ಕೆಲಸ ಮುಗಿಸಿ ಮನೆಗೆ ಮರಳುವಾಗ ವಿಧಿ! ಭದ್ರಾವತಿಯಲ್ಲಿ 4 ಪಲ್ಟಿಯಾದ ಗೂಡ್ಸ್ ವೆಹಿಕಲ್! ಮಹಿಳೆ ಸಾವು
Bhadravathi Road ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಅಂತರಗಂಗೆ ಸಮೀಪದ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.ಸರಕು ಸಾಗಣೆ ವಾಹನದ ಚಕ್ರ ಕಳಚಿ ಬಿದ್ದು ಅಪಘಾತ ಸಂಭವಿಸಿ ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ದೊಡ್ಡೇರಿ ಬಳಿಯ ನೆಟ್ಟಗಲ್ಲಟ್ಟಿ ವಾಸಿ ಬೊಮೋಜಿರಾವ್ ಪತ್ನಿ ಲಕ್ಷ್ಮಮ್ಮ(48) ಮೃತಪಟ್ಟವರು. ನೆಟ್ಟಗಲ್ಲಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕೂಲಿ ಕಾರ್ಮಿಕ ಮಹಿಳೆಯರನ್ನು ಪ್ರತಿದಿನ ಗಾಜನೂರು ಸಮೀಪದ ಅಡಕೆ ನರ್ಸರಿ ಕೆಲಸಕ್ಕೆ ಸರಕು ಸಾಗಣೆ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. … Read more