ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಇತ್ತಿಚೆಗೆ ಆಗುಂಬೆ ಶೃಂಗೇರಿ ಸಮೀಪ ಕಾಡಾನೆಗಳ ಹಾವಳಿ ಜಾಸ್ತಿ ಆಗಿದೆ. ಇದರ ಬೆನ್ನಲ್ಲೆ ನಿನ್ನೆದಿನ ಮೃಗವಧೆ ಬಳಿಯಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಅಲ್ಲದೆ ಭತ್ತದ ಗದ್ದೆಯಲ್ಲಿಯೇ ಆನೆ ಘೀಳಿಡುತ್ತಾ ಓಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಮೃಗವಧೆಯ ಹತ್ರ ತೋಟವೊಂದಕ್ಕೆ ನುಗ್ಗಿದ ಕಾಡಾನೆಗಳು ಭತ್ತದ ಗದ್ದೆಯನ್ನು ಸಹ ಹಾಳು ಮಾಡಿವೆ. ಸ್ಥಳೀಯರು ಕಾಡಾನೆಗಳನ್ನು ಕಂಡ ಬೆನ್ನಲ್ಲೆ ಕೂಗು ಹೊಡೆದು ಓಡಿಸಲು ಪ್ರತ್ನಿಸಿದ್ದಾರೆ. ಇನ್ನೂ ಇವು ಚಿಕ್ಕಮಗಳೂರು ಕಡೆಯಿಂದ ಬಂದಿರಬಹುದು ಎನ್ನಲಾಗುತ್ತಿದೆಯಾದರೂ ಮಾಹಿತಿ ಸ್ಪಷ್ಟವಿಲ್ಲ. ಸ್ಥಳೀಯರ ಮೊಬೈಲ್ನಲ್ಲಿ ಈ ದೃಶ್ಯ ಕಾಣ ಸಿಕ್ಕಿವೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

View this post on Instagram