sn channabasappa : ಅಮಾನತ್ತಾದ ಶಾಸಕರು ಕೆಡಿಪಿ ಸಭೆಗೆ ಬರಬಹುದೇ | ಬಲ್ಕೀಶ್​ ಭಾನು ಪ್ರಶ್ನೆ, ಚನ್ನಬಸಪ್ಪ ಕೆಂಡಾಮಂಡಲ

prathapa thirthahalli
Prathapa thirthahalli - content producer

sn channabasappa : ವಿಧಾನಭೆಯಲ್ಲಿ ಅಮಾನತಾದ ಶಾಸಕ ಕೆಡಿಪಿ ಸಭೆಗೆ ಬರಬಹುದೇ  ಎಂದು ವಿಧಾನ ಸಭೆ ಸದಸ್ಯೆ ಬಲ್ಕೀಶ್​​ ಬಾನು ಪ್ರಶ್ನಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

sn channabasappa : ಸಭೆಯಲ್ಲಿ ನಡೆದಿದ್ದೇನು

ಶಿವಮೊಗ್ಗ ನಗರ ಶಾಸಕ ಎಸ್​ ಎನ್​ ಚೆನ್ನಬಸಪ್ಪ  ವಿಧಾನ ಸಭೆ ಕಲಾಪದ ವೇಳೆ ಅಮಾನತು ಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಆಯೋಜಿಸಲಾಗಿದ್ದ  ಕೆಡಿಪಿ ಸಭೆಗೆ ಆಹ್ವಾನದ ಮೇರೆಗೆ ಚನ್ನಬಸಪ್ಪ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್​ ಸದಸ್ಯೆ ಬಲ್ಕೀಶ್​ ಬಾನು ಎತ್ತಿದ ಪ್ರಶ್ನೆ ಚೆನ್ನಬಸಪ್ಪರವರನ್ನು ಕೆರಳಿಸಿತು. ವಿಧಾನ ಸಭೆಯಲ್ಲಿ  ಅಮಾನತ್ತಾದ  ಶಾಸಕರು ಕೆಡಿಪಿ ಸಭೆಗೆ ಬರಬಹುದಾ ಎಂದು  ಬಲ್ಕೀಶ್​ ಬಾನು ಪ್ರಶ್ನಿಸಿದರು.ಇದರಿಂದ ಕುಪಿತರಾದ ಚನ್ನಬಸಪ್ಪ ನನಗೆ ಮೀಟಿಂಗ್ ನೋಟೀಸ್ ಕಳಿಸಿರುವ ಕಾರಣಕ್ಕೆ ಸಭೆಗೆ ಬಂದಿದ್ದೇನೆ. ಇದನ್ನು ಪ್ರಶ್ನಿಸಲು ನೀವ್ಯಾರು, ಕುಳಿತುಕೊಳ್ಳಿ ಎಂದು ಬಲ್ಕೀಶ್​ ಬಾನು ವಿರುದ್ದ ಕೆಂಡಾಮಂಡಲರಾದರು. 

ಈ ಸಂದರ್ಭದಲ್ಲಿ ಇಬ್ಬರ ನಡುವೆ ಸಾಗರ ಶಾಸಕ ಗೋಪಾಲ ಕೃಷ್ಣ ಬೇಳೂರು ಮಧ್ಯಪ್ರವೇಶಿದರು. ಈ ವೇಳೆ ಇದೇ ವಿಷಯಕ್ಕೆ ಚನ್ನಬಸಪ್ಪ ಹಾಗು ಗೋಪಾಲ ಕೃಷ್ಣ ಬೇಳೂರು ನಡುವೆ ಮಾತಿನ ಚಕಾಮಕಿ ನಡೆಯಿತು. ಅಷ್ಟೇ ಅಲ್ಲದೆ ಇಬ್ಬರೂ ಸಹ ನೀನು ಕುಳಿತುಕೋ ನೀನು ಕುಳಿತುಕೋ ಎಂದು ಏಕವಚನದಲ್ಲಿ ಬೈದಾಡಿಕೊಂಡರು. ನಂತರ ಶಾಸಕ ಚನ್ನಬಸಪ್ಪ ಸಭೆಯನ್ನು ಬಹಿಷ್ಕರಿಸಿ ಹೊರಡಲು ಮುಂದಾದರು. ಈ ವೇಳೆ ಸಚಿವ ಮಧು ಬಂಗಾರಪ್ಪ ಮಧ್ಯ ಪ್ರವೇಶಿಸಿದರು. ಈ ಹಂತದಲ್ಲಿ ಮತ್ತೆ ಸಚಿವ ಮಧು ಬಂಗಾರಪ್ಪ- ಶಾಸಕ ಚನ್ನಬಸಪ್ಪ ನಡುವೆ ವಾಗ್ವಾದ ನಡೆಯಿತು. ನಂತರ ಶಾಸಕರನ್ನು ಸಭೆಗೆ ಆಹ್ವಾನಿಸುವಂತೆ ನಾನೇ  ತಿಳಿಸಿದ್ದೇ ಎಂದು ಬಲ್ಕೀಶ್ ಬಾನು ಹಾಗೂ ಚನ್ನಬಸಪ್ಪರನ್ನು ಸಮಾಧಾನಪಡಿಸಿದರು. ನಂತರ ಬಲ್ಕೀಶ್​ ಬಾನು ಪರವಾಗಿ  ಮಧು ಬಂಗಾರಪ್ಪ ಶಾಸಕ ಎಸ್​ ಎನ್​ ಚೆನ್ನಬಸಪ್ಪರವರಿಗೆ ಕ್ಷಮೆ ಕೇಳಿದರು,

 

Share This Article