ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಲು ಬೈಕ್​ನಲ್ಲಿ ತೆರಳುತ್ತಿದ್ದ ಯುವತಿಗೆ ಕಾದಿತ್ತು ಶಾಕ್​

prathapa thirthahalli
Prathapa thirthahalli - content producer

ಶಿವಮೊಗ್ಗ : ಶಿವಮೊಗ್ಗದ ಪೇಪರ್​ ಪ್ಯಾಕ್ಟರಿಯ ಶಾರದ ನಗರದ ಯುವತಿಯೊಬ್ಬರು ತಮ್ಮ ಸ್ಕೂಟಿಯಲ್ಲಿ ಸಂಘದ ಹಣ ಕಟ್ಟಲು ತೆರಳುತ್ತಿದ್ದ ವೇಳೆ ಕಳ್ಳನೊಬ್ಬ ಯುವತಿಯ ಬಂಗಾರದ ಸರವನ್ನು ಎಳೆದು ಕದ್ದೊಯ್ದಿದ್ದಾನೆ.

ಯುವತಿಯೊಬ್ಬರು ಧರ್ಮಸ್ಥಳ ಸಂಘದ ಹಣವನ್ನು ಕಟ್ಟಲು ಬೆಳಿಗ್ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಆವೇಳೆ ಹಿಂದಿನಿಂದ ಬೈಕ್​ನಲ್ಲಿ ಬಂದ ಕಳ್ಳ ಯುವತಿಯ ಕೊರಳಲ್ಲಿದ್ದ 9 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಕದ್ದೊಯ್ದಿದ್ದಾನೆ. ಇದರಿಂದ ಮಹಿಳೆ ಬೈಕ್​ನಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದು ಏಳುವಷ್ಟರಲ್ಲಿ  ಕಳ್ಳ ಸರವನ್ನು ಕದ್ದೊಯ್ದಿದ್ದಾನೆ.  ಈ ಹಿನ್ನೆಲೆ ಮಹಿಳೆ ಶಿವಮೊಗ್ಗದ ತುಂಗಾ ನಗರ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

Shivamogga Chain Snatching

 

Share This Article