ವಾಲಿಬಾಲ್ ಟೂರ್ನಿಗೆ ಹೊರಟ ಆಟಗಾರರಿಬ್ಬರ ದುರ್ಮರಣ! ಸೊರಬದಲ್ಲಿ ಸಾವನ್ನಪ್ಪಿದ ರಿಪ್ಪನ್​ಪೇಟೆ ಯುವಕರು

Two natives of Ripponpet died near Chandragutti in Soraba ರಿಪ್ಪನ್​ಪೇಟೆ ಮೂಲದ ಇಬ್ಬರು ಸೊರಬದ ಚಂದ್ರಗುತ್ತಿ ಸಮೀಪ ಸಾವನ್ನಪ್ಪಿದ್ದಾರೆ

ವಾಲಿಬಾಲ್ ಟೂರ್ನಿಗೆ ಹೊರಟ ಆಟಗಾರರಿಬ್ಬರ ದುರ್ಮರಣ! ಸೊರಬದಲ್ಲಿ ಸಾವನ್ನಪ್ಪಿದ ರಿಪ್ಪನ್​ಪೇಟೆ ಯುವಕರು

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS

Shivamogga |  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಸಂಭವಿಸಿದ ಘಟನೆಯೊಂದರಲ್ಲಿ  ಇಬ್ಬರು ಸಾವನ್ನಪ್ಪಿದ್ದಾರೆ. ಸೊರಬದ ಚಂದ್ರಗುತ್ತಿ ಸಮೀಪದ ನ್ಯಾರ್ಶಿ ಬಳಿಯಲ್ಲಿ ಬೈಕ್​ವೊಂದು ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. 

ಮೃತರು  ಹೊಸನಗರ ತಾಲೂಕು ರಿಪ್ಪನ್’ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ನಿವಾಸಿಗಳು. ಸುಬ್ರಹ್ಮಣ್ಯ (20) ಹಾಗೂ ಹರ್ಷ (20).  ಚಂದ್ರಗುತ್ತಿ ಸಮೀಪದ ಕೆಂಚಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಹೊನಲು – ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ರು.

READ : ರಿಪ್ಪನ್​ಪೇಟೆ ಪೊಲೀಸರ ಕಾರ್ಯಾಚರಣೆ ! 15 ದಿನಗಳಲ್ಲಿ ಸಿಕ್ಕಿಬಿದ್ದ ಮೂವರು ಕಳ್ಳರು!

ಆದರೆ ವಿದಿಯಾಟ ಬೇರೆಯದ್ದಾಗಿತ್ತು ,  ನ್ಯಾರ್ಶಿ ರಸ್ತೆಯ ತಿರುವಿನ ಬಳಿ ಬೈಕ್​ ಕಂಟ್ರೋಲ್​ ತಪ್ಪಿ ಬಂದ ವೇಗದಲ್ಲಿಯೇ ಮರಕ್ಕೆ ಗುದ್ದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಬೈಕ್​ ನುಜ್ಜುಗುಜ್ಜಾಗಿದ್ದು, ಸೊರಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.