ತೀರ್ಥಹಳ್ಳಿಯಲ್ಲಿ ಹರಿದಾಡ್ತಿರೋ ಅ….ವಿಡಿಯೋಗೆ ಸಿಕ್ತು ಪೊಲಿಟಿಕಲ್​ ಟ್ವಿಸ್ಟ್! ಏನಿದು ಹೊಸ ಸಂಗತಿ!

Malenadu Today

KARNATAKA NEWS/ ONLINE / Malenadu today/ Jul 6, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮತ್ತೆ ಅಶ್ಲೀಲ ವಿಡಿಯೋ ಹರಿದಾಡ್ತಿದೆ. ಮೇಲಾಗಿ ರಾಜಕೀಯ ಉದ್ದೇಶಕ್ಕಾಗಿ ಇಂತಹ ವಿಡಿಯೋಗಳು ಹರಿದಾಡ್ತಿರುವುದು ಇಲ್ಲಿ ಗಮನಾರ್ಹವಾಗಿದೆ. ಈ ಹಿಂದೆ ಎಬಿವಿಪಿ ಮುಖಂಡನ ವಿಡಿಯೋಗಳು ಹರಿದಾಡಿದ್ದವು. ಈ ಸಂಬಂಧ ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಕಾಂಗ್ರೆಸ್ ಪರ ಸಂಘಟನೆಗಳು ಪ್ರತಿಭಟನೆ  ನಡೆಸಿದ್ದವು. 

ಈ ನಡುವೆ ವಿಡಿಯೋ ವಿವಾದ ತಾರಕ್ಕೇರುತ್ತಿರುವಾಗಲೇ ಹಿಂದೂ ಪರ ಸಂಘಟನೆಯ ಮುಖಂಡರು ಖುದ್ದಾಗಿ ದೂರು ನೀಡಿ, ಅಶ್ಲೀಲ ವಿಡಿಯೋದಲ್ಲಿದ್ದ ಯುವಕ ಅರೆಸ್ಟ್​ ಆಗುವಂತೆ ಮಾಡಿದ್ದರು. ಪ್ರಕರಣ ಅಲ್ಲಿಗೆ ತಾರ್ಕಿಕ ಅಂತ್ಯ ಕಂಡಿತ್ತು. 

ಇದೀಗ ಮತ್ತೊಬ್ಬನ ವಿಡಿಯೋ ತೀರ್ಥಹಳ್ಳಿಯಲ್ಲಿ ಹರಿದಾಡ್ತಿದೆ. ಕಾಂಗ್ರೆಸ್ ಪಕ್ಷದ​ ವಿದ್ಯಾರ್ಥಿ ಸಂಘಟನೆ ಎನ್​ಎಸ್​ಯುಐ ನಲ್ಲಿ ಗುರುತಿಸಿಕೊಂಡಿರುವ ಯುವಕನೊಬ್ಬನ ವಿಡಿಯೋ ಇದಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಇದೇ ವಿಚಾರದಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ.  

ಮಹಿಳೆಯರಿಗೆ ಬೆದರಿಕೆ ಒಡ್ಡಿ ಮಾನಹಾನಿ ಮಾಡುತ್ತಿದ್ದು, , ಕೋಮು ಸಾಮರಸ್ಯಕ್ಕೆ ಧಕ್ಕೆ ತರಲಾಗುತ್ತಿದೆ. ಹೀಗಾಗಿ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ  ಬಿಜೆಪಿಯ ಯುವ ಮುಖಂಡರು ತೀರ್ಥಹಳ್ಳಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.  

ಇನ್ನೊಂದೆಡೆ ಈ ಹಿಂದೆ ಬಿಜೆಪಿ ಪರ ಸಂಘಟನೆಯ ಕಾರ್ಯಕರ್ತನ ವಿರುದ್ಧ ಪ್ರತಿಭಟಿಸಿದ ಹಾಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧವೂ ಪ್ರತಿಭಟಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ. ಈ ಸಂಬಂಧ ವಾಟ್ಸ್ಯಾಪ್​ ಸಂದೇಶಗಳು ಹರಿದಾಡುತ್ತಿದ್ದು,  ಈತನ ವಿರುದ್ಧ ಕಿಮ್ಮನೆಯವರು ಪ್ರತಿಭಟಸಿವುದಿಲ್ಲವೇ ಎಂದು ಪ್ರಶ್ನಿಸಲಾಗುತ್ತಿದೆ. 

ತತ್ಸಂಬಂಧ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯೆ ನೀಡಿಲ್ಲವಾದರೂ, ವಿಡಿಯೋ ಹಾಗೂ ಅದರ ಹಿಂದಿನ ರಾಜಕೀಯ ತೀರ್ಥಹಳ್ಳಿಯಲ್ಲಿ ವಿಪರೀತ ಚರ್ಚೆಗೆ ಎಡೆಮಾಡಿಕೊಟ್ಟಿದೆ. 


 

Share This Article