ಸಾಲದ ವಿಚಾರ : ಮನನೊಂದು ದಂಪತಿ ಆತ್ಮಹತ್ಯೆ

prathapa thirthahalli
Prathapa thirthahalli - content producer

Malur police station 

ಮನೆ  ನಿರ್ಮಾಣ ಮಾಡಲು ಸಾಲ ಏಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಮನನೊಂದು ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಳೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಂಡ ನಾಯ್ಕ್​ (72) ಹಾಗೂ ಲಕ್ಷಮ್ಮ (58) ಮೃತ ದಂಪತಿಗಳು

ತೀರ್ಥಹಳ್ಳಿ ತಾಲೂಕಿನ ಬಿಳುವೆ ಗ್ರಾಮದ ಕಣಬೂರು ಸಮೀಪದ ಹಲ್ಯಾಪುರ ಎಂಬಲ್ಲಿ ದಂಪತಿಗಳು ಮನೆಯೊಂದನ್ನು ನಿರ್ಮಾಣ ಮಾಡುತ್ತಿದ್ದರು, ಈ ಮನೆಗೆ ಸ್ಲ್ಯಾಬ್​ನ್ನು ಸಹ ಹಾಕಲಾಗಿತ್ತು. ಈ ಮನೆ ನಿರ್ಮಾಣ ಮಾಡಲು ದಂಪತಿಗಳು ಸಾಲವನ್ನು ಮಾಡಿದ್ದರು. ಇದರಿಂದಾಗಿ ಮನೆಯವರು ಏಕೆ ಸಾಲ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೆ ಮನನೊಂದು ಕಾಡಿನಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮಾಳೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article