ಶಿವಮೊಗ್ಗ ಹೈವೆಯಲ್ಲಿ ಸಾಗರ ಮಾರಿ ಜಾತ್ರೆಗೆ ಹೊರಟಿದ್ದವರ ಕಾರು ಅಡ್ಡಗಟ್ಟಿ ದರೋಡೆ!

Malenadu Today

MALENADUTODAY.COM | SHIVAMOGGA NEWS 

ಶಿವವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಬರುವ ಟ್ರೀಪಾರ್ಕ್​ನ ಸಮೀಪ ದರೋಡೆಯೊಂದು (Dacoity) ನಡೆದಿರುವ ಬಗ್ಗೆ ವರದಿಯಾಗಿದೆ. ತರಿಕೆರೆಯ ವಸಂತ್ ಎಂಬವರು ಕಾರಿನಲ್ಲಿ ಮಾರಿಜಾತ್ರೆಗೆ ಹೋಗುತ್ತಿದ್ದ  ವೇಳೆ ಅವರನ್ನು ಟ್ರೀಪಾರ್ಕ್​ ಬಳಿ ಅಡ್ಡಗಟ್ಟಲಾಗಿದೆ. ಕಾರಿನಲ್ಲಿ ಹೋಗುತ್ತಿದ್ದವರನ್ನ ತಡೆದು ಕುತ್ತಿಗೆಗೆ ಮಚ್ಚು ಹಿಡಿದು ಕ್ಯಾಶ್ ಹಾಗೂ ಚಿನ್ನವನ್ನು ದೋಚಿ ಹೋಗಿದ್ದಾರೆ. 

ಮೂತ್ರ ವಿಸರ್ಜನೆಗೆ ಎಂದು ಕಾರು ನಿಲ್ಲಿಸಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮೂತ್ರ ವಿಸರ್ಜನೆ ಮುಗಿಸಿ ವಾಪಸ್​ ಕಾರು ಹತ್ತುವಾಗ ಅಲ್ಲಿಗೆ ಡಿಯೋ ಬೈಕ್​ನಲ್ಲಿ ಬಂದ ಇಬ್ಬರು ವಸಂತ್​ರನ್ನ ಮಚ್ಚು ತೋರಿಸಿ ಹೆದರಿಸಿದ್ದಾರೆ. ಬಳಿಕ ಅಲ್ಲಿಂದ ಸಾಗರ ಕಡೆಗೆ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ಆಗಿದೆ. 

Malenadu Today

ಇನ್ನೂ ಲಯನ್​ ಸಫಾರಿಯ ಸುತ್ತಮುತ್ತ ಇಂತಹ ದರೋಡೆ ಕೃತ್ಯಗಳು ನಡೆಯುತ್ತಲೇ ಇದ್ದು, ಈ ಭಾಗದಲ್ಲಿ ಬೀಟ್ ವ್ಯವಸ್ತೇಯು ಸಹ ಸುಸೂತ್ರವಾಗಿಲ್ಲ. ವಾಹನಗಳು ಸೈಡಿಗೆ ನಿಲ್ಲುವುದನ್ನ ಗಮನಿಸುವ ದುಷ್ಕರ್ಮಿಗಳು ಅವರನ್ನು ದೋಚಿ ಎಸ್ಕೇಪ್ ಆಗುತ್ತಿದ್ದಾರೆ. ಈ ಹಿಂದಿನ ಹಲವು ಪ್ರಕರಣಗಳು ಸಹ ಇದುವರೆಗೂ ಇತ್ಯರ್ಥ ಕಂಡಿಲ್ಲ. ಕಳ್ಳರಿಗೆ ಇದು ವರದಾನವಾಗಿ ಕಾಣುತ್ತಿದ್ದು, ಸಾರ್ವಜನಿಕರನ್ನು ದೋಚಿ ಆರೋಪಿಗಳು ಎಸ್ಕೇಪ್ ಆಗುತ್ತಿದ್ದಾರೆ. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article