ಶಿವಮೊಗ್ಗದ ನೂತನ ಡಿಸಿ ಆಗಿ ಪ್ರಭುಲಿಂಗ ಕವಲಿಕಟ್ಟಿ ಪದಗ್ರಹಣ! ಅಧಿಕಾರ ಹಸ್ತಾಂತರ ಮಾಡಿ ಗುರುದತ್ ಹೆಗಡೆ

Malenadu Today

ಶಿವಮೊಗ್ಗದ ನೂತನ ಜಿಲ್ಲಾಧಿಕಾರಿಯಾಗಿ  ಇಂದು ಪ್ರಭುಲಿಂಗ ಕವಲಿಕಟ್ಟಿ  ಅಧಿಕಾರವನ್ನು ವಹಿಸಿಕೊಂಡರು. ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್​ ಹೆಗಡೆ ಹೂಗುಚ್ಚ ನೀಡುವ ಮೂಲಕ ನೂತನ ಡಿಸಿಯನ್ನು ಸ್ವಾಗತಿಸಿ  ಅಧಿಕಾರವನ್ನು ಹಸ್ತಾತಂರಿಸಿದರು. ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ  2013 ರ ಬ್ಯಾಚ್‌ನ ಐಎಎಸ್ ಅಧಿಕಾರಿ  ಪ್ರಭುಲಿಂಗ ಕವಲಿಕಟ್ಟಿ ಅವರನ್ನು ಶಿವಮೊಗ್ಗ ಜಿಲ್ಲೆಯ ಹೊಸ ಜಿಲ್ಲಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿ ಡಿಸೆಂಬರ್ 31 ರಂದು ಆದೇಶ ಹೊರಡಿಸಿತ್ತು.  ಪ್ರಭುಲಿಂಗ ಕವಲಿಕಟ್ಟಿ ಈ ಹಿಂದೆ ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ … Read more