railway : ರೈಲಿಗೆ ಸಿಲುಕಿ ಎತ್ತು ಹಾಗೂ ವ್ಯಕ್ತಿ ಸಾವು

prathapa thirthahalli
Prathapa thirthahalli - content producer

railway : ರೈಲಿಗೆ ಸಿಲುಕಿ ಎತ್ತು ಹಾಗೂ ವ್ಯಕ್ತಿ ಸಾವು

ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಬಳಿ ರೈಲಿಗೆ ಸಿಲುಕಿ ಎತ್ತು ಹಾಗೂ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಕೊನಗಹಳ್ಳಿಯ ನಿವಾಸಿ ತಿಮ್ಮೇಶ್​ (35) ಮೃತಪಟ್ಟಿರುವ ವ್ಯಕ್ತಿ ಎಂದು ತಿಳಿದು ಬಂದಿದೆ

ಮೈಸೂರು- ತಾಳಗುಪ್ಪ ಇಂಟರ್ಸಿಟಿ ರೈಲಿಗೆ ಸಿಲುಕಿ ದನ ಕಾಯುತ್ತಿದ್ದ ವ್ಯಕ್ತಿ ಹಾಗೂ ಎತ್ತು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆ ಯಾವಾಗ ನಡೆದಿದೆ ಎಂದು ನಿಖರವಾಗಿ ತಿಳಿದು ಬಂದಿಲ್ಲ.ಘಟನಾ ಸಂಬಂಧ  ರೈಲ್ವೆ  ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

TAGGED:
Share This Article