bike accident : ಸ್ಕೂಟರ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಸಂಚರಿಸುತ್ತಿದ್ದ ತಾಯಿ ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಣೆ ಹೊಸೂರು ಹಾಗೂ ತುಪ್ಪೂರು ನಡುವೆ ಗುರುವಾರ ಸಂಭವಿಸಿದೆ. ಮೊಹಮದ್ ಕಬೀರ್ ಮತ್ತು ಅಸ್ಮಾ ಬಾನು ಮೃತರು ಎಂದು ತಿಳಿದು ಬಂದಿದೆ.
bike accident : ಹೇಗಾಯ್ತು ಘಟನೆ
ಹೊಂಡಾ ಆ್ಯಕ್ಟಿವಾದಲ್ಲಿ ಖಲಂದರ್ ಮತ್ತು ಅವರ ಪತ್ನಿ ಅಸ್ಮಾ ಬಾನು ತಮ್ಮ ಇಬ್ಬರು ಮಕ್ಕಳೊಂದಿಗೆ ತರಿಕೆರೆಯಿಂದ ಸಾಗರದ ದರ್ಗಾದತ್ತ ತೆರಳುತ್ತಿದ್ದರು. ಈ ವೇಳೆ, ಕುಂಸಿಯ ಕೋಣೆ ಹೊಸೂರು ಹಾಗೂ ತುಪ್ಪೂರು ನಡುವೆ ಹೋಗುತ್ತಿದ್ದಾಗ ಮಳೆ ಬಂದ ಹಿನ್ನೆಲೆಯಲ್ಲಿ ಖಲಂದರ್ ಅವರು ತಮ್ಮ ಸ್ಕೂಟಿಯನ್ನು ರಸ್ತೆ ಪಕ್ಕದಲ್ಲಿನ ಶೆಡ್ನತ್ತ ತಿರುಗಿಸಿದ್ದಾರೆ. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಡಿಕ್ಕಿ ರಭಸಕ್ಕೆ ನಾಲ್ವರೂ ಸ್ಕೂಟರ್ನಿಂದ ರಸ್ತೆಗೆ ಬಿದ್ದಿದ್ದು. ಆಗ 3 ವರ್ಷದ ಮೊಹಮ್ಮದ್ ಕಬೀರ್ ಮೇಲೆ ಬಸ್ ಹರಿದಿದೆ. ಇದರ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಗಾಯಗೊಂಡ ಖಲಂದರ್, ಪತ್ನಿ ಅಸ್ಮಾ ಬಾನು ಹಾಗೂ ಇನ್ನೋರ್ವ 6 ವರ್ಷದ ಮಗನನ್ನು ತಕ್ಷಣ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಮಾರ್ಗ ಮಧ್ಯದಲ್ಲೇ ಅಸ್ಮಾ ಬಾನು ಕೊನೆಯುಸಿರೆಳೆದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
