ಶಿವಮೊಗ್ಗ ಜೈಲ್​ನಲ್ಲಿ ಅಕ್ಟೋಬರ್​ 19 ರಂದು ನಡೆದಿದ್ದೇನು? ಕೈದಿಗಳ ನಡುವೆ ಏನಾಯ್ತು!?

ajjimane ganesh

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 24, 2025 : ನಗರದ ಸೋಗಾನೆ ಬಳಿ ಇರುವ ಶಿವಮೊಗ್ಗ ಕೇಂದ್ರ ಕಾರಾಗೃಗಹದಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಈ ಸಂಬಂಧ ಕೇಸ್​ ಸಹ ದಾಖಲಾಗಿದೆ. ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿರುವುದಷ್ಟೆ ಅಲ್ಲದೆ ಕಾರಾಗೃಹದ ಸೆಲ್​ನಲ್ಲಿ ಬ್ಲೇಡ್ ಪತ್ತೆಯಾಗಿದೆ. ಇದು ನಿಷೇಧಿತ ವಸ್ತುವಾಗಿದ್ದು, ಈ ಸಂಬಂದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Prisoners Clash in Shivamogga Central Jail Blade Recovered FIR Filed
Prisoners Clash in Shivamogga Central Jail Blade Recovered FIR Filed

ದಾಖಲಾಗಿರುವ ಎಫ್​ಐಆರ್ ಪ್ರಕಾರ,  ಕಾರಾಗೃಹದೊಳಗಿರುವ  ಕುಮದ್ವತಿ ವಾರ್ಡ್ 20,21 ಹಾಗೂ 35ನೇ ಕೊಠಡಿಯಲ್ಲಿದ್ದ ವಿಚಾರಣಾಧೀನ ಕೈದಿಗಳಾದ ನಿರಂಜನ್ ನಾಯಕ್, ರುದ್ರೇಶ್‌ ನಾಯ್ಕ ಹಾಗೂ ರಾಜೇಶ್ ಎಂಬವರು ಅ.19ರಂದು ಶನಿವಾರ ಮಧ್ಯಾಹ್ನದ ಊಟ ಬಡಿಸುವಾಗ ಭದ್ರಾ ವಿಭಾಗದ ಕೊಠಡಿ ಸಂಖ್ಯೆ 28ರಲ್ಲಿದ್ದ ಸಜಾಬಂಧಿ ಮಾರಪ್ಪ  ಎಂಬುವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾರೆ. 

- Advertisement -
Prisoners Clash in Shivamogga Central Jail Blade Recovered FIR Filed
Prisoners Clash in Shivamogga Central Jail Blade Recovered FIR Filed

ಅಲ್ಲದೆ ಹರಿತವಾದ ಆಯುಧದಿಂದ ಮಾರಪ್ಪನ ಎಡಗಣ್ಣಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಬೆನ್ನಲ್ಲೆ ಮಾರಪ್ಪನಿಗೆ ಕಾರಾಗೃಹದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಗಳನ್ನು ಜೈಲು ಅಧಿಕಾರಿಗಳು ತಪಾಸಣೆಗೆ ಒಳ ಪಡಿಸಿದ್ದಾರೆ. ಈ ಸಂಬಂಧ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ನೀಡಿರುವ  ದೂರಿನನ್ವಯ ಎಫ್​ಐಆರ್ ದಾಖಲಾಗಿದೆ. 

Prisoners Clash in Shivamogga Central Jail  Blade Recovered FIR Filed

 ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 

Share This Article
Leave a Comment

Leave a Reply

Your email address will not be published. Required fields are marked *