ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 20, 2025 : ಶಿವಮೊಗ್ಗ ಜಿಲ್ಲೆಯ ಯುವಕ ಯುವತಿಯರಿಗೆ ಕೆಲಸ ಎಲ್ಲಿದೆ ಎಂದು ಹುಡುಕಾಡಿ ಪರದಾಡುವ ಅವಕಾಶ ತಪ್ಪಿಸುವ ಸಲುವಾಗಿ ಜಾಬ್ ಪೋರ್ಟಲ್ ಒಂದನ್ನು ಹೊರಕ್ಕೆ ತರಲಾಗಿದೆ.
ಕಾಯಕ ಸೇತು ಜಾಬ್ ಪೋರ್ಟಲ್ ಲಿಂಕ್ https://kayakasetu.drdhananjayasarji.com/
ಪದವೀಧರ ಯುವಕ ಯುವತಿಯರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಯಕ ಸೇತು ಎಂಬ ಸಂಪೂರ್ಣ ಉಚಿತ ಉದ್ಯೋಗ ಪೋರ್ಟಲ್ ಅನ್ನು ಡಾ. ಧನಂಜಯ ಸರ್ಜಿಯವರು ಪ್ರಾರಂಭಿಸಿದ್ದಾರೆ. ಈ ಪೋರ್ಟ್ಲ್ಗೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದ್ದಾರೆ.

ವ್ಯಾಪಾರ ಸಾಮಾನ್ಯ, ಉದ್ಯೋಗ ಅಸಮಾನ್ಯ, ಈ ದಿನ ವಿಶೇಷ! ದಿನಭವಿಷ್ಯ!
ಎಂಎಲ್ಸಿ ಡಾ. ಧನಂಜಯ ಸರ್ಜಿ ಅವರ ನೂತನ ಕಚೇರಿಯು ನಗರದ ವಿನೋಬನಗರದ ಶುಭಮಂಗಳ ಕಲ್ಯಾಣ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಪ್ರಾರಂಭವಾಗಿದ್ದು ಇದರ ಉದ್ಘಾಟನೆ ಕೈಗೊಂಡ ಸಂಸದ ರಾಘವೇಂದ್ರ ಜಾಬ್ ಪೋರ್ಟ್ಲ್ಗೂ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚನ್ನಬಸಪ್ಪ ಕಾಯಕ ಸೇತು ಉಚಿತ ಜಾಬ್ ಪೋರ್ಟಲ್ ಆರಂಭಿಸುವ ಮೂಲಕ ನಿರುದ್ಯೋಗಿ ಯುವ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಮತ್ತೊಂದು ಸಮಾಜಮುಖಿ ಕಾರ್ಯಕ್ಕೆ ಧನಂಜಯ್ ಸರ್ಜಿಯವರು ಕೈಹಾಕಿದ್ದಾರೆ ಎಂದು ಶ್ಲಾಘಿಸಿದರು.
ವಿದೇಶದಲ್ಲಿ ಉದ್ಯೋಗದ ಆಮಿಷ: ಯುವಕನಿಗೆ 3 ಲಕ್ಷ ರೂ. ವಂಚನೆ,
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

