ಹೋರಿಹಬ್ಬ ಮುಗಿಸಿ ವಾಪಸ್ ಬರುವಾಗಿ ಕಾರು & ಬೈಕ್ ಡಿಕ್ಕಿ ! ಆನಂದಪುರ ಸಮೀಪ ಓರ್ವ ಸಾವು!ಇನ್ನೊಬ್ಬ ಗಂಭೀರ

Car & bike collided while coming back after horihabba! One death near Anandpur! Another serious ಸಾಗರ ತಾಲ್ಲೂಕು, ಆನಂದಪುರ ಪೊಲೀಸ್ ಸ್ಟೇಷನ್, ಶಿಕಾರಿಪುರ, ಶಿವಮೊಗ್ಗ, Sagar Taluk, Anandpur Police Station, Shikaripura, Shimoga,

ಹೋರಿಹಬ್ಬ ಮುಗಿಸಿ ವಾಪಸ್ ಬರುವಾಗಿ ಕಾರು & ಬೈಕ್ ಡಿಕ್ಕಿ ! ಆನಂದಪುರ ಸಮೀಪ ಓರ್ವ ಸಾವು!ಇನ್ನೊಬ್ಬ ಗಂಭೀರ
ಸಾಗರ ತಾಲ್ಲೂಕು, ಆನಂದಪುರ ಪೊಲೀಸ್ ಸ್ಟೇಷನ್, ಶಿಕಾರಿಪುರ, ಶಿವಮೊಗ್ಗ, Sagar Taluk, Anandpur Police Station, Shikaripura, Shimoga,

SHIVAMOGGA  Feb 27, 2024   ಹೋರಿ ಬೆದರಿಸುವ ಸ್ಪರ್ಧೆ ನೋಡಿ ವಾಪಾಸ್ಸಾಗುತ್ತಿದ್ದ  ಸಂದರ್ಭದಲ್ಲಿ ಅಪಘಾತವಾದ ಘಟನೆ ನಿನ್ನೆ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆ  ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಸ್ಟೇಷನ್​  ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. 

ಕಾರು ಹಾಗೂ ಬೈಕ್​ ನಡುವೆ ಡಿಕ್ಕಿ ಸಂಭವಿಸಿದ್ದು ಘಟನೆಯಲ್ಲಿ ಬೈಕ್ ಸವಾರ ಭೀಮೇಶ್ (42) ಸಾವನ್ನಪ್ಪಿದ್ದಾನೆ ಈ ಅಪಘಾತದಲ್ಲಿ ಮತ್ತೊಬ್ಬ ಸವಾರ ಪ್ರತಾಪ್ (26) ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾಗರದ ಆನಂದಪುರದ ಗೌತಮಪುರ ಬಳಿ ಘಟನೆ ನಡೆದಿದ್ದು, ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 

ಆನಂದಪುರದಿಂದ ಶಿಕಾರಿಪುರ ಕಡೆಗೆ ಕಾರು ಹೋಗುತ್ತಿತ್ತು. ಇದೇ ವೇಳೆ ಅತ್ತ ಶಿಕಾರಿಪುರದಿಂದ ಆನಂದಪುರದೆಡೆಗೆ ಹೋರಿಹಬ್ಬ ಮುಗಿಸಿಕೊಂಡು ಬೈಕ್​ನಲ್ಲಿ ಇಬ್ಬರು ಬರುತ್ತಿದ್ದರು. ಈ ವೇಳೆ ಅಪಘಾತವಾಗಿದೆ. ಬೈಕ್ ಸವಾರರಿಬ್ಬರು 

ಆನಂದಪುರದ ಸಂತೆ ಮೈದಾನ ಬಳಿಯ ನಿವಾಸಿಗಳು ಎಂದು ತಿಳಿದು ಬಂದಿದೆ.