SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 14, 2025
ಶಿವಮೊಗ್ಗ | ಶಿವಮೊಗ್ಗದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಕ್ಕೆಜೋಳ ಸಂಶೋದನಾ ಕೇಂದ್ರ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ಅನ್ನು ಪಂಜಾಬ್ನ ಲೂಧಿಯಾನದಿಂದ ಶಿವಮೊಗ್ಗದ ಶಿವಪ್ಪನಾಯಕ ಕೃಷಿ ವಿವಿಗೆ ಕೇಂದ್ರಸರ್ಕಾರ ವರ್ಗಾಯಿಸಿದೆ ಎಂದು ಸಂಸದರಾದ ಬಿವೈ ರಾಘವೇಂದ್ರ ತಿಳಿಸಿದರು.
ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಕ್ರಾಂತಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೃಷಿ ಇಲಾಖೆ ಮೂಲಕ ಶಿವಮೊಗ್ಗಕ್ಕೆ ಈ ವಿಶೇಷ ಕೊಡುಗೆಯನ್ನು ನೀಡಿದೆ.

ವಿಶ್ವದಲ್ಲಿ ನಮ್ಮ ಭಾರತ ದೇಶ ಮೆಕ್ಕೆಜೋಳ ಬೆಳೆಯುವಲ್ಲಿ 7 ನೇ ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ 20 ಲಕ್ಷದ 600 ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆ ಜೋಳವನ್ನು ಬೆಳೆಯಲಾಗುತ್ತಿದೆ.ಲೂಧಿಯಾನದಿಂದ ಶಿವಮೊಗ್ಗಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಕ್ಕೆಜೋಳ ಸಂಶೋದನಾ ಕೇಂದ್ರ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ಅನ್ನು ವರ್ಗಾವಣೆಗೆ ಮಾಡಲು ಇಲ್ಲಿನ ಉತ್ತಮ ವಾತಾವರಣವೇ ಕಾರಣವಾಗಿದೆ ಎಂದರು.
ಮೆಕ್ಕೆಜೋಳವನ್ನು ಹೆಚ್ಚು ಲಾಭದಾಯಕವಗಿಸಲು, ಗುಣಮಟ್ಟದ ಬೆಳೆ ಬೆಳೆಯಲು ಈ ಸಂಸ್ಥೆ ಸಹಕಾರಿಯಾಗಿದೆ. ಜನವರಿ 18 ರಂದು ಕೇಂದ್ರ ಕೃಷಿ ಸಚಿವರು ಶಿವಮೊಗ್ಗಕ್ಕೆ ಬರುವ ಯೋಜನೆ ಇದ್ದು, ಬೇರೆ ಬೇರೆ ಕಾರಣಕ್ಕಾಗಿ ಕೃಷಿ ಸಚಿವ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.ಜನವರಿ 18 ರಂದು ಅವರು ಶಿವಮೊಗ್ಗಕ್ಕೆ ಬಂದರೆ ಈ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಲು ಯೋಜಿಸಲಾಗಿದೆ ಎಂದರು.
SUMMARY | The Centre has shifted the Indian Institute of Maize Research Centre in Shivamogga and the Indian Institute of Millets Research from Ludhiana in Punjab to Shivappanayaka Agricultural University in Shivamogga, mp B Y Raghavendra said.
KEYWORDS | Shivappanayaka Agricultural University, Shivamogga, B Y Raghavendra,