ಚೋರಡಿ ಬಳಿ ಭೀಕರ ಅಪಘಾತ / ಎರಡು ಬಸ್ ಗಳ ಮುಖಾಮುಖಿ ಡಿಕ್ಕಿ...ಸ್ಥಳದಲ್ಲಿ ಮೂವರ ಸಾವು, 20 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

Terrible accident near Choradi/ Head-on collision of two buses... Three killed, more than 20 seriously injured at the spot

ಚೋರಡಿ ಬಳಿ ಭೀಕರ ಅಪಘಾತ / ಎರಡು ಬಸ್ ಗಳ ಮುಖಾಮುಖಿ ಡಿಕ್ಕಿ...ಸ್ಥಳದಲ್ಲಿ ಮೂವರ ಸಾವು, 20 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

KARNATAKA NEWS/ ONLINE / Malenadu today/ May 11, 2023 GOOGLE NEWS 

ಶಿವಮೊಗ್ಗ ಜಿಲ್ಲೆಯ ಚೋರಡಿಯ ಬಳಿ ಭೀಕರ ಅಪಘಾತವನ್ನು ಸಂಭವಿಸಿದೆ ಎರಡು ಬಸ್ಸುಗಳ ನಡುವೆ ಪರಸ್ಪರ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ ಪ್ರಕಾರ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ  ಖಾಸಗಿ ಬಸ್ ಗಳು ಚೋರಡಿ ಹಳೆ ಸೇತುವೆಯ ಬಳಿ ತಿರುವಿನಲ್ಲಿ ಡಿಕ್ಕಿಯಾಗಿವೆ ಡಿಕ್ಕಿಯಾದ ರಭಸಕ್ಕೆ ಒಂದು ಬಸ್ ನಲ್ಲಿರುವ ಬಹುತೇಕರು ಗಾಯಗೊಂಡಿದ್ದಾರೆ ಎರಡು ಬಸ್ ಗಳು ಶಿಕಾರಿಪುರದ ರೂಟ್ ಬಸ್ ಗಳಾಗಿದ್ದು ಪರಸ್ಪರ ಡಿಕ್ಕಿಯಾಗಿದೆ ಕುಮದ್ದತಿ ಸೇತುವೆ ಬಳಿ ಘಟನೆ ನಡೆದಿದ್ದು ಸ್ಥಳಕ್ಕೆ ನಾಲ್ಕು ಆಂಬುಲೆನ್ಸ್ ಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ

_       

ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಚುನಾವಣೆಯನ್ನ ಯಶಸ್ವಿಯಾಗಿ ಮುಗಿಸಿದ ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ಈ ನಡುವೆ ಮತದಾನ ಅಂಕಿಅಂಶಗಳ ಬಗ್ಗೆ ಚರ್ಚೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ವಿಚಾರದಲ್ಲಿ  ಅಂಕಿ ಅಂಶಗಳನ್ನು ಗಮನಿಸುವುದಾದರೆ, ಇದುವರೆಗೂ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಕಳೆದ 2018 ಚುನಾವಣೆಗಿಂತಲು ತುಸು ಕಡಿಮೆ ಮತದಾನ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿದೆ. 

2018ರ ಚುನಾವಣೆಗೆ ಹೋಲಿಸಿದರೆ ಈ ಸಲ ಶೇ.0.44ರಷ್ಟು ಇಳಿಕೆಯಾಗಿದೆ. 2018ರಲ್ಲಿ ಶೇ.78.72ರಷ್ಟು ಮತದಾನವಾಗಿತ್ತು. 2023ರಲ್ಲಿ ಶೇ.78.28ರಷ್ಟು ಮತದಾನವಾಗಿದೆ.

ಇನ್ನೂ ತೀರ್ಥಹಳ್ಳಿಯಲ್ಲಿ ಈ ಸಲ ಅತ್ಯದಿಕ ಮತದಾನವಾಗಿದ್ದು, 2018ರ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಶೇ.84.83ರಷ್ಟು ಮತದಾನವಾಗಿತ್ತು.  ಈ ಸಲವೂ ಕಳೆದ ಚುನಾವಣೆಯಲ್ಲಿ ಆದಷ್ಟೇ ಮತದಾನವಾಗಿದೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಅತಿಹೆಚ್ಚು ಮತದಾನದ ಕ್ಷೇತ್ರಗಳ ಪೈಕಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ  2018 ರ ಚುನಾವಣೆಯಲ್ಲಿ ಶೇಕಡಾ 81.07 ರಷ್ಟು ಮತದಾನವಾಗಿತ್ತು ಈ ಸಲ 83.71 ರಷ್ಟು ಮತದಾನವಾಗಿದೆ. 

 

ಶಿವಮೊಗ್ಗ ನಗರ ಹಾಗೂ ಭದ್ರಾವತಿ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದ್ದು, 2018 ರಲ್ಲಾದ ಮತದಾನದ ಪ್ರಮಾಣಕ್ಕಿಂತ ಹೆಚ್ಚು ಮತದಾನವಾಗಿದೆ. 

 

ಭದ್ರಾವತಿಯಲ್ಲಿ 2018ರಲ್ಲಿ ಶೇ.73.13ರಷ್ಟು ಮತದಾನವಾಗಿತ್ತು. 2023ರಲ್ಲಿ ಶೇ.68.47ರಷ್ಟು ಮತದಾನವಾಗಿದ್ದು, ಶೇ.4.66ರಷ್ಟು ಇಳಿಕೆಯಾಗಿದೆ.

ಸೊರಬ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ.84.47ರಷ್ಟು ಮತದಾನವಾಗಿತ್ತು. ಈ ಸಲ ಶೇ.82.97ರಷ್ಟಾಗಿದ್ದು, ಶೇ.1.5ರಷ್ಟು ಮತದಾನ ಕಡಿಮೆಯಾಗಿದೆ.

ಶಿಕಾರಿಪುರದಲ್ಲಿ ಶೇ.0.85, ಶಿವಮೊಗ್ಗದಲ್ಲಿ ಶೇ.2.16, ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.2.64, ಶಿಕಾರಿಪುರದಲ್ಲಿ ಶೇ.0.92 ಹಾಗೂ ಸಾಗರದಲ್ಲಿ ಶೇ.0.85ರಷ್ಟು ಮತದಾನದಲ್ಲಿ ಹೆಚ್ಚಳವಾಗಿದೆ




ಶಿವಮೊಗ್ಗ ಜಿಲ್ಲೆ

2018

2023

ಭದ್ರಾವತಿ

73.13

68.47

ಸಾಗರ

79.35

80.2

ಶಿಕಾರಿಪುರ

81.65

82.57

ಶಿವಮೊಗ್ಗ

66.58

68.74

ಶಿವಮೊಗ್ಗ ಗ್ರಾ.

81.07

83.71

ಸೊರಬ

84.47

82.97

ತೀರ್ಥಹಳ್ಳಿ

84.83

84.83

ಒಟ್ಟು

78.72

78.28





ತೀರ್ಥಹಳ್ಳಿ/ ಶಿವಮೊಗ್ಗ  ಇಲ್ಲಿನ ಮೇಗರವಳ್ಳಿ ಸಮೀಪ ಅರೆಕಲ್ಲು ಬಳಿ ಆಗುಂಬೆ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ದೊಡಮಘಟ್ಟದಿಂದ ಮಂಗಳೂರು ವೆನ್​ ಲಾಕ್ ಆಸ್ಪತ್ರೆಗೆ ರೋಗಿಯೊಬ್ಬರನ್ನ ನೋಡಲು ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. 

ಇವತ್ತು ಮಧ್ಯಾಹ್ನ ಒಂದುವರೆ ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬೈಕ್​ ನಲ್ಲಿ ವೆನ್​ಲಾಕ್ ಆಸ್ಪತ್ರೆಗೆ ಇಬ್ಬರು ಭದ್ರಾವತಿಯಿಂದ ಹೊರಟಿದ್ದರು. ಈ ವೇಳೆ ಆಗುಂಬೆಯ ಕಡೆಯಿಂದ ಬರುತ್ತಿದ್ದ ಕಾರೊಂದು ಓವರ್​ ಸ್ಪೀಡ್​ನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್​ನಲ್ಲಿದ್ದ ಇಬ್ಬರು ಸಹ ಬಹಳಷ್ಟು ದೂರ ಹೋಗಿ ಬಿದ್ದಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿವೆ.

ಮಾನವೀಯತೆ ಮೆರೆದ ಆ್ಯಂಬುಲೆನ್ಸ್ ಚಾಲಕರು

ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ತೀರ್ಥಹಳ್ಳಿಯ ಆ್ಯಂಬುಲೆನ್ಸ್​ ಚಾಲಕರು ರೆಹಮತ್, ಅನ್ಸರ್ ಹಾಗೂ ರಂಜಿತ್ ಗಾಯಾಳುಗಳ ಸಹಾಯಕ್ಕೆ ನಿಂತಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಮ್ತಿಯಾಜ್ ಹಾಗೂ ಫೈರೋಜ್​ ರನ್ನ ಆ್ಯಂಬುಲೆನ್ಸ್​ನಲ್ಲಿ ಸೀದಾ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ಧಾರೆ.

ಗಾಯಾಳುಗಳ ಬಳಿ ಇದ್ದ ಹಣ ಒಪ್ಪಿಸಿದ ಚಾಲಕರು

ಅಲ್ಲದೆ ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಗಾಯಾಳುಗಳ ಬಳಿ ಇದ್ದ ಒಂದು ಲಕ್ಷ ರೂಪಾಯಿ ಹಾಗೂ ಮೊಬೈಲ್ ಗಳನ್ನು ಅವರಿಗೆ ಒಪ್ಪಿಸಿದ್ಧಾರೆ. ಸದ್ಯ ಮಣಿಪಾಲ್​ನ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆಯುತ್ತಿರುವ ಇಬ್ಬರ ಸ್ಥಿತಿಯು ಗಂಭೀರವಾಗಿದೆ . ಇನ್ನೂ ಆ್ಯಂಬುಲೆನ್ಸ್ ಚಾಲಕರ ಸಹಾಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. 

ಶಿವಮೊಗ್ಗ ಪೊಲೀಸ್ ಇಲಾಖೆಯ ಬ್ಲ್ಯಾಕ್ ಬ್ಯೂಟಿ ಗೌರಿ ಇನ್ನಿಲ್ಲ

ಪೊಲೀಸ್ ಇಲಾಖೆಯ ಅಚ್ಚುಮೆಚ್ಚಿನ ಶ್ವಾನ ಗೌರಿ ಇನ್ನಿಲ್ಲ.  ಶಿವಮೊಗ್ಗ ಜಿಲ್ಲೆಯ ಅಪರಾಧ ಪತ್ತೆ ದಳದಲ್ಲಿ ಬ್ಲ್ಯಾಕ್​ ಬ್ಯೂಟಿಯಾಗಿ ಕೆಲಸ ಮಾಡುತ್ತಿದ್ದ ಗೌರಿ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಗೆ ಶಿವಮೊಗ್ಗ ಪೊಲೀಸ್ ಇಲಾಖೆ ಸಕಲ ಸರ್ಕಾರಿ ಗೌರವದ ಜೊತೆ ಅಂತಿಮ ನಮನ ಸಲ್ಲಿಸಲಾಗಿದೆ. 

ಯಾರಿ ಗೌರಿ?  

ಲ್ಯಾಬ್ರಡಾರ್‌ ರಿಟ್ರೀವರ್‌ ತಳಿ ಗೌರಿ ಹೆಸರಿನ ಶ್ವಾನ ಹುಟ್ಟಿದ್ದು 2012 ರ ಆಗಸ್ಟ್​ 3 ರಂದು. ಆನಂತರ ಈ ಶ್ವಾನವನ್ನು ಅಪರಾಧ ಪತ್ತೆದಳಕ್ಕೆ 2013 ರಲ್ಲಿ ಸೇರಿಸಿಕೊಳ್ಳಲಾಗಿತ್ತು. ಅಲ್ಲಿಂದ ಪೊಲೀಸ್ ಇಲಾಖೆಯೊಂದಿಗೆ ತನ್ನ ಸರ್ಕಾರಿ ಕರ್ತವ್ಯ ನಿರ್ವಹಿಸ್ತಿದ್ದ ಗೌರಿ, ಬರೋಬ್ಬರಿ 36 ಕೇಸ್​ಗಳಲ್ಲಿ ಪೊಲೀಸರಿಗೆ ಅಪರಾಧಿಯ ಸುಳಿವು ನೀಡಿದ್ಧಾಳೆ. 

ಕನ್ನಡದಲ್ಲಿ ಕಮ್ಯಾಂಡ್

312 ಪ್ರಕರಣಗಳಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದ ಗೌರಿ ಕನ್ನಡದಲ್ಲಿಯೇ ಕಮಾಂಡ್ ಪಡೆದುಕೊಂಡು ಅದರಂತೆ ನಡೆಯುತ್ತಿದ್ದಳು. 

ಲೋಕೇಶ್ ನೋಡಿಕೊಳ್ತಿದ್ದ ಶ್ವಾನ

ಪೊಲೀಸ್​ ಸಿಬ್ಬಂದಿ ಲೋಕೇಶ್​ರವರ ತೆಕ್ಕೆಯಲ್ಲಿದ್ದ ಶ್ವಾನ ಹಲವು ಶ್ವಾನ ಪ್ರದರ್ಶನಗಳಲ್ಲಿಯು ಪಾಲ್ಗೊಂಡು ಜನರನ್ನ ರಂಜಿಸಿದೆ. ಪೊಲೀಸ್ ಇಲಾಖೆಯಲ್ಲಿ ಅಚ್ಚುಮೆಚ್ಚಿನ ಶ್ವಾನವಾಗಿದ್ದ ಬ್ಲ್ಯಾಕ್​ ಬ್ಯೂಟಿ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ಧಾಳೆ. 

ಡಿಆರ್​ಆರ್​ ಗ್ರೌಂಡ್​ನಲ್ಲಿ ಅಂತಿಮ ನಮನ

ಚುನಾವಣಾ ಕರ್ತವ್ಯದ ನಡುವೆಯು ಎಸ್​ ಮಿಥುನ್ ಕುಮಾರ್ ಗೌರಿಶ್ವಾನಕ್ಕೆ ಅಂತಿಮ ನಮನವನ್ನು ಸಲ್ಲಿಸಿದ್ಧಾರೆ. ಡಿಎಆರ್​ ಗ್ರೌಂಡ್​ ನಲ್ಲಿ ಗೌರಿಗೆ ಸರ್ಕಾರಿ ಅಂತಿಮ ಗೌರವನ್ನು ಸಲ್ಲಿಸಲಾಗಿದೆ. ಈ ವೇಳೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ತಿತರಿದ್ದರು.  

ಮತದಾನ ಮುಗಿಯುತ್ತಲೇ ಶಿವಮೊಗ್ಗದ ಹಲವೆಡೆ ವರುಣಾಗಮನ

ಶಿವಮೊಗ್ಗ ದಲ್ಲಿ ಮೋಚಾ ಏಫೆಕ್ಟ್ ತುಸು ಜೋರಾಗಿದೆ. ಮತದಾನ ಅಂತ್ಯವಾಗುವ ಹೊತ್ತಿನಲ್ಲೇ ಜೋರು ಮಳೆಯ ಲಕ್ಷಣ ಕಾಣಿಸಿತ್ತು. ಬೀಸುಗಾಳಿ,ಸಿಟಿಯಲ್ಲಿನ ಮರಗಳನ್ನ ಹಲವು ನಿಮಿಷಗಳ ಕಾಲ ವಾಡಿಸಿತ್ತು. ಆನಂತರ ಕೆಲವಡೆ ಮಳೆಯಾಗಿದೆ. 

ಅತ್ತ ಭದ್ರಾವತಿಯಲ್ಲಿಯು ಸಂಜೆ ನಾಲ್ಕುಗಂಟೆಯ ಹೊತ್ತಿಗೆ ಮಳೆಯ ಆಗಮನವಾಗಿದೆ. ಗುಡುಗು ಸಿಡಿಲಿನೊಂದಿಗೆ ಸುರಿದ ವರ್ಷಧಾರೆ ಕೆಲಕಾಲ ಮತದಾರರಿಗೆ ಸಮಸ್ಯೆ ಮಾಡಿತು. 

ಅತ್ತ ತೀರ್ಥಹಳ್ಳಿಯುಲ್ಲಿಯು ಕೆಲಹೊತ್ತು ಮಳೆಯಾಗಿದೆ. ಮೋಚಾ ಚಂಡಮಾರುತದ ಪರಿಣಾಮದಿಂದಾಗಿ ಶಿವಮೊಗ್ಗ ಜಿಲ್ಲೆಯು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈ ಮೊದಲೇ ತಿಳಿಸಿತ್ತು. 

ವರುಣ ಮತದಾನಕ್ಕೆ ಕೃಪೆ ತೋರಿದ್ದರಿಂದ ಶಿವಮೊಗ್ಗದಲ್ಲಿ ಉತ್ತಮ ಮತದಾನವಾಗಿದೆ. ಮತದಾನ ಮುಗಿಯುತ್ತಿದ್ದಂತೆ ಮಳೆಯ ಆಗಮನವಾಗಿದೆ. 

ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಬೆಂಗಳೂರು ನಗರ ಸಾರಿಗೆ (BMTC) ಬಸ್​ಗಳ ಓಡಾಟ! ಕಾರಣವೇನು ಗೊತ್ತಾ?

ಶಿವಮೊಗ್ಗ ನಗರದ ಬಸ್​ ನಿಲ್ಧಾಣದಲ್ಲಿ ಇವತ್ತು ಬೆಂಗಳೂರು ನಗರ ಸಂಚಾರಕ್ಕೆ ಮೀಸಲಾಗಿರುವ ಬಿಎಂಟಿಸಿ ಬಸ್​ಗಳ ಓಡಾಟ ಕಾಣ ಸಿಕ್ಕಿತ್ತು. ಇದು ಅಚ್ಚರಿಗೆ ಕಾರಣವಾಗಿತ್ತು. ಕೆಎಸ್​ಆರ್​ಟಿಸಿ  ಬಸ್​ಗಳು ಸೇರಿದಂತೆ ಖಾಸಗಿ ಬಸ್​ಗಳನ್ನು ಸಹ ಚುನಾವಣಾ ಪ್ರಕ್ರಿಯೆಗೆ ಬಳಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ಬಸ್​ಗಳ ಕೊರತೆ ಎದ್ದು ಕಾಣುತ್ತಿತ್ತು. ಪರಸ್ಥಳದಿಂದ ವೋಟು ಹಾಕಲು ಹೊರಟವರು, ವೋಟು ಹಾಕಿ ವಾಪಸ್ ಹೊರಟವರು, ಬಸ್​ಗಳಿಗಾಗಿ ಪರದಾಡುವಂತಾಗಿತ್ತು. 

ಇನ್ನೊಂದೆಡೆ ಬಸ್​ಗಳ ಕೊರತೆಯನ್ನು ನೀಗಿಸಲು ಸಾರಿಗೆ ನಿಗಮ ಶಿವಮೊಗ್ಗದಲ್ಲಿ ಬಿಎಂಟಿಸಿ ಬಸ್​ಗಳನ್ನ  ಬಿಟ್ಟಿತ್ತು. ಆಲ್ಮೋಸ್ಟ್​ ಗಂಟೆಗೊಂದು ಬಸ್​ ಗಳ  ಓಡಾಟ ಕಂಡುಬಂದಿದ್ದು ವಿಶೇಷವಾಗಿ ಬಿಎಂಟಿಸಿ ಬಸ್​ಗಳ ಓಡಾಟ ಕುತೂಹಲ ಮೂಡಿಸಿತ್ತು. ಜನರಿಗೆ ತೊಂದರೆಯಾಗದಂತೆ ನೀರ್ವಹಿಸಲು ಕೆಎಸ್​ಆರ್​ಟಿಸಿ ಬೆಂಗಳೂರಿನ ಬಸ್​ಗಳನ್ನು ಲಾಂಗ್​ ರೂಟ್​ನಲ್ಲಿ ಓಡಿಸಿದೆ ಎನ್ನಲಾಗಿದೆ. ಈ ಬಸ್​ಗಳ ಚಾಲಕರಿಗೆ ರೂಟ್​ ಗೊತ್ತಿಲ್ಲದೇ ಇರುವುದು ಕೂಡ ಸಾಕಷ್ಟು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಅಲ್ಲಲ್ಲಿ ದಾರಿಯಾವುದಯ್ಯ ಎಂದು ವಿಚಾರಿಸಿ ಚಾಲಕರು ಮುಂದಕ್ಕೆ ಸಾಗುತ್ತಿದ್ರು. ಇನ್ನೂ ಈ  ಬಸ್​ಗಳಲ್ಲಿ ಬೆಂಗಳೂರಿನ ಏರಿಯಾಗಳ ಟಿಕೆಟ್​ನ್ನ ನೀಡಲಾಗುತ್ತಿತ್ತು. 

 

ಶಿವಮೊಗ್ಗ – ಬೆಂಗಳೂರು ಮಾರ್ಗದ ಪರಿಚಯವಿಲ್ಲದೆ ತ್ರಾಸಪಟ್ಟುಕೊಂಡು ಬಿಎಂಟಿಸಿ ಬಸ್​ಗಳನ್ನು ಚಲಾಯಿಸುತ್ತಿದ್ದ ಚಾಲಕರು ಒಂದು ಕಡೆಯಾದರೆ, ಟಿಕೆಟ್ ಗೊಂದಲ ಮತ್ತು ರಶ್​ನಲ್ಲಿ ಪ್ರಯಾಣಿಕರು ಪರದಾಡುವಂತಾಗಿತ್ತು.  

ಈ ಮತಗಟ್ಟೆಯಲ್ಲಿ ಆಗಿರೋದು ಕೇವಲ ಮೂರೇ ಮತ

ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮವಾಗಿ ಮತದಾನವಾಗುತ್ತಿದ್ದರು ಕೆಲವು ಕಡೆ ಕಡಿಮೆ ಮತದಾರರ ಬಗ್ಗೆ ವರದಿಯಾಗಿದೆ ಅದರಲ್ಲಿಯೂ ಭದ್ರಾವತಿಯ ಕನಸಿನ ಕಟ್ಟೆಯ ಗ್ರಾಮದಲ್ಲಿ ಇರುವ ಮತಗಟ್ಟೆಯಲ್ಲಿ ಮಧ್ಯಾಹ್ನದವರೆಗೂ ಕೇವಲ ಎರಡು ಮತಗಳು ಚಲಾವಣೆಯಾಗಿದೆ ಇದಕ್ಕೆ ಕಾರಣ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿರುವುದು.

ಬಸ್ ಸೌಲಭ್ಯ, ಸ್ಮಶಾನ ಸೇರಿದಂತೆ ಮೂಲಬೂತ ಸೌಕರ್ಯ ಮತ್ತು ನೆಟವರ್ಕ್ ಸಮಸ್ಯೆ ಸಂಬಂಧ ವಿವಿಧ‌ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ‌, ಈ ಮೊದಲೇ  ಕನಸಿನಕಟ್ಟೆಯ ಗ್ರಾಮಸ್ಥರು ಮತದಾನ‌ ಬಹಿಷ್ಕಾರಗೊಳಿಸಿ ಬ್ಯಾನರ್ ಕಟ್ಟಿದ್ದರು‌

ಈ ಹಿನ್ನಲೆಯಲ್ಲಿ 1021 ಮತಗಳಿರುವ ಮತಗಟ್ಟೆಯಲ್ಲಿ ಇದುವರೆಗೂ ಮೂರು ಮತಗಳು ಚಲಾವಣೆಗೊಂಡಿದೆ. ಕನಸಿನಕಟ್ಟೆ ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರವಾಗಿದೆ. ಮತಗಟ್ಟೆ ಸಿಬ್ಬಂದಿಗಳು,ಕೊನೆ ಕ್ಷಣದಲ್ಲಿ ಮತದಾನಕ್ಕೆ ಮತದಾರರು ಆಗಮಿಸುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ..



Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media