ಪತ್ರಕರ್ತ, ಮೇಷ್ಟ್ರು! ಸಿವಿಆರ್ ಇನ್ನಿಲ್ಲ!

ajjimane ganesh

ನವೆಂಬರ್ 24,  2025 : ಮಲೆನಾಡು ಟುಡೆ :  ಹಿರಿಯ ಪತ್ರಕರ್ತ, ಶಿಕ್ಷಕ ಸಿ.ವಿ.ರಾಘವೇಂದ್ರ ರಾವ್ ನಿಧನರಾಗಿದ್ದಾರೆ. ನಿನ್ನೆ ಭಾನುವಾರ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. 

ಶಿವಮೊಗ್ಗ ನಗರದ ಮೇದಾರ ಕೇರಿಯಲ್ಲಿ ವಾಸವಾಗಿದ್ದ ರಾಘವೇಂದ್ರ ರಾವ್ ಅವರು ಪತ್ರಿಕೋದ್ಯಮ ಮತ್ತು ಬೋಧನಾ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜೆಪಿಎಸ್​ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ಬಳಿಕ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಹಲವು ವರ್ಷಗಳ ಕಾಲ ವರದಿಗಾರರಾಗಿ ಕೆಲಸ ಮಾಡಿದ್ದರು. 

Senior Journalist CV Raghavendra Rao (81) Passes Away in Bengaluru
Senior Journalist CV Raghavendra Rao (81) Passes Away in Bengaluru

ವೆಂಕ, ನಾಣಿ, ಸೀನಾ! ಕಾಂಗ್ರೆಸ್ಸೆ ಕೊನೆಯಾಗುತ್ತೆ!? ಡಿಕೆಶಿಗೆ ವಿರೋಧ, ಸಿಎಂ ಮೇಲೆ ಕಳಕಳಿ! ಶಿವಮೊಗ್ಗದಲ್ಲಿ ರಾಜಕಾರಣದ ಲೇಟೆಸ್ಟ್ ಮಾತು ಓದಿ

SUNCONTROL_FINAL-scaled

ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿರುವ ಪ್ರಸಿದ್ಧ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು. ಮಠದ ಅಭಿವೃದ್ಧಿ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸಿವಿಆರ್ ಅಂತಲೇ ಕರೆಸಿಕೊಳ್ಳುತ್ತಿದ್ದರು. ಜಿಲ್ಲೆ ರಾಜಕಾರಣ ವಲಯದಲ್ಲಿಯು ಪರಿಚಿತರಾಗಿದ್ದ ಇವರು ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಕುಟುಂಬದ ಮೂಲಗಳ ಪ್ರಕಾರ, ಸಿ.ವಿ. ರಾಘವೇಂದ್ರ ರಾವ್ ಅವರು ನಿನ್ನೆ ಬೆಳಗ್ಗೆ 8 ಗಂಟೆಯ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  ಮೃತರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

SUNCONTROL_FINAL-scaled
Senior Journalist CV Raghavendra Rao (81) Passes Away in Bengaluru
Senior Journalist CV Raghavendra Rao (81) Passes Away in Bengaluru

ಚಳ್ಳಕೆರೆ ಬಳಿ ಲಾರಿಗೆ ಕಾರು ಡಿಕ್ಕಿ! ಬಳ್ಳಾರಿಗೆ ಹೋಗುತ್ತಿದ್ದ ಶಿವಮೊಗ್ಗದ ಮೂವರಿಗೆ ಪೆಟ್ಟು! ಓರ್ವ ಸಾವು

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Senior Journalist CV Raghavendra Rao (81) Passes Away in Bengaluru

Share This Article