rcb news today
ಹೌದು ಹದಿನೆಂಟು ವರ್ಷಗಳ ಬಳಿಕ ಆರ್ ಸಿ ಬಿ ಐಪಿಎಲ್ ನಲ್ಲಿ ಗೆಲುವು ಸಾಧಿಸಿದಾಗ ರಾಜ್ಯಾದ್ಯಂತ ಅದರ ಸಂಭ್ರಮದ ಹೀಟ್ ಮುಗಿಲು ಮುಟ್ಟಿತ್ತು.. ಅರ್ ಸಿ ಬಿ ಗೆದ್ದ ಕ್ಷಣದಿಂದಲೇ ಅಭಿಮಾನಿಗಳು ಮದ್ಯರಾತ್ರಿವರೆಗೂ ಬೀದಿಗಳಲ್ಲಿ ಸಂಭ್ರಮಿಸಿದರು..ಬಾರ್, ಸರ್ವಿಸ್ ಅಪಾರ್ಟ್ ಮೆಂಟ್, ಪಬ್, ಪಾರ್ಟಿಗಳಲ್ಲಿ ಕುಡಿದು ಅಮಲು ನೆತ್ತಿಗೇರಿಸಿಕೊಂಡು ಸಂಪೂರ್ಣ ಕ್ರಿಕೆಟ್ ಎಂಜಾಯ್ ಮಾಡಿದ ಅಭಿಮಾನಿಗಳ ಸಂಖ್ಯೆ ದೊಡ್ಡದಿತ್ತು…ಆರ್ಸಿಬಿ ತಂಡ ಗೆದ್ದಾಗ ಈ ಕುಡಿದ ಅಭಿಮಾನಿಗಳ ವರ್ಗ ರಸ್ತೆಗಿಳಿದು ಅಭಿಮಾನ ತೋರಿದ ರೀತಿ ಎಲ್ಲೆ ಮೀರಿತ್ತು..
ಇದರ ನಡುವೆ ನಾರ್ಕೊಟಿಕ್ ಡ್ರಗ್ಸ್ ಅಂತಿಮ ಪಂದ್ಯಕ್ಕೆ ಹೆಚ್ಚಿಗೆ ಪ್ರಮಾಣದಲ್ಲಿ ಪೂರೈಕೆ ಯಾಗಿತ್ತು ಅಂಬ ಆಘಾತಕಾರಿ ಸುದ್ದಿ ಕೂಡ ಹೊರಬಿದ್ದಿದೆ..ಇದೆಲ್ಲದರ ನಡುವೆಯೂ ನಿಜವಾದ ಆರ್ಸಿಬಿ ಆಭಿಮಾನಿಗಳು ರಸ್ತೆಗಿಳಿದು ಸಂಭ್ರಮಿಸಿದರೂ ಎಲ್ಲೆ ಮೀರಲಿಲ್ಲ..ರಾಜಧಾನಿಯ ಸಂಭ್ರಮ ಒಂದೆಡೆಯಾದರೆ ಇತ್ತ ಶಿವಮೊಗ್ಗದಲ್ಲಿ ಗೆಲುವಿನ ಸಂಭ್ರಮದಲ್ಲಿ ಒಂದು ಸಾವು ನಡೆದು ಹೋಗಿತ್ತು..ಗೆಲುವಿನ ಸಂಭ್ರಮ ಹಂಚಿಕೊಳ್ಳಲು ನಡೆಸಿದ ಬೈಕ್ ರ್ಯಾಲಿ ಓರ್ವ ಯುವಕನ ಪ್ರಾಣ ತೆಗೆದಿತ್ತು..ಇದರಿಂದ ಅಲರ್ಟ್ ಆದ ಶಿವಮೊಗ್ಗ ಪೊಲೀಸರು ಸಂಭ್ರಮಾಚರಣೆಗೆ ತಕ್ಷಣವೇ ಬ್ರೇಕ್ ಹಾಕಲು ಮುಂದಾದರು…ತಕ್ಷಣವೇ ಸರ್ಕಲ್ ಗಳಲ್ಲಿ ಜಮಾವಣೆಗೊಂಡಿದ್ದ ಕೆ ಎಸ್ ಆರ್ ಪಿ ಮತ್ತು ಡಿ ಎ ಆರ್ ತುಕಡಿಗಳನ್ನು ಹೆಚ್ಚು ಜನದಟ್ಟಣೆಯಾಗಿರುವ ಸರ್ಕಲ್ ಗಳಲ್ಲಿ ನಿಯೋಜಿದರು..ಹಗಲು ರಾತ್ರಿಗೆ ವ್ಯತ್ಯಾಸ ಇಲ್ಲದ ರೀತಿ ಗೋಪಿ ವೃತ್ತ, ಉಷಾ ನರ್ಸಿಂಗ್ ಹೋಮ್ ಎಂಆರ್ ಎಸ್ ವೃತ್ತದಲ್ಲಿ ಅಭಿಮಾನಿಗಳು ಕೆಕೆ ಹಾಕುತ್ತಾ ಹರ್ಷೊದ್ಗಾರದಲ್ಲಿದ್ದರು. ಪೊಲೀಸರು ಕಾಲಮಿತಿಯಲ್ಲಿ ಅವಕಾಶ ನೀಡಿ ಎಲ್ಲರೂ ಮನೆಗೆ ಹೋಗುವಂತೆ ಮನವಿ ಮಾಡಿದ್ದಾರೆ.

rcb news today ಈ ವೇಳೆ ಯುನಿಫಾರಂನಲ್ಲಿದ್ದ ದೊಡ್ಡಪೇಟೆ ಇನ್ ಸ್ಪೆಕ್ಟರ್ ರನ್ನೆ ಎತ್ತಿ ಅಭಿಮಾನಿಗಳು ಆರ್ ಸಿ ಬಿ ಪರ ಘೋಷಣೆ ಕೂಗಿದ್ದಾರೆ.ಪೊಲೀಸರು ಈ ಸಂದರ್ಭ ಬೇರೆಯದ್ದೆ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅರಿತು..ಎಲ್ಲರು ಮನೆಗೆ ತೆರಳಿ ಎಂದು ಕಟ್ಟು ನಿಟ್ಟಿನ ಆದೇಶ ಮಾಡಿದ್ದ್ದಾರೆ..ಆದರೆ ಅಭಿಮಾನಿಗಳ ಪುಂಡಾಟ ಗಗನಕ್ಕೇರಿತ್ತು..ವಾಹನ ಹತ್ತಿ ಜೈಕಾರ ಹಾಕುವುದು, ಕುಡಿದ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.ಪೊಲೀಸರು ಅನಿವಾರ್ಯವಾಗಿ ಗುಂಪಿನ ಮೇಲೆ ಲಘು ಲಾಠಿ ಪ್ರಹಾರ ಮಾಡಬೇಕಾಯಿತು..

ರಾತ್ರಿ ಪಾಳೀಯದ ಬಹುದೊಡ್ಡ ಜವಬ್ದಾರಿ ಪೊಲೀಸರ ಹೆಗಲ ಮೇಲೆ ಕೆಂಡದಂತಿರುತ್ತೆ..ಮದ್ಯರಾತ್ರಿಯಾದರೂ ಯುವಕರು ಮನೆ ಸೇರುವುದಿಲ್ಲ ಎಂದರೆ..ಅದರ ಮುಂದುವರಿದ ಭಾಗವಾಗಿ ಏನಾದ್ರೂ ಸಣ್ಣ ತೊಂದರೆಯಾದ್ರೂ ಅದಕ್ಕೆ ಪೊಲೀಸ್ ವೈಫಲ್ಯ ಎಂದು ಮಾಧ್ಯಮಗಳೇ ಟ್ಯಾಗ್ ಲೈನ್ ನೀಡುತ್ತವೆ.ಹೀಗಾಗಿ ಎಚ್ಚೆತ್ತ ಪೊಲೀಸರು ಗೋಪಿ ವೃತ್ತದಲ್ಲಿ ಲಾಠಿ ಪ್ರಹಾರ ಮಾಡಿದ್ದಾರೆ.ಮಾದ್ಯಮ ಪ್ರತಿನಿಧಿಗೆ ಕೂಡ ಈ ಸಂದರ್ಭದಲ್ಲಿ ಹಲ್ಲೆಯಾಗಿದೆ. ಅಚಾತುರ್ಯದಲ್ಲಿ ಆದ ಘಟನೆಗೆ ದೊಡ್ಡಪೇಟೆ ಠಾಣೆ ಸಿಪಿಐ ಕ್ಷಮೆ ಯಾಚಿಸಿದ್ದಾರೆ.
rcb news today ಶಿವಮೊಗ್ಗದಲ್ಲಿ ಲಾಠಿ ಪ್ರಹಾರ ಮತ್ತು ಅಭಿಮಾನಿ ಸಾವಿನ ಪ್ರಕರಣವನ್ನು ರಾತ್ರಿಯೇ ಬೆಂಗಳೂರಿನ ಪೊಲೀಸರು ಅವಲೋಕಿಸಿ ಸೂಕ್ಷ್ಮ ಪ್ರಜ್ಞೆ ಮೆರೆಯಬಹುದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುಪ್ಪಟ್ಟು ಅಭಿಮಾನಿಗಳು ಸೇರುವ ನಿರೀಕ್ಷೆ ಅರಿತು..ರಾತ್ರೋ ರಾತ್ರಿ ಸುತ್ತಮುತ್ತಲ ಜಿಲ್ಲೆಗಳಿಂದ ಮತ್ತಷ್ಟು ಫೊರ್ಸ್ ತರಿಸಿಕೊಳ್ಳಬೇಕಿತ್ತು..ಭದ್ರಾವತಿಯ ಆರ್ ಎ ಎಫ್ ತುಕಡಿಯನ್ನು ಹಿಂದಿನ ದಿನವೇ ಕರೆಸಿಕೊಳ್ಳಬೇಕಿತ್ತು ಎಂಬ ಮಾತುಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ..ಬೆಂಗಳೂರಿನ ಇತಿಹಾಸದಲ್ಲಿಲ ಆಗಬಾರದ ಕಾಲ್ತುಳಿತದ ಘಟನೆ ನಡೆದು 11 ಮಂದಿ ಸಾವನ್ನಪ್ಪಿದ್ದಾರೆ… ಐತಿಹಾಸಿಕ ಸಂಭ್ರಮಕ್ಕೆ ಸೂತಕದ ಛಾಯೆ ಆವರಿಸಿದೆ.

ಇದೆಲ್ಲಾ ನೋಡಿದಾಗ ಮತೀಯವಾಗಿ ಅತ್ಯಂತ ಸೂಕ್ಷ್ಮ ವಾಗಿರುವ ಶಿವಮೊಗ್ಗದಲ್ಲಿ, ಸೇಡು ತೀರಿಸಿಕೊಳ್ಳುವ ಮನಸ್ಸುಗಳಿಗೆ ಈ ಸಂದರ್ಭಗಳು ಯಾವುದೇ ಕಾರಣಕ್ಕೂ ಅವಕಾಶವಾಗಬಾರದು ಎಂಬ ಒಂದಂಶದ ಕಾರ್ಯಕ್ರಮದ ಭಾಗವಾಗಿ ಶಿವಮೊಗ್ಗ ಪೊಲೀಸರು ತೆಗೆದುಕೊಂಡ ಹೆಜ್ಜೆ ಪ್ರಶಂಸನೀಯವಾಗಿದೆ.