ಅಗ್ನಿಪಥ್ ಯೋಜನೆಯಡಿಯಲ್ಲಿ ಉಡುಪಿಯಲ್ಲಿ ಸೇನಾ ನೇಮಕಾತಿ ಶಿಬಿರ! ಯಾರಿಗೆಲ್ಲಾ ಅವಕಾಶ!?

Army recruitment camp in Udupi under Agneepath scheme! Who all have the opportunity!?

ಅಗ್ನಿಪಥ್ ಯೋಜನೆಯಡಿಯಲ್ಲಿ ಉಡುಪಿಯಲ್ಲಿ ಸೇನಾ ನೇಮಕಾತಿ ಶಿಬಿರ! ಯಾರಿಗೆಲ್ಲಾ ಅವಕಾಶ!?

ಅಗ್ನಿಪಥ್ ಯೋಜನೆಯಡಿ ಅಗ್ನಿವೀರ ರನ್ನು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಕರಾವಳಿ ಜಿಲ್ಲೆ  ಉಡುಪಿಯ ಮಹಾತ್ಮಗಾಂಧಿ ಕ್ರೀಡಾಂಗಣ ದಲ್ಲಿ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. 

ಈಗಾಗಲೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ 6,500 ಅಭ್ಯರ್ಥಿ ಗಳು ಆಯ್ಕೆಯಾಗಿದ್ದಾರೆ. ಅಂತಿ ಮವಾಗಿ ದೈಹಿಕ ಪರೀಕ್ಷೆ ಹಿನ್ನೆಲೆಯಲ್ಲಿ ಈಗ ರ್ಯಾಲಿ ನಡೆಸಲಾಗುತ್ತಿದೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ದೈಹಿಕ ಪರೀಕ್ಷೆಯ ರಾಲಿಯಲ್ಲಿ ಭಾಗವಹಿಸಬಹುದು. 

ಱಲಿಯು ಇದೇ  ಜುಲೈ 17ರಿಂದ 23ರ ವರೆಗೆ ನಡೆಯಲಿದೆ. ಜುಲೈ 17ರಂದು ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಅಭ್ಯರ್ಥಿಗಳು, 

ಜು.18ರಂದು ಉತ್ತರ ಕನ್ನಡ ಮತ್ತು ಗದಗ, ಜು.19ರಂದು ಧಾರ ವಾಡ, 20ರಂದು ವಿಜಯಪುರ, 21,22ರಂದು ಬಾಗಲಕೋಟ, 23ರಂದು ಎಲ್ಲ ಜಿಲ್ಲೆಯವರಿಗೆ ಱಲಿ ನಡೆಯಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.


ಕುವೆಂಪು ವಿವಿಯಲ್ಲೊಂದು ಅಪರೂಪದ ಕಾರ್ಯಕ್ರಮ! ವಿಶ್ವಾಸರ್ಹತೆಯ ಮಾತು!



ಶಂಕರಘಟ್ಟ,: ಮಾಧ್ಯಮಗಳು ಒಂದು ಸಿದ್ಧಾಂತಕ್ಕೆ ಜೋತು ಬಿದ್ದು, ಅಥವಾ ಒಬ್ಬ ವ್ಯಕ್ತಿಯೇ ಶ್ರೇಷ್ಠ ಎಂಬ ಆಯಾಮದಲ್ಲಿ ಸುದ್ದಿ ಪ್ರಸಾರ ಮಾಡುತ್ತಿದ್ದರೆ ಮಾಧ್ಯಮಗಳ ವಿಶ್ವಾಸಾರ್ಹತೆ ಕುಂದುತ್ತದೆ. ಅಲ್ಲದೆ ಮಾಧ್ಯಮ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ನಡೆಯುವ ಅತಿರೇಕಗಳಿಗೆ ಕೊನೆಯಿರುವುದು ನಿಶ್ಚಿತ ಎಂದು ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಆರಗ ರವಿ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವ್ಯಕ್ತಿಗಿಂತ ವಿಚಾರಗಳು ಮುಖ್ಯ ಎಂಬುದನ್ನು ಇತಿಹಾಸ ಸದಾ ಎತ್ತಿತೋರಿದೆ. ಎಲ್ಲರನ್ನು ನಗಣ್ಯಗೊಳಿಸಿ ತಾನೇ ಏಕಮೇವಾಧಿಪತ್ಯ ಸಾಧಿಸಬೇಕೆಂದು ಯಾರಾದರೂ ಹೊರಟಲ್ಲಿ ಅದು ವ್ಯವಸ್ಥೆಗೆ ಮಾರಕ. ಪತ್ರಕರ್ತರಾಗುವವರು ಯಾವುದೇ ಸಿದ್ಧಾಂತಗಳಿಗೆ ಮಾರುಹೋಗದೆ ಜೀವಪರ ಸಿದ್ಧಾಂತವನ್ನು ಮಾತ್ರ ಅನುಸರಿಸಿ, ಧರ್ಮಾತೀತವಾಗಿ, ಜಾತ್ಯಾತೀತಾಗಿ ಸಕಲರನ್ನು ಸಮಾನವಾಗಿ ಕಂಡು ಕಾರ್ಯನಿರ್ವಹಿಸಬೇಕು. 

ಪತ್ರಕರ್ತರು ಭಾವೋದ್ರೇಕ, ಸಮೂಹಸನ್ನಿಯಲ್ಲಿ ಕಳೆದು ಹೋಗದೆ ಸ್ವತಂತ್ರವಾಗಿ ಯೋಚಿಸಿದಲ್ಲಿ, ಅತಿರೇಕಗಳನ್ನು ಪ್ರಶ್ನಿಸುತ್ತಾ ನಡೆದಲ್ಲಿ ಸಮಾಜ ಬಯಸುವ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದರು.

ಮಹಾಭಾರತದಲ್ಲಿ ಸಂಜಯ ಪಾತ್ರಧಾರಿ ಒಬ್ಬ ವಸ್ತುನಿಷ್ಠ ಪತ್ರಕರ್ತನಾಗಿ ಉತ್ತಮ ಉದಾಹರಣೆಯಾಗಿದ್ದಾನೆ. ಅಂದರೆ ಕಂಡದನ್ನು ಕಂಡಹಾಗೆ ಕಿಂಚಿತ್ತು ವೈಯಕ್ತಿಕ ಅಭಿಪ್ರಾಯಗಳನ್ನು ಸೇರಿಸದೆ ಓದುಗರಿಗೆ ತಲುಪಿಸುವುದು ಒಬ್ಬ ನಿಷ್ಠಾವಂಥ ಪತ್ರಕರ್ತನ ಕರ್ತವ್ಯವಾಗಿದೆ. ಆಧುನಿಕ ಕಾಲಮಾನದಲ್ಲಿ ಕೈಯಲ್ಲಿ ಮೊಬೈಲ್ ಇದ್ದರೆ ಪ್ರತಿಯೊಬ್ಬರು ಒಬ್ಬ ಪತ್ರಕರ್ತನಂತೆ ಕೆಲಸ ಮಾಡಬಹುದು. ಇದರ ಮಧ್ಯೆ ಒಂದು ವಿದ್ಯಮಾನವನ್ನು ವೈಜ್ಞಾನಿಕ, ತರ್ಕಬದ್ಧ ಹಾಗೂ ಆಸಕ್ತಿದಾಯಕ ದೃಷ್ಟಿಕೋನದಲ್ಲಿ ಗ್ರಹಿಸಿ ಸುದ್ದಿ ಮಾಡುವವನೇ ಒಬ್ಬ ನುರಿತ ಪತ್ರಕರ್ತನೆನಿಸಿಕೊಳ್ಳುತ್ತಾನೆ.

ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಸಂತೋಷ್ ಕಾಚಿನಕಟ್ಟೆ ಮಾತನಾಡಿ ಪತ್ರಕರ್ತರಾಗ ಬಯಸುವವರಿಗೆ ಇಂದು ಯಥೇಚ್ಛ ಅವಕಾಶಗಳಿವೆ. ಆಳವಾದ ಓದು, ಸತತ ಬರವಣಿಗೆ, ಆಧುನಿಕ ಮಾರುಕಟ್ಟೆ ಆಧರಿತ ಜಗತ್ತಿನ ಅವಶ್ಯಕ ಕೌಶಲ್ಯಗಳನ್ನು ಕಲಿತಲ್ಲಿ ಕಂಪನಿಗಳಲ್ಲಿ, ಮಾಧ್ಯಮಗಳಲ್ಲಿ, ಜಾಹೀರಾತು, ಸಿನೆಮಾ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತವೆ. ಪತ್ರಕರ್ತರಾದಲ್ಲಿ ಸಾರ್ವಜನಿಕ ಜೀವನದಲ್ಲಿರುವವರೊಂದಿಗೆ ಆತ್ಮೀಯ ಸಂಬಂಧಗಳನ್ನು ಹೊಂದಬಾರದು. ಅದು ವಿಮರ್ಶಾತ್ಮಕ ದೃಷ್ಟಿಕೋನವನ್ನು, ಹೊಸ ಸುದ್ದಿಯ ಅರಸುವ ಬುದ್ಧಿಯನ್ನು ಕೊಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷರಾದ ಡಾ. ಎಂ. ಆರ್. ಸತ್ಯಪ್ರಕಾಶ್, ಹಿರಿಯ ಪ್ರಾಧ್ಯಾಪಕರಾದ ಡಾ. ವರ್ಗೀಸ್, ಡಾ. ಸತೀಶ್‌ಕುಮಾರ್, ಪತ್ರಕರ್ತ ಜೇಸುದಾಸ್, ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಶರತ್‌ಕುಮಾರ್, ವಿಭಾಗದ ಉಪನ್ಯಾಸಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.


ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪಲ್ಟಿಯಾದ ಪಿಕಪ್ ವಾಹನ! ನಡೆದಿದ್ದೇಗೆ? 

ಚಿಕ್ಕಮಗಳೂರು:  ತಮ್ಮ ಮನೆಗೆ ಪೋಲ್ಸ್​ಗಳನ್ನ ಹಾಗೂ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಪಿಕಪ್​ ವಾಹನವೊಂದು ಚಾರ್ಮಾಡಿ ಘಾಟಿಯಲ್ಲಿ ಪಲ್ಟಿಯಾದ ಘಟನೆ ಬಗ್ಗೆ ನಿನ್ನೆ ವರದಿಯಾಗಿದೆ. ಘಾಟಿ ರಸ್ತೆಯ ಮೇಲೆ ವಾಹನ ಪಲ್ಟಿಯಾದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಮಳೆಯಿಂದಾಗಿ ರಸ್ತೆ ತೇವಗೊಂಡಿತ್ತು. ಲೋಡ್​ ಗಾಡಿಯ ಟಯರ್​ ಆಲೇಖಾನ್​ ಬಳಿಯಲ್ಲಿ ರಸ್ತೆಯಿಂದ ಕೆಳಕ್ಕೆ ಇಳಿದಿದೆ. ಇದರಿಂದ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.