ಶಿವಮೊಗ್ಗ: ನಗರದ ಬೀನಾ ಅವರು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪ್ರತಿಷ್ಠಿತ ಪಿಎಚ್.ಡಿ (ಡಾಕ್ಟರೇಟ್) ಪದವಿಗೆ ಭಾಜನರಾದ್ದಾರೆ. ಇತ್ತೀಚೆಗೆ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವದಲ್ಲಿ ಇವರಿಗೆ ಪದವಿ ಪ್ರದಾನ ಮಾಡಲಾಯಿತು.
ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..?
ಕೆ.ಎನ್. ಚಂದ್ರಶೇಖರ್ ಹಾಗೂ ಜಯಲಕ್ಷ್ಮಿ ಎಂ.ಪಿ ದಂಪತಿಯ ಪುತ್ರಿಯಾಗಿರುವ ಬೀನಾ ಅವರು, ಹಿರಿಯ ಮಾರ್ಗದರ್ಶಕರಾದ ಡಾ. ಜಯರಾಮಯ್ಯ ವಿ ಅವರ ಮಾರ್ಗದರ್ಶನದಲ್ಲಿ ಬೀನಾ ಸಂಶೋಧನೆ ನಡೆಸಿದ್ದರು. “ರಾಮನಗರ ತಾಲೂಕು ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಮೇಲೆ ಇವರು ಮಂಡಿಸಿದ ಪ್ರಬಂಧಕ್ಕೆ ವಿಶ್ವವಿದ್ಯಾನಿಲಯವು ಈ ಉನ್ನತ ಪದವಿಯನ್ನು ನೀಡಿ ಗೌರವಿಸಿದೆ.
Davanagere University Beena Earns Doctorate


