ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 30, 2025: ಅಜ್ಜನನ್ನು ಕೊಲೆ ಮಾಡಿದ ಪ್ರಕರಣವೊಂದರಲ್ಲಿ ಮೊಮ್ಮಗನಿಗೆ ಕೋರ್ಟ್ವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ . ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರೋಣ ವಾಸುದೇವ್ ಈ ತೀರ್ಪು ನೀಡಿದ್ದಾರೆ. ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಜೈಲು ಶಿಕ್ಷೆಯ ಜೊತೆಗೆ ₹ 1 ಲಕ್ಷ ದಂಡವನ್ನೂ ಸಹ ವಿಧಿಸಿದೆ.

ಶಿವಮೊಗ್ಗ : ಜಿಲ್ಲಾ ಸರ್ವೆಕ್ಷಣಾ ಅಧಿಕಾರಿ ನೇತೃತ್ವದಲ್ಲಿ 58 ಕಡೆಗಳಲ್ಲಿ ರೇಡ್
ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ನಿವಾಸಿ ಎಸ್. ಚಿತ್ರಲಿಂಗಪ್ಪ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಚಿತ್ರಲಿಂಗಪ್ಪನು ತನ್ನ ಅಜ್ಜನಾದ ಈಶ್ವರಪ್ಪರಿಂದ ₹ 3 ಲಕ್ಷದಷ್ಟು ಕೈಗಡ ಸಾಲವನ್ನು ಪಡೆದಿದ್ದು, ಅದರಲ್ಲಿ ಕೇವಲ ₹ 75,000 ಮಾತ್ರ ಮರುಪಾವತಿಸಿದ್ದ. ಇನ್ನೊಂದೆಡೆ ಚಿತ್ರಹಳ್ಳಿ ಪೆಟ್ರೋಲ್ ಬಂಕ್ ಬಳಿ ರಸ್ತೆ ಬದಿಯಲ್ಲಿದ್ದ ಒಂದೂವರೆ ಎಕರೆ ಜಮೀನನ್ನು ಈಶ್ವರಪ್ಪ ಅವರು ಕಡಿಮೆ ಬೆಲೆಗೆ ಮಾರಾಟ ಮಾಡಿಸಿದ್ದರಿಂದ ಈಶ್ವರಪ್ಪ ಮತ್ತು ಮೊಮ್ಮಗ ಚಿತ್ರಲಿಂಗಪ್ಪನ ನಡುವೆ ತೀವ್ರ ಕಲಹ ನಡೆದಿತ್ತು. ಈ ಸಂದರ್ಭದಲ್ಲಿ, ಅಜ್ಜ ಈಶ್ವರಪ್ಪ ಅವರು ಉಳಿದ ಬಾಕಿ ₹ 2.25 ಲಕ್ಷವನ್ನು ತಕ್ಷಣ ಹಿಂದಿರುಗಿಸುವಂತೆ ಚಿತ್ರಲಿಂಗಪ್ಪನಿಗೆ ಪದೇ ಪದೇ ಒತ್ತಡ ಹೇರುತ್ತಿದ್ದರು.

ದುಡ್ಡು ಕಾಸು ವಿಚಾರದಲ್ಲಿ ಈ ದಿನದ ಭವಿಷ್ಯ ಬೇರೆಯಿದೆ? ದಿನಭವಿಷ್ಯ
ಇದರಿಂದ ಕೋಪಗೊಂಡಿದ್ದ ಚಿತ್ರಲಿಂಗಪ್ಪ 2022ರ ಜುಲೈ 9ರಂದು ಅರಸನಘಟ್ಟ ಗ್ರಾಮದ ಸಮೀಪದ ಹನುಮಂತದೇವರ ಕಣಿವೆ ಪ್ರದೇಶಕ್ಕೆ ಅಜ್ಜನನ್ನು ಕರೆದುಕೊಂಡು ಹೋಗಿ ಅಲ್ಲಿಯೇ ಕೊಲೆ ಮಾಡಿದ್ದ. ಈ ಪ್ರಕರಣದ ಬಗ್ಗೆ ಸಿಪಿಐ ಕೆ.ಎನ್. ರವೀಶ್ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
