thirthahalli: ತೀರ್ಥಹಳ್ಳಿಯ ಬಿಳುಕೊಪ್ಪದಲ್ಲಿ ಅಪಘಾತ, ಬೈಕ್ ಸವಾರ ಸಾವು
ತೀರ್ಥಹಳ್ಳಿ ತಾಲೂಕಿನ ಬಿಳುಕೊಪ್ಪ ಶಾಲೆಯು ಎದುರು ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಹುಂಚದ ಕಟ್ಟೆಯ ಕೈಮರ ನಿವಾಸಿ ಚೇತನ್ ಮೃತ ಸವಾರ ಎಂದು ತಿಳಿದು ಬಂದಿದೆ.
ಬಿಳುಕೊಪ್ಪ ಶಾಲೆಯ ಮುಂಭಾಗ ಇದುವರೆಗೂ 50 ಕ್ಕೂ ಹೆಚ್ಚು ಅಪಘಾತಗಳು ನಡೆದಿದೆ. ಆ ಪ್ರದೇಶದಲ್ಲಿ ರಸ್ತೆ ಚಿಕ್ಕದಿದ್ದು ತಿರುವು ಇರುವುದರಿಂದ ವಾಹನಗಳಿಗೆ ಎದುರು ಬರುವ ವಾಹನಗಳು ಕಾಣದೇ ಇರುವುದೇ ಅಪಘಾತಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರು ರಸ್ತೆ ಅಗಲೀಕರಣ ಮಾಡಿ ಇನ್ನು ಮುಂದಾದರೂ ಆಗುವ ಅಪಘಾತಗಳನ್ನು ತಡೆಯಲಿ ಎಂಬುವುದು ಸ್ಥಳೀಯರ ಆಗ್ರಹವಾಗಿದೆ.