ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 20 2025 : ಆಗುಂಬೆ ಘಾಟಿಯಲ್ಲಿ ನಿನ್ನೆ ದಿನ ಧರೆ ಕುಸಿದ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಯಾಗಿತ್ತಷ್ಟೆ ಅಲ್ಲದೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಇವತ್ತು ಬೆಳಗ್ಗೆನಿಂದಲೇ ಕಾರ್ಯಾಚರಣೆ ನಡೆಸಿದ ವಿವಿಧ ಇಲಾಖೆಯ ಸಿಬ್ಬಂಧಿ ರಸ್ತೆ ಮೇಲೆ ಕುಸಿದ ಮಣ್ಣನ್ನು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹಾಗಾಗಿ ಆಗುಂಬೆಯಲ್ಲಿ ಸದ್ಯ ವಾಹನಗಳ ಸಂಚಾರ ನಡೆಸುತ್ತಿವೆ. ಇದರ ಹೊರತಾಗಿಯು ಅಧಿಕಾರಿಗಳು ಸಿಬ್ಬಂಧಿ ಸ್ಥಳದಲ್ಲಿದ್ದು ಪೂರ್ಣವಾಗಿ ಧರೆಕುಸಿತದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸ್ತಿದ್ದಾರೆ.

ಇನ್ನೂ ಆಗುಂಬೆಯ ಘಾಟಿಯಲ್ಲಿ ನಡೆದ ಮಣ್ಣು ತೆರವು ಕಾರ್ಯಾಚರಣೆ ಹಾಗೂ ಸದ್ಯದ ಅಲ್ಲಿಯ ಸ್ಥಿತಿಯ ಫೋಟೋಗಳನ್ನು ಇಲ್ಲಿ ಗಮನಿಸಬಹುದು.

ಆರನೇ ತಿರುವಿನಲ್ಲಿ ಕಳೆದ ಸಂಜೆ ರಸ್ತೆಗಿಳಿದಿದ್ದ ಮಣ್ಣು ಮತ್ತು ಮರವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ವಾಹನಗಳ ಓಡಾಟ ಮತ್ತೆ ಆರಂಭಗೊಂಡಿದೆ.



ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!