ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14 2025: ಶಿವಮೊಗ್ಗ ಸಿಟಿಯಲ್ಲಿಯೇ ಹೆಚ್ಚಾಯ್ತು ಶ್ರೀಗಂಧ ಕಳ್ಳತನ! ಹೌದು ಇತ್ತೀಚೆಗೆ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಮನೆಯೊಂದರ ಮುಂಭಾಗದಲ್ಲಿದ್ದ ಶ್ರೀಗಂಧದ ಮರವನ್ನು ಕದ್ದೊಯ್ದಿದ್ದ ಪ್ರಕರಣದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು.
ಇದೀಗ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಮತ್ತೊಂದು ಘಟನೆ ವರದಿಯಾಗಿದೆ. ವಿಶೇಷ ಅಂದರೆ ಅಧಿಕಾರಿಗಳ ವಸತಿ ಗೃಹಗಳ ಸಮೀಪದಲ್ಲೇ ರಾತ್ರೋರಾತ್ರಿ ಶ್ರೀಗಂಧದ ಮರ ಕಡಿದು ಕಳ್ಳತನ ಮಾಡಲಾಗಿದೆ.
ಶಿವಮೊಗ್ಗ ನಗರದ ಬಸವನಗುಡಿ ಪ್ರದೇಶದಲ್ಲಿರುವ ಲೋಕೋಪಯೋಗಿ ಇಲಾಖೆಯ (PWD) ವಸತಿ ಗೃಹಗಳ ಆವರಣದಲ್ಲಿದ್ದ ಎರಡು ಶ್ರೀಗಂಧದ ಮರಗಳು ಕಳುವಾಗಿದೆ. ಒಂದು ಮರವನ್ನು ಸಂಪೂರ್ಣವಾಗಿ ಕಡಿದು ಕದ್ದೊಯ್ಯಲಾಗಿದೆ. ಮಲೆನಾಡಲ್ಲಿ ನಡೆವ ವಿಷಯಗಳ ಬಗ್ಗೆ ಅರಣ್ಯ ಸಚಿವರು ತುರ್ತಾಗಿ ಪ್ರತಿಕ್ರಿಯಿಸುತ್ತಾರೆ. ಇದೀಗ ಸಿಟಿಯಲ್ಲಿಯೇ ಶ್ರೀಗಂಧವನ್ನು ಕಳ್ಳತನ ಮಾಡಲಾಗುತ್ತಿದೆ. ಈ ಬಗ್ಗೆ ಸಚಿವರ ಪ್ರತಿಕ್ರಿಯೆ ಇನ್ನಷ್ಟೆ ಹೊರಬರಬೇಕಿದೆ.

ಇನ್ನೂ ಶ್ರೀಗಂಧದ ಮರ ಕಳ್ಳತನದ ಮಾಹಿತಿ ದೊರೆತ ತಕ್ಷಣವೇ ಅರಣ್ಯ ಇಲಾಖೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ನೋಡಿಕೊಂಡು ಬಂದಿದ್ದಾರೆ. ಆದರೆ ಕದ್ದವರ ಬಗ್ಗೆ ಸುಳಿವು ಇನ್ನು ಸಹ ಸ್ಪಷ್ಟವಾಗಿಲ್ಲ. ಸಿಟಿಯಲ್ಲಿ ಶ್ರೀಗಂಧ ಕಳ್ಳತನ ನಡೆಯುತ್ತಿರುವುದು ನಾನಾ ಚರ್ಚೆಗೆ ಹ್ಯಾಶ್ಟ್ಯಾಗ್ ಆಗುತ್ತಿದೆ.

Srigandha Theft in Shivamogga Thieves Target PWD Quarters
Sandalwood theft Shivamogga, Srigandha tree cutting, Basavanagudi theft news, PWD Quarters crime, Petrol stolen from bikes, Jayanagar police case, Buy sandalwood plants Karnataka, Karnataka Forest Department contact, ಶ್ರೀಗಂಧ ಕಳ್ಳತನ, ಶಿವಮೊಗ್ಗ, ಬಸವನಗುಡಿ, ಲೋಕೋಪಯೋಗಿ ಇಲಾಖೆ, ಪೆಟ್ರೋಲ್ ಕಳವು, ಜಯನಗರ ಠಾಣೆ, ಅರಣ್ಯ ಇಲಾಖೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!