ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 30, 2025: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ, ಶುದ್ಧ ನವಮಿ ತಿಥಿ, ಶ್ರವಣ ನಕ್ಷತ್ರ . ರಾಹುಕಾಲ: ಮಧ್ಯಾಹ್ನ 01:30 ರಿಂದ 03:00 ರವರೆಗೆ ,ಯಮಗಂಡ: ಬೆಳಿಗ್ಗೆ 06:00 ರಿಂದ 07:30 ರವರೆಗೆ, ಗುಳಿಕ ಕಾಲ: ಬೆಳಿಗ್ಗೆ 09:00 ರಿಂದ 10:30 ರವರೆಗೆ ಇರಲಿದೆ. ಹಾಗೂ ಜಾತಕದ ಪ್ರಕಾರ ಇಂದು ಬುಧ, ಶುಕ್ರ ಮತ್ತು ಶನಿಯರು ಉತ್ತಮ ಫಲವನ್ನು ನೀಡಿದರೆ, ರಾಹು, ಕೇತು, ಗುರು ಮತ್ತು ರವಿ ಮಿಶ್ರ ಫಲವನ್ನು ನೀಡುತ್ತಾರೆ.

ಮೇಷ : ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿಮ್ಮ ಪ್ರಯತ್ನ ಯಶಸ್ಸಿನತ್ತ ಸಾಗುತ್ತವೆ. ವೃತ್ತಿಪರ ದೃಷ್ಟಿಕೋನ ಸ್ಪಷ್ಟವಾಗಿರಲಿದೆ. ಗೌರವ ಮತ್ತು ಖ್ಯಾತಿ ಹೆಚ್ಚಲಿದೆ. ಆಸ್ತಿಯಿಂದ ಲಾಭ ನಿರೀಕ್ಷಿಸಬಹುದು.
ವೃಷಭ: ಅಡೆತಡೆಗಳು ಎದುರಾಗಬಹುದು. ಸಾಲದ ವಿಚಾರದಲ್ಲಿ ಎಚ್ಚರವಿರಲಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೆಚ್ಚಿನ ನಿರೀಕ್ಷೆಯಿಲ್ಲ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
ಮಿಥುನ : ದೂರ ಪ್ರಯಾಣ. ಖರ್ಚು ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಜವಾಬ್ದಾರಿಗಳ ಭಾರ. ವ್ಯವಹಾರ ಮತ್ತು ಉದ್ಯೋಗದಲ್ಲಿ ನಿರೀಕ್ಷೆಯಂತೆ ಈ ದಿನ ಪ್ರಗತಿ ಸಾಧಿಸುವುದಿಲ್ಲ.

ಶಿವಮೊಗ್ಗದ ಈ ರಸ್ತೆಗೆ ಎಸ್.ಬಂಗಾರಪ್ಪನವರ ಹೆಸರು!
ಕರ್ಕಾಟಕ: ವೃತ್ತಿಪರ ಪ್ರಯತ್ನಕ್ಕೆ ಫಲವಿದೆ. ಹೊಸಬರು ಜೀವನದಲ್ಲಿ ಬರುವರು. ಶುಭ ಸಮಾಚಾರ ಕೇಳುವಿರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ ಕಂಡುಬರುತ್ತದೆ.
ಸಿಂಹ : ಆಸ್ತಿ-ಸಂಬಂಧಿತ ವಿವಾದ. ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ.ಕೆಲಸಗಳಲ್ಲಿ ಸಿದ್ಧಿ ಪಡೆಯುವಿರಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಉತ್ತಮ ದಿನ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲ
ಕನ್ಯಾ : ಅನಿರೀಕ್ಷಿತ ಪ್ರಯಾಣ. ಕೆಲಸದ ಜವಾಬ್ದಾರಿ ಹೆಚ್ಚಾಗುತ್ತವೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಇರಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಒತ್ತಡದಿಂದ ಕೂಡಿರುತ್ತವೆ.
ರೈತ ಮಹಿಳೆಯರಿಗೆ ಗುಡ್ ನ್ಯೂಸ್: ಉಚಿತವಾಗಿ ಸಿಗಲಿವೆ ನಾಟಿ ಕೋಳಿಮರಿಗಳು
ತುಲಾ : ಕೌಟುಂಬಿಕ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿಯು ನಿಧಾನಗತಿಯಲ್ಲಿ ಇರುತ್ತದೆ. ಅನಾರೋಗ್ಯ, ಒತ್ತಡ ಎದುರಾಗುತ್ತವೆ.
ವೃಶ್ಚಿಕ : ಉತ್ತಮ ದಿನ. ಶುಭ ಸುದ್ದಿ. ಹೆಚ್ಚುವರಿ ಆದಾಯದ ಮೂಲ ಸೃಷ್ಟಿಯಾಗುತ್ತವೆ. ಆಪ್ತ ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ. ವ್ಯವಹಾರ ಮತ್ತು ಉದ್ಯೋಗದಲ್ಲಿ ಭರವಸೆಯ ದಿನ
ಶಿವಮೊಗ್ಗ : ಜಿಲ್ಲಾ ಸರ್ವೆಕ್ಷಣಾ ಅಧಿಕಾರಿ ನೇತೃತ್ವದಲ್ಲಿ 58 ಕಡೆಗಳಲ್ಲಿ ರೇಡ್
ಧನು : ಓಡಾಟ ಜಾಸ್ತಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶ. ಆರೋಗ್ಯದಲ್ಲಿ ಏರುಪೇರು ಕಾಣಬಹುದು. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಘರ್ಷಣೆ. ಉದ್ಯೋಗದಲ್ಲಿ ಸಣ್ಣ ಬದಲಾವಣೆ.

ಮಕರ : ಹೊಸ ಯೋಜನೆ ಕಾರ್ಯಗತಗೊಳಿಸಲು ಶುಭ ಸಮಯ. ಬಾಲ್ಯದ ಗೆಳೆಯರನ್ನು ಭೇಟಿಯಾಗುವ ಅವಕಾಶವಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ.
ಕುಂಭ : ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತವೆ. ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದ ಬೆಳವಣಿಗೆ ನಿರಾಸೆ ತರಬಹುದು. ಅನಾರೋಗ್ಯದ ಬಗ್ಗೆ ಎಚ್ಚರವಿರಲಿ.
ಮೀನ : ಹೊಸ ಉದ್ಯೋಗದ ಅವಕಾಶ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇಂದು ಅತ್ಯುತ್ತಮ ಸಮಯ. ಅನಿರೀಕ್ಷಿತ ಆಹ್ವಾನ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಸ್ಪಷ್ಟ ಪ್ರಗತಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ
