ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮೊಹಮ್ಮದ್ ಕುಂಞರವರ ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ನಾಟಕ ರೂಪದಲ್ಲಿ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ ಯೋಜನೆಯಡಿ ನಾಟಕಕ್ಕೆ ಅಗತ್ಯವಿರುವ ತಾತ್ಕಾಲಿಕ ಕಲಾವಿದರ ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.
ಉ.ಕ.ಜಿಲ್ಲೆಯ ರೇಣುಕಾ ಸಿದ್ದಿ, ಹಾಸನದ ರಂಜಿನಿ ಎ.ಜಿ., ಚಿತ್ರದುರ್ಗದ ಶೃತಿ ಹೆಚ್.ಎಂ. ಮತ್ತು ಚಿನ್ಮಯ್ ರಾಮ ಎಸ್.ವೈ., ಧಾರವಾಡದ ಅಂಬಿಕಾ ಮಾಲಿ ಬಿ. ಮತ್ತು ಸಾಗರ ದನದಮನಿ, ವಿಜಯಪುರದ ಇಂದುಮತಿ ರಾಥೋಡ ಮತ್ತು ಪರುಶುರಾಮ ಹೊಸಮನಿ, ಹಾವೇರಿಯ ಆಕಾಶ್ ಗ ಪವಾರ, ಕಲಬುರ್ಗಿಯ ಬೀರಣ್ಣ, ಗದಗದ ಭಾಸ್ಕರ ಹಿತ್ತಲಮನಿ, ಮೈಸೂರಿನ ಚಂದನ್ ಕೆ.ಆರ್., ಶಿವಮೊಗ್ಗದ ಸಚಿನ್ ಕೆ.ಎನ್. ಮತ್ತು ಅಜಯ್ ಸಿ.ಎಂ., ಬಾಗಲಕೋಟೆಯ ನಬಿ ಮುಂದಿನಮನಿ ಆಯ್ಕೆಯಾದ ಕಲಾವಿದರುಗಳು ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Swathantryada Ota Shimoga Rangayana


