SHIVAMOGGA | Dec 9, 2023 | ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ನೆಲದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ. ಅವರಿಗೆ 10,000 ಕೋಟಿ ಕೊಡುತ್ತೇನೆ ಹೇಳಿರುವುದನ್ನು ಖಂಡಿಸಿರುವ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
READ : ಶಾಲೆಗೆ ಹಣ್ಣುಹಂಪಲು ಸಾಗಿಸುತ್ತಿದ್ದ ಗೂಡ್ಸ್ ವಾಹನಕ್ಕೆ ಕಾರು ಡಿಕ್ಕಿ
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮುಸ್ಲಿಂ ಧರ್ಮ ಗುರುಗಳ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದ ಸಂದರ್ಭದಲ್ಲಿ ಮುಸ್ಲಿಂರಿಗೆ 10 ಸಾವಿರ ಕೋಟಿ ಕೊಡುತ್ತೇನೆ. ಈ ನೆಲದ ಸಂಪತ್ತನ್ನು ಹಂಚುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಯಾಗಿದೆ ಎಂದಿರುವ ಪ್ರತಿಭಟನಕಾರರು, ಹುಬ್ಬಳಿಯ ಈ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿಯವರು ಶಂಕಿತ ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿರುವುದು ಕೂಡ ಸಮರ್ಥನೀಯ ಅಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮುಸ್ಲಿಂರಿಗೆ ಪ್ರತ್ಯೇಕ ಅನುದಾನ ನೀಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ.ಭಾರತದಯಾವುದೇರಾಜ್ಯ, ಅಥವಾಯಾವುದೇಭಾಗದಲ್ಲಿ ವಾಸವಾಗಿ ರುವ ನಾಗರೀಕರ ಯಾವುದೇ ವಿಭಾಗವು ತನ್ನ ಲಿಪಿ ಹಾಗೂ ಸಂಸ್ಕೃತಿ ಯನ್ನು ಹೊಂದಿದ್ದರೆ ಅದನ್ನ ರಕ್ಷಿಸುವ ಹಕ್ಕು ಇದೆ ಎಂದಿರುವ ಅವರು, ಮುಖ್ಯಮಂತ್ರಿಗಳ ನಿಲುವು ಸಂವಿಧಾನ ವಿರೋಧಿ ಎಂದು ಟೀಕಿಸಿದರು.