ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ದುಡ್ಡನ್ನ ಲಪಟಾಯಿಸಿ ಎಸ್ಕೇಪ್ ಆದ ಸಿಬ್ಬಂದಿ! ಏನಿದು ಪ್ರಕರಣ! ನಡೆದಿದ್ದೆಲ್ಲಿ

Malenadu Today

KARNATAKA NEWS/ ONLINE / Malenadu today/ Jun 23, 2023 SHIVAMOGGA NEWS  

ಶಿವಮೊಗ್ಗ/ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಬ್ಯಾಂಕ್​​ಗೆ ಕಟ್ಟಬೇಕಿದ್ದ ಧರ್ಮಸ್ಥಳ ಸಂಘದ ಹಣವನ್ನು ಕದ್ದು ಪರಾರಿಯಾದ ಬಗ್ಗೆ ಕಂಪ್ಲೆಂಟ್ ದಾಖಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ. 

ಏನಿದು ಪ್ರಕರಣ?

ದಿನಾಂಕ 20-06-2023 ರಂದು ನಡೆ ಪ್ರಕರಣ ಇದಾಗಿದೆ. ಈ ಸಂಬಂಧ ತಾಲ್ಲೂಕು ಯೋಜನಾಧಿಕಾರಿ ದೂರು ನೀಡಿದ್ಧಾರೆ. ಕರಾವಳಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇತರೆ ಜಿಲ್ಲೆಗಳಿಗೂ ವಿಸ್ತರಿಸಿಕೊಂಡಿದೆ. ಶಿವಮೊಗ್ಗದಲ್ಲಿಯು  ಸುಮಾರು 2750 ಸಂಘಗಳನ್ನು ರಚಿಸಲಾಗಿದೆ. ಪ್ರತಿವಾರದ ಸಭೆಯ ನಂತರ ಸಂಘದ ಸದಸ್ಯರು ಉಳಿತಾಯ ನಿದಿ ಹಾಗೂ ಸಾಲ ಮರುಪಾವತಿಯನ್ನು ಮಾಡುತ್ತಾರೆ. ಆ ಹಣವನ್ನು ಬ್ಯಾಂಕ್​ಗೆ ಪಾವತಿಸಲು ಯೋಜನೆಯಲ್ಲಿ ಗ್ರಾಹಕರ ಸೇವಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ವ್ಯವಸ್ಥೆಯಡಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಅವರ ಮೂಲಕ ಸಂಘದ ಹಣವನ್ನು ಸ್ವೀಕರಿಸಿ ಬ್ಯಾಂಕ್​ಗೆ ಕಟ್ಟಬೇಕು. 

ಆದರೆ ಹಸೂಡಿಯಲ್ಲಿ ಅಲ್ಲಿಯ ನಿವಾಸಿ ಪರಮೇಶ್ವರ್​ ಕಳೆದ ಇಪ್ಪತ್ತನೇ ತಾರೀಖು ತಾನು ಸಂಗ್ರಹಿಸಿದ್ದ  2,70.209/- (ಎರಡು ಲಕ್ಷದ ಎಪ್ಪತ್ತು ಸಾವಿರದ ಇನ್ನೂರ ಒಂಭತ್ತು) ರೂ ಗಳನ್ನು ಬ್ಯಾಂಕ್​ ಕಟ್ಟಿಲ್ಲ. ಇದರಲ್ಲಿ 1,880/- ರೂ ಗಳನ್ನು ಡ್ರಾವರ್ ನಲಿ ಬಿಟ್ಟು ಉಳಿದ 2.68,329 ರೂಪಾಯಿಯನ್ನು ತೆ್ಗೆದುಕೊಂಡು ಹೋಗಿದ್ದಾನೆ. ಈ ಸಂಬಂಧ ಆತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು,.IPC 1860 (U/s-420) ಅಡಿಯಲ್ಲಿ ಕೇಸ್​ ದಾಖಲಾಗಿದೆ. 


ಶಿರಾಳಕೊಪ್ಪದ ಸಾಮಿಲ್​ನಲ್ಲಿದ್ದ ಒಂಟೆಯನ್ನು ರಕ್ಷಿಸಿದ ದೆಹಲಿಯಿಂದ ಬಂದ ಇಮೇಲ್! 3-4 ರಾಜ್ಯ ದಾಟಿ ಬಂದ ಕಥೆ!

ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಬಕ್ರೀದ್ ಹಬ್ಬಕ್ಕಾಗಿ ತರಿಸಲಾಗಿದ್ದ ಒಂಟೆಯನ್ನು ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ಪೊಲೀಸರು ರಕ್ಷಿಸಿದ್ಧಾರೆ. ಮುಖ್ಯವಾಗಿ ಈ ರಕ್ಷಣಾ ಕಾರ್ಯಾಚರಣೆ ಹಿಂದೇ ಒಂದು ಇಮೇಲ್ ಕೆಲಸ ಮಾಡಿದೆ. 

ಏನಿದು ಪ್ರಕರಣ?

ಮೂರು ನಾಲ್ಕು ರಾಜ್ಯಗಳನ್ನ ದಾಟಿಸಿಕೊಂಡು ಒಂಟೆಯನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪಕ್ಕೆ ತರಲಾಗಿತ್ತು. ಆದಾಗ್ಯು ಶಿವಮೊಗ್ಗ ಪೊಲೀಸರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಈ ಮಧ್ಯೆ ಒಂಟೆಯ ನಿಖರ ಸ್ಥಳದ ಜೊತೆಗೆ ವ್ಯಕ್ತಿಯೊಬ್ಬರು ದೆಹಲಿಯಿಂದ ಇಮೇಲ್ ಮಾಡಿದ್ದಾರೆ. ಶಿರಾಳಕೊಪ್ಪ ಪೊಲೀಸರು ಇಮೇಲ್ ದೂರು ನೋಡುತ್ತಿದ್ದಂತೆ ಶಾಕ್​ ಆಗಿದ್ದಾರೆ. ಅಲ್ಲದೆ ತಕ್ಷಣವೇ ಮೇಲಾಧಿಕಾರಿಗಳಿಗೆ ತಿಳಿಸಿ ರೇಡ್ ಮಾಡಿದ್ದಾರೆ.  

ಸಾಮಿಲ್​ನಲ್ಲಿತ್ತು ಒಂಟೆ

ಪೊಲೀಸರಿಗೆ ಇಮೇಲ್​ನಲ್ಲಿಯೇ ಸ್ಥಳ ಹಾಗೂ ವಿವರ ಸಿಕ್ಕಿದ್ದರಿಂದ ಅನುಕೂಲವಾಗಿತ್ತು. ಇನ್ನೂ ಶಿರಾಳಕೊಪ್ಪದ ಪಟ್ಟಣದಲ್ಲಿರುವ ಸೈಯ್ಯದ್​ ಬಿಲಾಲ್ ಎಂಬವರಿಗೆ ಸೇರಿದ್ದ ಸಾಮಿಲ್​ನಲ್ಲಿ ಒಂಟೆಯನ್ನು ಕಟ್ಟಿಹಾಕಲಾಗಿತ್ತು. ದಾಳಿ ನಡೆಸಿದ ಪೊಲೀಸರು ಒಂಟೆಯನ್ನು ವಶಕ್ಕೆ ಪಡೆದುಕೊಂಡು  ಪ್ರಾಣಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

ವಿಶೇಷ ಅಂದರೆ, ಬಿಲಾಲ್​ರ ಮೇಲೆ ಈ ಹಿಂದೆ ಜಿಂಕೆ ಮರಿಯನ್ನು ತನ್ನ ಸಾಮಿಲ್​ನಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಆ ಬಗ್ಗೆಯು ಪ್ರಕರಣ ದಾಖಲಾಗಿತ್ತು. ಇದೀಗ ಒಂಟೆಯನ್ನು ಅಕ್ರಮವಾಗಿ ಇರಿಸಿಕೊಂಡ ಪ್ರಕರಣ ದಾಖಲಾಗಿದೆ. 

 


 

Share This Article