ಹುತಾತ್ಮ ವೀರ ಶಿವಮೂರ್ತಿ ಸರ್ಕಲ್​ ನಲ್ಲಿ ನಡೆದಿದ್ದಾರು ಏನು? ಕಾಣೆಯಾದ ಬೋರ್ಡ್​ ಬದಲಿಗೆ ಬಂತು ಮತ್ತೊಂದು ನಾಮಫಲಕ!

What happened at martyr Veera Shivamurthy Circle? The missing board was replaced by another nameplate!

ಹುತಾತ್ಮ ವೀರ ಶಿವಮೂರ್ತಿ ಸರ್ಕಲ್​ ನಲ್ಲಿ ನಡೆದಿದ್ದಾರು ಏನು? ಕಾಣೆಯಾದ ಬೋರ್ಡ್​ ಬದಲಿಗೆ ಬಂತು ಮತ್ತೊಂದು ನಾಮಫಲಕ!

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   

ಶಿವಮೊಗ್ಗ/ ನಗರದಲ್ಲಿ ಸ್ಮಾರ್ಟ್​ ಸಿಟಿ ಕಾಮಗಾರಿಯ ನಡುವೆ ಪ್ರಮುಖ ಸರ್ಕಲ್​ಗಳಲ್ಲಿ ಹಲವು ಯಡವಟ್ಟುಗಳು ನಡೆದಿದ್ದರ ಬಗ್ಗೆ  ಮಲೆನಾಡು ಟುಡೆ ವರದಿ ಮಾಡಿತ್ತು. ಹೊಸದನ್ನೇನೋ ಮಾಡುವ ಸಲುವಾಗಿ, ಹಿಂದಿನಿಂದಲೂ ಇದ್ದ ಬೋರ್ಡ್​ಗಳನ್ನು ತೆಗೆದುಹಾಕುವ ಕೆಲಸವಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕಳೆದ ಒಂಬತ್ತನೇ ತಾರೀಖು ಹುತಾತ್ಮ ವೀರ ಶಿವಮೂರ್ತಿ ಹೆಸರಿನ ಬೋರ್ಡ್​ ಶಿವಮೂರ್ತಿ ಸರ್ಕಲ್​ನಿಂದ ಕಾಣೆಯಾಗಿರುವ ಬಗ್ಗೆ ಟುಡೆ ತಂಡ ವರದಿ ಮಾಡಿತ್ತು. ಅಲ್ಲದೆ ಈ ಸಂಬಂಧ ಮೇಯರ್ ಹಾಗೂ ಶಾಸಕರನ್ನು ಮಾತನಾಡಿಸಿತ್ತು. ಮೇಯರ್ ನನಗೆ ಈ ಬಗ್ಗೆ ಮಾಹಿತಿಯಿಲ್ಲ ಎಂದಿದ್ದರು. ಶಾಸಕರು ಸರ್ಕಲ್​ನಲ್ಲಿ ಶಿಲೆಯಿಂದ ಕೆತ್ತಿದ ನಾಮಫಲಕ ಬರುತ್ತದೆ ಎಂದಿದ್ದರು

ಇತ್ತ ಸ್ಮಾರ್ಟ್ ಸಿಟಿ ಕಾಮಗಾರಿ ಬೇರೆ ಬೇರೆ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬ ಆರೋಪದ ನಡುವೆ ಸರ್ಕಲ್​ನಲ್ಲಿದ್ದ ಶಿವಮೂರ್ತಿಯವರ ನಾಮಫಲಕ ನಾಪತ್ತೆಯಾಗಿ ಎರಡು ತಿಂಗಳೇ ಕಳೇದಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡಿದ್ದರು. ಅಲ್ಲದೆ ಬೋರ್ಡ್​ನ್ನ ಮತ್ತೆ ಹಾಕುತ್ತಾರಾ ಇಲ್ಲವೋ ಎಂದು ಅನುಮಾನಿಸಿದ್ದರು. ಇದೀಗ ಶಿವಮೂರ್ತಿ ಸರ್ಕಲ್​ನಲ್ಲಿ ವೀರ ಶಿವಮೂರ್ತಿಯವರ ನಾಮಫಲಕವನ್ನು ಮತ್ತೆ ಸ್ಥಾಪಿಸಲಾಗಿದೆ. ಶಿಲೆಯಲ್ಲಿ ಕೆತ್ತಿದ ನಾಮಫಲಕ ಇದಲ್ಲವಾದರೂ, ಹಳೆಯ ಸ್ಥಳದಲ್ಲಿಯೇ ಮತ್ತೆ ನಾಮಫಲಕವನ್ನು ನಿಲ್ಲಿಸಿರುವುದು ಸ್ಥಳೀಯರಿಗೆ ಸಮಾಧಾನ ತಂದಿದೆ. 

ಶಿವಮೂರ್ತಿಯವರ ನಾಮಫಲಕದ ಹಿನ್ನೆಲೆ ಏನು? ವಿಶೇಷತೆ ಏನು ಎಂಬುದರ ಬಗೆಗಿನ ಸುದ್ದಿ ಇಲ್ಲಿದೆ ಓದಿ : ಕಾಣೆಯಾದ ಹುತಾತ್ಮ ವೀರ ಶಿವಮೂರ್ತಿಯವರ ನಾಮಫಲಕ? 2 ತಿಂಗಳಿಂದ ಸರ್ಕಲ್​​ನಲ್ಲಿಲ್ಲ 7 ದಶಕದ ಬೋರ್ಡ್​? ಶಾಸಕರು-ಮೇಯರ್​ ಹೇಳಿದ್ದೇನು?