ಮರಾಠಿಕ್ಯಾಂಪ್​ ಬಳಿಕ ಮಳಲಿಕೊಪ್ಪ ನಜ್ರು ಅರೆಸ್ಟ್! ಮನೆ ಹಿತ್ತಲಲ್ಲಿಯೇ ನಡೆಸಿದ್ದ ಗಾಂಜಾ ಕೃಷಿ! ಲಕ್ಷ ಮೌಲ್ಯದ ಮಾಲು ಸೀಜ್​!

Malenadu Today

SHIVAMOGGA  |  Dec 29, 2023  |  ಮನೆ ಹಿತ್ತಲಲ್ಲಿ ಗಾಂಜಾ ಕೃಷಿ ಮಾಡ್ತಿದ್ದವನನ್ನ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗದಲ್ಲಿ ಈ ಹಿಂದೇ ಎಸ್​ಪಿ ಲಕ್ಷ್ಮೀಪ್ರಸಾದ್​ ಜಿಲ್ಲೆಗೆ ಬರುತ್ತಿದ್ದ ಗಾಂಜಾ ಮಾಲನ್ನ ಲೋಡ್​ ಗಟ್ಟಲೇ ಸೀಜ್​ ಮಾಡಿದ್ದರು. ಅವರ ನಂತರ ಬಂದ ಎಸ್​ಪಿ ಮಿಥುನ್ ಕುಮಾರ್​ ಕೂಡ ಮಾದಕವಸ್ತುಗಳ ವಿಚಾರದಲ್ಲಿ ಜಿರೋ ಟಾಲರೆನ್ಸ್ ಎಂದಿದ್ದಾರೆ. ಈ ನಡುವೆ ಗಾಂಜಾ ಪ್ರಕರಣಗಳು ಕಡಿಮೆಯಾದರೂ ಇತ್ತೀಚೆಗೆ ಮಾದಕವಸ್ತುಗಳನ್ನ ಪೊಲೀಸರು ಜಪ್ತು ಮಾಡಿ ರೋಡ್​ ಸೈಡ್​ನಲ್ಲಿ ಮಾರಾಟ ಮಾಡುವ ಆರೋಪಿಗಳನ್ನ ಅರೆಸ್ಟ್ ಮಾಡುತ್ತಿದ್ದಾರೆ. ಈ ವಾರದಲ್ಲಿಯೇ ತುಂಗಾನಗರ ಪೊಲೀಸರು ಎರಡು ಕೇಸ್ ಹಿಡಿದಿದ್ದಾರೆ. 

READ: ಮನೆಯವರು ಸೇರಿಸಿದರೂ, ಊರವರ ಬಹಿಷ್ಕಾರ! ಪ್ರೀತಿಸಿ ಮದುವೆಯಾದವರಿಗೆ ಪೊಲೀಸರ ಕಾವಲು! ಏನಿದು ಸ್ಟೋರಿ!

ಮರಾಠಿಕ್ಯಾಂಪ್​ನ ಯುವಕನನ್ನ ಅರೆಸ್ಟ್​ ಮಾಡಿದ್ದ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಇದೀಗ ಮನೆ ಹಿತ್ತಲಲ್ಲಿ ಗಾಂಜಾ ಬೆಳದಿದ್ದ ಆರೋಪಿಯನ್ನ ಮಾಲು ಸಮೇತ ಹಿಡಿದ್ದಿದ್ದಾರೆ.  ದಿನಾಂಕ  28-12-2023 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದ ವಾಸಿ ನಜರತ್ ನು ತನ್ನ ಮನೆಯ ಹಿಂಬದಿ ಜಾಗದಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನ ಬೆಳಸ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. 

ಈ ಸಂಬಂಧ  ತುಂಗಾ ನಗರ ಪೊಲೀಸ್ ಠಾಣೆ  ಸಿಬ್ಬಂದಿಗಳ ತಂಡವು ರೇಡ್ ನಡೆಸಿದೆ. ಅಲ್ಲದೆ ನಜರತ್ @ ನಜ್ರು ವನ್ನ ಅರೆಸ್ಟ್ ಮಾಡಿದ್ದು,  ಅಂದಾಜು ಮೌಲ್ಯ 1,20,00/- ರೂ ಗಳ 12 ಕೆಜಿ 350 ಗ್ರಾಂ ತೂಕದ ಹಸಿ ಗಾಂಜಾ ಗಿಡವನ್ನು ಜಪ್ತು ಮಾಡಿದ್ದಾರೆ.  ಮಳಲಿಕೊಪ್ಪ ಗ್ರಾಮದ ನಿವಾಸಿ ನಜ್ರು ವಿರುದ್ಧ ಕಲಂ 8(ಬಿ), 20 (ಎ)(i), 25 NDPS ಕಾಯ್ದೆ ಅಡಿ ಕೇಸ್ ದಾಖಲಾಗಿದೆ. 

Share This Article