SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 19, 2024
ಶಿವಮೊಗ್ಗ |ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಮತ್ತೊಂದು ಬ್ರಿಗೇಡ್ ಸ್ಥಾಪನೆಗೆ ಮುಂದಾಗಿದ್ದಾರೆ. ಮುಂದಿನ ವರುಷದ ಫೆಬ್ರವರಿ 04 ರಂದು ಕ್ರಾಂತಿವೀರ ಬ್ರಿಗೇಡ್ ಅನ್ನು ಬಸವನ ಬಾಗೇವಾಡಿಯಲ್ಲಿ ಸಾಧು ಸಂತರ ನೇತೃತ್ವದಲ್ಲಿ ಉದ್ಘಾಟಿಸಲಿದ್ದೇವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪನವರು ಘೋಷಿಸಿದ್ದಾರೆ.
ಮುಂದಿನ ವರುಷ ರಥಸಪ್ತಮಿಯ ದಿನದಂದು ಕ್ರಾಂತಿವೀರ ಬ್ರಿಗೇಡ್ ನ್ನು ಬಸವಣ್ಣ ನವರ ಜನ್ಮಸ್ಥಳವಾದ ಬಸವನಬಾಗೇವಾಡಿ ಯಲ್ಲಿ ಉದ್ಘಾಟಿಸಲಾಗುವುದು. 1 ಸಾವಿರಕ್ಕೂಹೆಚ್ಚು ಸಾಧು-ಸಂತರ ಸಮ್ಮುಖದಲ್ಲಿ ಸಾಮೂಹಿಕ ಪೂಜೆ ಜೊತೆಗೆ ಒಂದು ಲಕ್ಷ ಜನರ ಸಮ್ಮುಖದಲ್ಲಿ ಬ್ರಿಗೇಡ್ ಸ್ಥಾಪಿಸಲಾಗುವುದು ಎಂದರು

ಈ ಸಮಾರಂಭಕ್ಕೆ ಪೂರ್ವತಯಾರಿ ಕೂಡ ನಡೆದಿದೆ. ಡಿಸೆಂಬರ್ 02 ರಂದು ಹುಬ್ಬಳ್ಳಿಯಲ್ಲಿ ಬ್ರಿಗೇಡ್ ಸಮಿತಿ ಸಭೆ ನಡೆಯಲಿದೆ. ಮಾರ್ಗದರ್ಶಕರ ತಂಡ ಕೂಡ ರಚನೆಯಾಗಿದ್ದು, ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ವಿವರಿಸಿದರು. ಸಭೆಯಲ್ಲಿ ಮಠ, ಮಂದಿರಗಳ ಶಾಲಾ, ಕಾಲೇಜುಗಳ ರೈತರ ಜಮೀನುಗಳನ್ನು ವಕ್ಸ್ ಆಸ್ತಿಗೆ ಸೇರಿಸಲು ಹೊರಟಿರುವುದನ್ನು ಖಂಡಿಸಿ ಕೂಡಲೇ ಅದನ್ನು ರದ್ದುಗೊಳಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದ ಕೆಎಸ್ ಈಶ್ವರಪ್ಪ ಮುಖ್ಯ ಮಂತ್ರಿಗಳು ಕೇವಲ ಹೇಳಿಕೆ ನೀಡಿದರೆ ಸಾಲದು, ಪಹಣಿಯಲ್ಲಿ ಇರುವ ವಕ್ಫ್ ಎಂಬ ಶಬ್ದವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಲಾಗುವುದು ಎಂದರು.
SUMMARY| |Former Deputy CM Eshwarappa said that the Krantiveera Brigade will be inaugurated on February 04 at Basavana Bagewadi under the leadership of sadhus and saints.
KEYWORDS| Eshwarappa, Basavana Bagewadi,Krantiveera Brigade, shivamogga