ks eshwarappa : ಕಾಂಗ್ರೆಸ್ನಲ್ಲಿ ಮೂರು ಜನರಿಗೆ ಬುದ್ದಿ ಭ್ರಮಣೆ ಆಗಿದೆ | ಕೆ ಎಸ್ ಈಶ್ವರಪ್ಪ
ks eshwarappa : ಮಲ್ಲಿಕಾರ್ಜುನ್ ಖರ್ಗೆ ಭಾಷಣದ ವೇಳೆ ನಮ್ಮ ಪಾಕಿಸ್ತಾನ ಎಂದು ಹೇಳಿದ್ದಾರೆ ಎನ್ನಲಾದ ವಿಚಾರದ ಬಗ್ಗೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಇಂದು ಶಿವಮೊಗ್ಗದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಜನಕ್ಕೆ ಬುದ್ದಿ ಭ್ರಮಣೆ ಆಗಿದೆ. ದೇಶದಲ್ಲಿ ಆಪರೇಷನ್ ಸಿಂಧೂರ ನಡೆಯುತ್ತಿದ್ದಾಗ ಸಿದ್ದರಾಮಯ್ಯರವರು ಯುದ್ದ ಯಾಕೇ ಮಾಡಬೇಕು ಎಂದರು. ನಂತರ ಅವರೇ ಸಿಂಧೂರ ಹಾಕಿಕೊಂಡು ಬಂದು ಯುದ್ದದ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡಿದರು. ಸಿಎಂ ಸಿದ್ದರಾಮಯ್ಯನವರಿಗೆ ಈಗ ಬುದ್ದಿ ಬಂದಿದೆ. ಎರಡನೇಯದಾಗಿ ಪ್ರಿಯಾಂಕ್ ಖರ್ಗೆಯವರಿಗೂ ಬುದ್ದಿಭ್ರಮಣೆ ಆದಂತಿದೆ ಯಾವಾಗ ಏನು ಮಾತನಾಡುತ್ತಾರೋ ಅವರಿಗೇ ಗೊತ್ತಿಲ್ಲ. ಇವರೊಂದಿಗೆ ಕೊತ್ತೂರು ಮಂಜುನಾಥ್,ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಸೇರಿದಂತೆ ಅನೇಕರು ಸೇರಿಕೊಂಡಿದ್ದಾರೆ. ಕೊನೆಯದಾಗಿ ಮಲ್ಲಿಕಾರ್ಜುನ್ ಖರ್ಗೆಯವರಿಗೂ ಬುದ್ದಿ ಬುದ್ದಿ ಭ್ರಮಣೆ ಆಗಿದ್ದು ಮೊದಲು ಯದ್ದದ ಸಂದರ್ಭದಲ್ಲಿ ಬೆಂಬಲ ಘೋಷಿಸಿದ್ದ ಅವರು ಈಗ ಏನೇನೋ ಮಾತನಾಡುತ್ತಾರೆ. ಪ್ರಪಂಚವೇ ಮೋದಿಯವರ ಪರವಾಗಿದೆ ಈ ಸಂದರ್ಭದಲ್ಲಿ ಇವರು ಈ ಹೇಳಿಕೆ ನೀಡುತ್ತಾರೆ. ಮುಂದೆ ಇವರೆಲ್ಲರು ಸರಿ ಆಗೇ ಆಗುತ್ತಾರೆ. ಭಾರತ ದೇಶದಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಮಾತನಾಡುವವರಿಗೆ ಗುಂಡಿಟ್ಟು ಹೊಡೆಯುವ ಕಾನೂನು ತರಬೇಕು ಎಂದರು.