ಹುತಾತ್ಮ ವೀರ ಶಿವಮೂರ್ತಿ ಸರ್ಕಲ್ ನಲ್ಲಿ ನಡೆದಿದ್ದಾರು ಏನು? ಕಾಣೆಯಾದ ಬೋರ್ಡ್ ಬದಲಿಗೆ ಬಂತು ಮತ್ತೊಂದು ನಾಮಫಲಕ!
What happened at martyr Veera Shivamurthy Circle? The missing board was replaced by another nameplate!
![ಹುತಾತ್ಮ ವೀರ ಶಿವಮೂರ್ತಿ ಸರ್ಕಲ್ ನಲ್ಲಿ ನಡೆದಿದ್ದಾರು ಏನು? ಕಾಣೆಯಾದ ಬೋರ್ಡ್ ಬದಲಿಗೆ ಬಂತು ಮತ್ತೊಂದು ನಾಮಫಲಕ!](https://malenadutoday.com/uploads/images/202307/image_750x_64ad2a9ed1120.jpg)
KARNATAKA NEWS/ ONLINE / Malenadu today/ Jul 11, 2023 SHIVAMOGGA NEWS
ಶಿವಮೊಗ್ಗ/ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ನಡುವೆ ಪ್ರಮುಖ ಸರ್ಕಲ್ಗಳಲ್ಲಿ ಹಲವು ಯಡವಟ್ಟುಗಳು ನಡೆದಿದ್ದರ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಹೊಸದನ್ನೇನೋ ಮಾಡುವ ಸಲುವಾಗಿ, ಹಿಂದಿನಿಂದಲೂ ಇದ್ದ ಬೋರ್ಡ್ಗಳನ್ನು ತೆಗೆದುಹಾಕುವ ಕೆಲಸವಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕಳೆದ ಒಂಬತ್ತನೇ ತಾರೀಖು ಹುತಾತ್ಮ ವೀರ ಶಿವಮೂರ್ತಿ ಹೆಸರಿನ ಬೋರ್ಡ್ ಶಿವಮೂರ್ತಿ ಸರ್ಕಲ್ನಿಂದ ಕಾಣೆಯಾಗಿರುವ ಬಗ್ಗೆ ಟುಡೆ ತಂಡ ವರದಿ ಮಾಡಿತ್ತು. ಅಲ್ಲದೆ ಈ ಸಂಬಂಧ ಮೇಯರ್ ಹಾಗೂ ಶಾಸಕರನ್ನು ಮಾತನಾಡಿಸಿತ್ತು. ಮೇಯರ್ ನನಗೆ ಈ ಬಗ್ಗೆ ಮಾಹಿತಿಯಿಲ್ಲ ಎಂದಿದ್ದರು. ಶಾಸಕರು ಸರ್ಕಲ್ನಲ್ಲಿ ಶಿಲೆಯಿಂದ ಕೆತ್ತಿದ ನಾಮಫಲಕ ಬರುತ್ತದೆ ಎಂದಿದ್ದರು
ಇತ್ತ ಸ್ಮಾರ್ಟ್ ಸಿಟಿ ಕಾಮಗಾರಿ ಬೇರೆ ಬೇರೆ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬ ಆರೋಪದ ನಡುವೆ ಸರ್ಕಲ್ನಲ್ಲಿದ್ದ ಶಿವಮೂರ್ತಿಯವರ ನಾಮಫಲಕ ನಾಪತ್ತೆಯಾಗಿ ಎರಡು ತಿಂಗಳೇ ಕಳೇದಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡಿದ್ದರು. ಅಲ್ಲದೆ ಬೋರ್ಡ್ನ್ನ ಮತ್ತೆ ಹಾಕುತ್ತಾರಾ ಇಲ್ಲವೋ ಎಂದು ಅನುಮಾನಿಸಿದ್ದರು. ಇದೀಗ ಶಿವಮೂರ್ತಿ ಸರ್ಕಲ್ನಲ್ಲಿ ವೀರ ಶಿವಮೂರ್ತಿಯವರ ನಾಮಫಲಕವನ್ನು ಮತ್ತೆ ಸ್ಥಾಪಿಸಲಾಗಿದೆ. ಶಿಲೆಯಲ್ಲಿ ಕೆತ್ತಿದ ನಾಮಫಲಕ ಇದಲ್ಲವಾದರೂ, ಹಳೆಯ ಸ್ಥಳದಲ್ಲಿಯೇ ಮತ್ತೆ ನಾಮಫಲಕವನ್ನು ನಿಲ್ಲಿಸಿರುವುದು ಸ್ಥಳೀಯರಿಗೆ ಸಮಾಧಾನ ತಂದಿದೆ.
ಶಿವಮೂರ್ತಿಯವರ ನಾಮಫಲಕದ ಹಿನ್ನೆಲೆ ಏನು? ವಿಶೇಷತೆ ಏನು ಎಂಬುದರ ಬಗೆಗಿನ ಸುದ್ದಿ ಇಲ್ಲಿದೆ ಓದಿ : ಕಾಣೆಯಾದ ಹುತಾತ್ಮ ವೀರ ಶಿವಮೂರ್ತಿಯವರ ನಾಮಫಲಕ? 2 ತಿಂಗಳಿಂದ ಸರ್ಕಲ್ನಲ್ಲಿಲ್ಲ 7 ದಶಕದ ಬೋರ್ಡ್? ಶಾಸಕರು-ಮೇಯರ್ ಹೇಳಿದ್ದೇನು?