KARNATAKA NEWS/ ONLINE / Malenadu today/ Jun 6, 2023 SHIVAMOGGA NEWS
ಶಿವಮೊಗ್ಗ ನಗರದ ಮಹಾವೀರ ಸರ್ಕಲ್ನಲ್ಲಿ ಸಂಭವಿಸಿದ್ದ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. C. S. ಇಕ್ಬಾಲ್ ಅಹ್ಮದ್ ಮೃತರು . 18 ದಿನಗಳಿಂದ ಮೆಟ್ರೋ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಕಳೆದ ಶುಕ್ರವಾರ ಮೃತಪಟ್ಟಿದ್ಧಾರೆ. ಇನ್ನೂ ಘಟನೆಯ ಸಿಸಿ ಟಿವಿ ಪೂಟೇಜ್ ಕೂಡ ದೊರೆತಿದ್ದು, ಸಿಟಿಬಸ್ ಬೈಕ್ಗೆ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಪೂಟೇಜ್ನಲ್ಲಿದೆ.
ಅಂದಿನ ಸುದ್ದಿ : Accident / ಶಿವಮೊಗ್ಗ ನಗರದಲ್ಲಿ ಬೈಕ್ಗೆ ಸಿಟಿ ಬಸ್ ಡಿಕ್ಕಿ! ಬಸ್ಗೆ ಕಲ್ಲು
ಏನಾಗಿತ್ತು ಅಂದು
ಘಟನೆ ನಡೆದ ದಿನ ಹೆಚ್ಪಿಸಿ ಥಿಯೇಟರ್ ಕಡೆಯಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್ವೊಂದು ಮಹಾವೀರ ವೃತ್ತದಲ್ಲಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಸಿಗ್ನಲ್ ಸ್ಟಾಪ್ ಆದ ಬಳಿಕ ಮುಂದಕ್ಕೆ ಬಂದ ಬಸ್, ಸರ್ಕಲ್ ದಾಟುವ ಅವಸರದಲ್ಲಿ, ಬಸ್ಗಿಂತ ಮುಂದೆ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿತ್ತು.
ಘಟನೆ ಬೆನ್ನಲ್ಲೆ ಇನ್ನೊಂದು ಬದಿಯಿಂದ ಬರುತ್ತಿದ್ದ ವಾಹನ ಸವಾರರು,ವೆಹಿಕಲ್ಗಳನ್ನ ನಿಲ್ಲಿಸಿ ಘಟನೆಯಲ್ಲಿ ಗಾಯಗೊಂಡಿದ್ದ ಇಕ್ಬಾಲ್ರವರಿಗೆ ಆರೈಕೆ ಮಾಡಿದ್ದರು. ಬಳಿಕ ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಇತ್ತ ಆಕ್ರೋಶಗೊಂಡಿದ್ದ ಸ್ಥಳೀಯರು ಬಸ್ ಮೇಲೆ ಕಲ್ಲೂ ತೂರಾಟ ನಡೆಸಿ ಅದರ ಗಾಜುಗಳನ್ನ ಒಡೆದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಟ್ರಾಫಿಕ್ ಕಂಟ್ರೋಲ್ ಮಾಡಿದ್ದರು. ಆ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಸರ್ಕಲ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದರು.
ಸರ್ಕಲ್ಗಳಲ್ಲಿ ಇರಲಿ ಎಚ್ಚರ! ಶಿವಮೊಗ್ಗದ ಮಹಾವೀರ್ ಸರ್ಕಲ್ನಲ್ಲಿ ಮೇ 16 ರಂದು ನಡೆದಿದ್ದ ಘಟನೆ ಇಲ್ಲಿದೆ ನೋಡಿ! #Shivamogga pic.twitter.com/FMqNxDiIPh
— malenadutoday.com (@CMalenadutoday) June 6, 2023
ಕುಸ್ಕೂರು ತಾಂಡಾದಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದಿಂದ ಪರಿಸರ ದಿನಾಚರಣೆ
ಶಿವಮೊಗ್ಗ/ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶಿಕಾರಿಪುರ ತಾಲ್ಲೂಕಿನ ಕುಸ್ಕೂರು ತಾಂಡಾದಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದ ಯುವಕರು ಪರಿಸರ ದಿನಾಚರಣೆಯನ್ನು ಹಮ್ಮಿಕೊಂಡಿದ್ದರು.
ಸ್ಥಳೀಯರ ಶಾಲಾ ಮಕ್ಕಳ ಸಹಕಾರದೊಂದಿಗೆ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿರೇಜಂಬೂರು ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಶಾಲೆಯ ಶಿಕ್ಷಕರು, ಮಕ್ಕಳು, ಕುಸ್ಕೂರಿನ ಗ್ರಾಮಪಂಚಾಯತ್ ಸದಸ್ಯರು, ಯುವಕರು ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
