಿದೆ.