ಬಾಮೈದನಿಗಾಗಿ ಕಾರ್​ ಡ್ರೈವ್ ಮಾಡಿದ ಭಾವ! ಮಧು ಬಂಗಾರಪ್ಪರನ್ನ ರಾಜಭವನಕ್ಕೆ ಕರೆದೊಯ್ಯ ಶಿವಣ್ಣ

Shivanna takes Madhu Bangarappa to Raj Bhavan

ಬಾಮೈದನಿಗಾಗಿ  ಕಾರ್​ ಡ್ರೈವ್ ಮಾಡಿದ ಭಾವ! ಮಧು ಬಂಗಾರಪ್ಪರನ್ನ ರಾಜಭವನಕ್ಕೆ ಕರೆದೊಯ್ಯ ಶಿವಣ್ಣ

KARNATAKA NEWS/ ONLINE / Malenadu today/ May 27, 2023 SHIVAMOGGA NEWS

ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟ ಶಿವರಾಜ್​ಕುಮಾರ್ (Shivarajkumar)  ಮಧು ಬಂಗಾರಪ್ಪರವರನ್ನ ಕಾರಿನಲ್ಲಿ ಕೂರಿಸಿಕೊಂಡು ಡ್ರೈವ್ ಮಾಡಿಕೊಂಡು ಹೋಗಿದ್ಧಾರೆ. ಮುಂದೆ ತಮ್ಮ ಪತ್ನಿ ಗೀತಾ ಶಿವರಾಜ್​ ಕುಮಾರ್​ನ್ನ ಕೂರಿಸಿಕೊಂಡಿದ್ದ ಶಿವಣ್ಣ, ಹಿಂದೆ ಮಧು ಬಂಗಾರಪ್ಪ ಹಾಗೂ ಅವರ ಕುಟುಂಬವನ್ನ ಕೂರಿಸಿಕೊಂಡು ರಾಜಭವನಕ್ಕೆ ಕಾರ್ ಡ್ರೈವ್ ಮಾಡಿಕೊಂಡು ತೆರಳಿದರು. ಈ ವೇಳೆ ಮಾಧ್ಯಮದವರು ಮುತ್ತಿಕೊಂಡು  ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ, ಮಧು ಬಂಗಾರಪ್ಪ ಕೈ ಬೀಸಿ ಧನ್ಯವಾದ ಹೇಳಿದರು,

ಈ ಹಿಂಧೆ ಮಧು ಬಂಗಾರಪ್ಪರವರ ಕಾರಣಕ್ಕೆ ಅವರು ಹಾಗೂ  ಕಾಂಗ್ರೆಸ್ ಮುಖಂಡರ ಪರವಾಗಿ ಪ್ರಚಾರ ಕೈಗೊಂಡಿದ್ದ ನಟ ಶಿವರಾಜ್​ ಕುಮಾರ್ ಟೀಕೆಗಳನ್ನ ಸಹ ಎದುರಿಸಿದ್ದರು. ಹಾಗಿದ್ದರೂ ಪ್ರಚಾರ ನಿಲ್ಲಿಸದ ಶಿವಣ್ಣ ಕಾಂಗ್ರೆಸ್​ಗೆ ಹೆಚ್ಚಿನ  ಬೆಂಬಲ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಅವರು ಕಾರ್ ಡ್ರೈವ್ ಮಾಡಿಕೊಂಡು ಮಧುರವರ ಸಚಿವ ಸ್ಥಾನ ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.