ಶಿವಪ್ಪ ನಾಯಕ ಸರ್ಕಲ್​ನಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಹಿಳೆ ಬಗ್ಗೆ ಪೊಲೀಸ್ ತನಿಖೆ ಏನು ಹೇಳುತ್ತೆ!?

Malenadu Today

SHIVAMOGGA  |  Jan 22, 2024  |  police investigation , Shivappanayaka Circle | ಶಿವಮೊಗ್ಗ ನಗರದ ಎಸ್​ಎನ್ ಸರ್ಕಲ್​ ನಲ್ಲಿ ಮಹಿಳೆ ಅಲ್ಲಾಹು ಅಕ್ಬರ್​  ಘೋಷಣೆಯನ್ನು ಕೂಗಿದ ವಿಚಾರ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಶಿವಪ್ಪನಾಯಕ ಸರ್ಕಲ್​ ನಲ್ಲಿ ನಡೆದಿದ್ದೇನು?

ಶಿವಮೊಗ್ಗ ನಗರದ ಶಿವಪ್ಪನಾಯಕ ಸರ್ಕಲ್​ ನಲ್ಲಿ  ನಡೆದ ವಿಚಾರವನ್ನು ಮಾಧ್ಯಮಗಳಿಗೆ ವಿವರಿಸಿದ ಎಸ್​ಪಿಯವರು ಇವತ್ತು ಬೆಳಗ್ಗೆ 11 ಗಂಟೆ ಸುಮಾರಿಗೆ ಫ್ಲವರ್ ಮಾರ್ಕೆಟ್ ರೋಡ್​ನಿಂದ ಎಸ್​ಎನ್​ ಸರ್ಕಲ್​ನಿಂದ ಅಶೋಕ ಸರ್ಕಲ್​ ಗೆ ಬರುತ್ತಿದ್ದರು. ಈ ವೇಳೆ ಶಿವಪ್ಪನಾಯಕ ಸರ್ಕಲ್​ನಲ್ಲಿ  ನಡೆಯುತ್ತಿದ್ದ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ರಸ್ತೆ ಮಧ್ಯೆ ತಮ್ಮ ವೆಹಿಕಲ್ ನಿಲ್ಲಿಸಿಕೊಂಡು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. 

ಈ ವೇಳೆ ಪೊಲೀಸ್ ಸಿಬ್ಬಂದಿ ದಾರಿಮಧ್ಯೆ ನಿಲ್ಲಿಸ ಬೇಡಿ ವಾಹವನ್ನು ಸೈಡ್​ಗೆ ನಿಲ್ಲಿಸಿದ ಟ್ರಾಫಿಕ್​ಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಅಲ್ಲಿ ಕೆಲವೊಂದು ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು. ಅದೇ ಸಂದರ್ಭದಲ್ಲಿ ಈಕೆಯು ಸಹ ಘೋಷಣೆಯನ್ನು ಕೂಗಿದ್ದಾಳೆ. ತಕ್ಷಣವೇ ಅಲ್ಲಿಯೇ ಇದ್ದ ಪೊಲೀಸರು ಆಕೆಯನ್ನು ಪೊಲೀಸ್ ವ್ಯಾನ್​ನಲ್ಲಿ ಕರೆದುಕೊಂಡು ಬಂದು ಪೊಲೀಸ್ ಸ್ಟೇಷನ್​ನಲ್ಲಿ ವಿಚಾರಣೆ ನಡೆಸಿದ್ದಾರ. 

ಈ ವಿಚಾರ ನಡೆಯುವುದರಲ್ಲಿಯೇ ಆಕೆಯ ತಂದೆಯು ಸಹ ಆಕೆಯನ್ನ ಹುಡುಕಿಕೊಂಡು ಬಂದಿರುತ್ತಾರೆ. ವಿಷಯ ತಿಳಿದು ಸ್ಠೇಷನ್​ಗೆ ಬಂದ ಅವರು ದಾಖಲಾತಿಗಳನ್ನು ಸಹ ತೋರಿಸುತ್ತಾರೆ. ಶಿವಮೊಗ್ಗದ ವಿವಿಧ ನರ್ಸಿಂಗ್​ ಹೋಮ್​ಗಳಲ್ಲಿ 2018 ರಿಂದಲೂ ಟ್ರೀಟ್ಮೆಂಟ್ ನೀಡಲಾಗುತ್ತಿದೆ ಆಕೆ ಎಂದು ತಿಳಿಸಿದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಎಸ್​ಪಿ ಮಿಥುನ್ ಕುಮಾರ್ ರವರು ಹೇಳಿದ್ದಾರೆ. 

ಆಕೆ ಮೂಲತಃ ಶಿವಮೊಗ್ಗದವರಾಗಿದ್ದು, 2018 ರಿಂದಲೂ ಈಕೆ ಟ್ರೀಟ್ಮೆಂಟ್​ನಲ್ಲಿದ್ದಾಳೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮುಂದುವರಿದು ಎಲ್ಲಾ ರೀತಿಯಲ್ಲಿ ಪರಿಶೀಲನೆ ನಡೆಸಿ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.  


Share This Article