SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 25, 2024
ಶಿವಮೊಗ್ಗ | ಶ್ರೀರಾಮನ ಆದರ್ಶ ಪ್ರವಚನ ಹಾಗೂ ಅನುಗ್ರಹ ಸಂದೇಶ ಕಾರ್ಯಕ್ರಮ ಡಿ. 31 ರಿಂದ ಜನವರಿ 2 ರವರೆಗೆ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಶುಭ ಮಂಗಳದ ಸಮುದಾಯ ಭವನದಲ್ಲಿ ಸಂಜೆ 6:30 ರಿಂದ 8 ರವರೆಗೆ ನಡೆಯಲಿದೆ. ಈ ಕುರಿತು ಉಪನ್ಯಾಸಕರಾದ ಡಾ ಮೈತ್ರಿ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಶ್ರೀಗಂಧ ಸಾಂಸ್ಕ್ರತಿಕ ಸಂಸ್ಥೆಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಸಂಸ್ಥೆ ಸದ್ಭಾವ, ಸದ್ವಿಚಾರ, ಸದಭಿರುಚಿ ಮತ್ತು ಸತ್ಕಾರ್ಯಗಳನ್ನೊಳಗೊಂಡ ಕಾರ್ಯಕ್ರಮದ ಮೂಲಕ ನಗರದ ಜನರಲ್ಲಿ ತನ್ನದೇ ಆದ ಅಭಿಮಾನವನನ್ನು ಹೊಂದಿದೆ. ನಾವು ಈ ಕಾರ್ಯಕ್ರಮವನ್ನು ಡಿಸೆಂಬರ್ 31 ರಂದು ಇಟ್ಟುಕೊಳ್ಳಲು ಮುಖ್ಯ ಕಾರಣ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವುದರ ಮೂಲಕ ಹೊಸವರ್ಷವನ್ನು ಆಚರಿಸಿಕೊಳ್ಳೋಣ ಎಂಬುದು ಎಂದರು.

ಈ ಕಾರ್ಯಕ್ರಮ 3 ದಿನಗಳ ಕಾಲ ಸಂಜೆ 6:30 ರಿಂದ 8 ಗಂಟೆಯ ವರೆಗೆ ನಡೆಯುತ್ತದೆ. ಹಾಗೆಯೇ ಈ ಕಾರ್ಯಕ್ರಮದಲ್ಲಿ ಶ್ರೀ ರಾಮನ ಆದರ್ಶ ಪ್ರವಚನ ಹಾಗೂ ಅನುಗ್ರಹ ಸಂದೇಶ ಕಾರ್ಯಕ್ರಮವನ್ನು ಶ್ರೀ 1008 ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ 6:30 ಕ್ಕೆ ಆರಂಭವಾದರೆ ಇದಕ್ಕೂ ಮೊದಲು 6 ಗಂಟೆಗೆ ಸನಾತನ ಧರ್ಮದ ಸಾರ ಎಂಬ ಚರ್ಚೆಯನ್ನು ಇಟ್ಟುಕೊಂಡಿದ್ದೇವೆ. ಈ ಚರ್ಚಾ ಕಾರ್ಯಕ್ರಮವನ್ನು ಪಂಡಿತ ಶ್ರೀ ನವರತ್ನ ಶ್ರೀನಿವಾಸ ಆಚಾರ್ ಶ್ರೀರಘೋತ್ತಮಾಚಾರ್ ಸಂಡೂರು, ಶ್ರೀ ರಾಯಚೂರು ಕೃಷ್ಣಚಾರ್ ನಡೆಸಿಕೊಡಲಿದ್ದಾರೆ ಎಂದರು.
ಈ ಹಿಂದೆ ಶ್ರೀಗಂಧದ ಕಾರ್ಯಕ್ರಮಗಳಲ್ಲಿ ಶ್ರೀಗಳು ಭಾಗವಹಿಸಿ ಪ್ರವಚನ ನೀಡಿದ್ದರು. ಅದು ಯಶಸ್ವಿಯು ಆಗಿತ್ತು. ಅದರಂತೆ ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಕೆ. ಎಸ್ ಈಶ್ವರಪ್ಪನವರು ಹಾಗೂ ಶ್ರೀ ಕೆ.ಈ ಕಾಂತೇಶ್ ಅವರ ಮನವಿ ಮೇರೆಗೆ ಈ ಬಾರಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದರು.
SUMMARY | Sri Rama’s Adarsh Discourse and Anugraha Sandesha Programme d. The event will be held from January 31 to January 2 at Shubhamangala Community Hall in the city from 6.30 pm to 8 pm.
KEYWORDS | Sri Rama, Shubhamangala Community Hall, shivamogga,