ಮದುವೆಯಾದ ಮೇಲೆಯು ಗೆಳತನ ಬಿಡದ ಸ್ನೇಹಿತೆಯರು! ಗೆಳತಿಯ ಸಂಸಾರ ಸರಿಪಡಿಸಲು ಹೋಗಿ ಚಾಕುವಿನಿಂದ ಇರಿತಕ್ಕೊಳಗಾದರು!

Two girlfriends stabbed to death when they went to settle a friend's family dispute

ಮದುವೆಯಾದ ಮೇಲೆಯು ಗೆಳತನ ಬಿಡದ ಸ್ನೇಹಿತೆಯರು! ಗೆಳತಿಯ ಸಂಸಾರ ಸರಿಪಡಿಸಲು  ಹೋಗಿ ಚಾಕುವಿನಿಂದ ಇರಿತಕ್ಕೊಳಗಾದರು!

KARNATAKA NEWS/ ONLINE / Malenadu today/ May 31, 2023 SHIVAMOGGA NEWS

ಶಿವಮೊಗ್ಗ/ ಗಂಡನಿಂದ ಮನನೊಂದು ಮನೆಬಿಟ್ಟು ಬಂದಿದ್ದ ಸ್ನೇಹಿತೆಯ ಪರವಾಗಿ ನಿಂತಿದ್ದಕ್ಕೆ ಗೆಳತಿಯ ಪತಿ ಹಾಗೂ ಆತನ ಸಂಬಂಧಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಅಶ್ವಥ್​ ನಗರದಲ್ಲಿ ನಡೆದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ಕೂಡ ದಾಖಲಾಗಿದೆ. 

ನಡೆದಿದ್ದೇನು?

ಅಶ್ವಥ್​ ನಗರದ ನಿವಾಸಿ ಯುವತಿಯೊಬ್ಬರು ತಮ್ಮ ಗಂಡನ ಮನೆಯ ಸಮಸ್ಯೆಯಿಂದ ಬೇಸತ್ತು ಮನೆಬಿಟ್ಟು ಹೋಗುವುದಾಗಿ, ಆಕೆಯ ಇಬ್ಬರು ಸ್ನೇಹಿತೆಯರಿಗೆ ಹೇಳಿದ್ಧಾರೆ. ಈ ವೇಳೆ ಆಕೆಯನ್ನು ಸಮಾಧಾನ ಮಾಡಿದ ದೂರುದಾರ ಮಹಿಳೆಯು, ಶಿವಮೊಗ್ಗ ಖಾಸಗಿ ಬಸ್​ಸ್ಟ್ಯಾಂಡ್​ನಲ್ಲಿ ಆಕೆಯನ್ನು ಸಮಾಧಾನ ಪಡಿಸಿದ್ಧಾರೆ . ಅಲ್ಲದೆ ಮೂವರು  ಸೇರಿ, ನೊಂದ ಯುವತಿಯ ಗಂಡನ ಮನೆಯ ಕಡೆಯವರಿಗೆ ಫೋನ್ ಮಾಡಿದ್ದಾರೆ.  ಆಗ ಸ್ನೇಹಿತೆಯ ಪತಿಯು, ಮೂವರನ್ನು  ಚೌಡಮ್ಮ ದೇವಸ್ಥಾನದ ಹತ್ತಿರ ಬರಲು ಹೇಳಿದ್ಧಾನೆ. ಅಲ್ಲಿಗೆ ಮೂವರು ಸ್ನೇಹಿತೆಯರು ಒಟ್ಟಿಗೆ ಹೋಗಿದ್ದಾರೆ. ಆದರೆ ಅಲ್ಲಿ ಆರೋಪಿ ಹಾಗೂ ಆತನ ಸಂಬಂಧಿ ಈ ಮೂವರ ಮೇಲೆ ಹಲ್ಲೆ ಮಾಡಿದ್ಧಾರೆ. ಅಲ್ಲದೆ ಈ ವೇಳೆ ಕುಮಾರ್ ಎಂಬಾತ ಚಾಕು ತೆಗೆದು ಇಬ್ಬರು ಯುವತಿಯರಿಗೆ ಚುಚ್ಚಿದ್ದಾನೆ. ಇದರಿಂದ ಇಬ್ಬರು ಗಾಯಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರು ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.