ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ !

See how naxal leaders are now, exclusive photos

ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ !
See how naxal leaders are now, exclusive photos!

ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ ! ಕೇರಳ, ತಮಿಳು ನಾಡು ಪೊಲೀಸರ ಮುಂದಿನ ಬೇಟೆ ಯಾರು ಗೊತ್ತಾ? ಶಿವಮೊಗ್ಗ ಪೊಲೀಸ್​ರ ಮುಂದಿನ ಕ್ರಮವೇನು?ಒಂದು ಕಾಲವಿತ್ತು ಶಿವಮೊಗ್ಗ ವನ್ನ ನಕ್ಸಲ್​ ರ ಕಾರ್ಖಾನೆ ಅಂತಾ ಕರೆಯಲಾಗಿತ್ತು. ಹಾಗಿದ್ದ ನಕ್ಸಲ್​ ಚಟುವಟಿಕೆಯ ನಡು ಮುರಿದಿದ್ದು ಎಸ್​ಪಿ ಮುರುಗನ್​ ಸಮಯದಲ್ಲಿ ..ಆ ನಂತರ ಮಲೆನಾಡ ಘಟ್ಟ ಪ್ರದೇಶಗಳಿಂದ ಕ್ರಮೇಣವಾಗಿ ಕಣ್ಮರೆಯಾದ ನಕ್ಸಲ್​ರು ಬೇರೆ ಬೇರೆ ಕಡೆಗಳಲ್ಲಿ ತೆರಳಿದರು.ಜನರ ಸಹಕಾರವೂ ಸಿಗದೇ ಹಾಗೂ ತಮ್ಮನ್ನ ಬೆಂಬಲಿಸಿದವರ ಪೈಕಿ, ಕೆಲವರ ಒಳಪೆಟ್ಟಿನಿಂದ ಮೋಸಗಳಿಂದಾಗಿ ತಮ್ಮ ಸಿದ್ಧಾಂತಗಳ ಹೋರಾಟದಲ್ಲಿ ಏಕಾಂಗಿಯಾದ ಮುಖಂಡರ ಪೈಕಿ ಹಲವರು ಶರಣಾದರು.ಮತ್ತೆ ಕೆಲವರು ಎನ್​ಕೌಂಟರ್​ ಭಯದಲ್ಲಿ ತೆರೆಮರೆಯಲ್ಲಿಯೇ ಜೀವನ ಸಾಗಿಸುತ್ತಿದ್ದರು. ಆದಾಗ್ಯು ಪೊಲೀಸ್​ ವ್ಯವಸ್ಥೆ ಅಡಿಯಲ್ಲಿ ಕೆಲ ನಕ್ಸಲ್​ರನ್ನು ಹಿಡಿಯುವುದು ಕಷ್ಟವಾಗಿತ್ತು.

ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ !

ಯಾಕೆಂದರೆ, ಯವ್ವನದ ಕಾಲದಲ್ಲಿಯೇ ಕಾಡು ಸೇರಿದ್ದ ವರು, ಈಗ ಹೇಗಿದ್ದಾರೆ ಎನ್ನುವುದು ತಿಳಿಯದೇ ಪೊಲೀಸರು ಆರೋಪಿಗಳನ್ನ ಹಿಡಿಯುವುದು ಕಷ್ಟವಾಗಿತ್ತು. ಇನ್ನೂ ಕೇರಳ ಹಾಗೂ ತಮಿಳುನಾಡು ಪೊಲೀಸರು ನಕ್ಸಲ್​ ವಿಚಾರದಲ್ಲಿ ಅಗ್ರೆಸಿವ್​ ಮೂಮೆಂಟ್ ಕಳೆದೊಂದು ವರ್ಷದಿಂದ ತೋರುತ್ತಿದೆ.ಇದರ ಪರಿಣಾಮವಾಗಿ ನಕ್ಸಲ್​ ನಾಯಕ ಬಿಜಿ ಕೃಷ್ಣಮೂರ್ತಿ, ಸಾವಿತ್ರಿ ಸೆರೆಸಿಕ್ಕಿದ್ದರು.ಯಾವಾಗ ಬಿಜಿ ಕೃಷ್ಣಮೂರ್ತಿ ಸೆರೆಯಾದ ಬೆನ್ನಲ್ಲೇ ಇದೀಗ ಆತನ ಪತ್ನಿ ಹೊಸಗದ್ದೆ ಪ್ರಭಾ ಕೂಡ ನಿನ್ನೆ ತಮಿಳುನಾಡು ಪೊಲೀಸರು ಶರಣಾಗಿದ್ದಾರೆ.ಇಷ್ಟಕ್ಕೂ ಅಂದು ತಮ್ಮ ಮೇಲೆ ಬಹುಮಾನದ ಘೋಷಣೆ ಯನ್ನ ಪೊಲೀಸರಿಂದ ಮಾಡಿಸಿಕೊಂಡಿದ್ದ ನಕ್ಸಲ್​​ರ ಈಗ ಹೇಗಿದ್ದಾರೆ ಎನ್ನುವ ಫೋಟೋಗಳು ಮಲೆನಾಡು ಟುಡೇ ಗೆ ಲಭ್ಯವಾಗಿದೆ.

ಕೇರಳ, ತಮಿಳು ನಾಡು ಪೊಲೀಸರ ಮುಂದಿನ ಬೇಟೆ ಯಾರು ಗೊತ್ತಾ? ಶಿವಮೊಗ್ಗ ಪೊಲೀಸ್​ ರ ಮುಂದಿನ ಕ್ರಮವೇನು?

ಕಬಿನಿ ಹಾಗೂ ತುಂಗಾ ಟೀಂನಲ್ಲಿದ್ದ ನಕ್ಸಲ್​ ರನ್ನ ಪೊಲೀಸರು ಒಬ್ಬೊಬ್ಬರನ್ನಾಗಿಯೇ ಲಿಫ್ಟ್ ಮಾಡುತ್ತಿದ್ದಾರೆ. ಇದೀಗ ಕೇರಳ , ತಮಿಳುನಾಡು ಪೊಲೀಸರ ಮುಂದಿನ ಬೇಟೆ ಯಾರು ಎನ್ನುವ ಪ್ರಶ್ನೆ ಕೇಳಿಬರುತ್ತಿದೆ.ಇದಕ್ಕೆ ಉತ್ತರಗಳು ವಿಕ್ರಂಗೌಡ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ವಿಕ್ರಂ ಗೌಡನ ಶರಣಾಗತಿ ಕಷ್ಟ ಎನ್ನಲಾಗುತ್ತಿದೆ.ಆತನ ಪತ್ತೆಗಾಗಿ ಬಲೆ ಬೀಸಿರುವ ಪೊಲೀಸರು, ಸದ್ಯದಲ್ಲಿಯೇ ಬಂಧಿಸುವ ವಿಶ್ವಾಸ ದಲ್ಲಿದ್ದಾರೆ.

ಶಿವಮೊಗ್ಗ ಪೊಲೀಸ್​ ರ ಮುಂದಿನ ಕ್ರಮವೇನು?

ಇನ್ನೂ ಸದ್ಯ ಸೆರೆ ಸಿಕ್ಕಿರುವ ನಕ್ಸಲ್​ ನಾಯಕರು, ಶಿವಮೊಗ್ಗ ಪೊಲೀಸ್​ ಇಲಾಖೆ ವ್ಯಾಪ್ತಿಯಲ್ಲಿ ಮೋಸ್ಟ್​ ವಾಂಟೆಡ್ ಲಿಸ್ಟ್​ ನಲ್ಲಿ ಇರುವವರು. ಆದ್ದರಿಂದ ಕೇರಳ ಹಾಗೂ ತಮಿಳು ನಾಡು ಪೊಲೀಸ್​ ವಶದಲ್ಲಿರುವ ಆರೋಪಿಗಳನ್ನ ಶಿವಮೊಗ್ಗ ಪೊಲೀಸ್​ ಇಲಾಖೆ ಕರೆದುಕೊಂಡು ಬಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ.ಇದಕ್ಕಾಗಿ ಈಗಾಗಲೇ ಪ್ರಕ್ರಿಯೇಯನ್ನ ಆರಂಭಿಸಲಾಗಿದೆ.ಹೊಸಗದ್ದೆ ಪ್ರಭಾ ವಿರುದ್ಧವೇ 40 ಕ್ಕೂ ಹೆಚ್ಚು ಪ್ರಕರಣಗಳಿದ್ದು, ಆರೋಪಿಗಳನ್ನ ಬಾಡಿ ವಾರೆಂಟ್​ ಮೂಲಕ ಕರೆತಂದು ಕೋರ್ಟ್​ಗಳಿಗೆ ಹಾಜರು ಪಡಿಸುವ ಸಂಬಂಧ ಇಲಾಖೆ ಕೆಲಸ ಆರಂಭಿಸಿದ